Download Our App

Follow us

Home » ಸಿನಿಮಾ » ನನಗೆ ಮಗು ಮಾಡಿಕೊಳ್ಳೋ ಆಸೆಯಿದೆ – ತಮ್ಮ ಕನಸನ್ನ ಬಿಚ್ಚಿಟ್ಟ ತನಿಷಾ ಕುಪ್ಪಂಡ..!

ನನಗೆ ಮಗು ಮಾಡಿಕೊಳ್ಳೋ ಆಸೆಯಿದೆ – ತಮ್ಮ ಕನಸನ್ನ ಬಿಚ್ಚಿಟ್ಟ ತನಿಷಾ ಕುಪ್ಪಂಡ..!

ಬಿಗ್ ಬಾಸ್‘ ಕನ್ನಡ ಸೀಸನ್ 10 ರಿಯಾಲಿಟಿ ಶೋ ಮೂಲಕ ಹೆಚ್ಚು ಪ್ರಸಿದ್ಧಿಗೆ ಬಂದವರು ನಟ ತನಿಷಾ ಕುಪ್ಪಂಡ. ‘ಬಿಗ್ ಬಾಸ್‌’ ಮನೆಯಲ್ಲಿನ ಇವರ ಆಟಿಟ್ಯೂಡ್ ಕಂಡವರು, ‘ಬೆಂಕಿ’ ಅಂತಲೇ ಇವರನ್ನು ಕರೆಯುತ್ತಿದ್ದರು. ಇದೀಗ ಬೆಂಕಿ ತನಿಷಾ ಕುಪ್ಪಂಡ ಸಂದರ್ಶನವೊಂದರಲ್ಲಿ ಮದುವೆ, ಮಗುವಿನ ಕನಸಿನ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹೌದು, ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಅವರು, ನನಗೆ  ಮಗು ಮಾಡಿಕೊಳ್ಳುವ ಆಸೆ ಹುಟ್ಟಿದ್ದು ತುಂಬಾ ಚಿಕ್ಕ ವಯಸ್ಸಿನಲ್ಲಿ. ಕಾಲೇಜಿನಲ್ಲಿ ಇರುವಾಗಲೇ ಈ ಆಸೆ ಹುಟ್ಟಿತ್ತು. ಆಗ ರಿಲೇಷನ್​ನಲ್ಲಿಯೂ ಇದ್ದೆ. ನನಗೆ ಮಗು ಮಾಡಿಕೊಳ್ಳುವ ಆಸೆ ಇಂದಿಗೂ ತುಂಬಾ ಇದೆ. ನನಗೆ ಮದುವೆಯಾಗುವ ಆಸೆ ಇದೆ. ಆದರೆ ಅದು ಯಾವಾಗ ಎಂದು ಗೊತ್ತಿಲ್ಲ. ದೇವರು ಯಾವಾಗ ಕೊಡ್ತಾನೋ ಆವಾಗ, ಅದು ಈ ವರ್ಷವೂ ಆಗಿರಬಹುದು, ಮುಂದೆ ಯಾವಾಗ್ಲೂ ಇರಬಹುದು. ಒಟ್ಟಿನಲ್ಲಿ ಮದುವೆಯಾಗಬೇಕು, ಮಕ್ಕಳನ್ನು ಮಾಡಿಕೊಳ್ಳಬೇಕು, ತಾಯ್ತನ ಅನುಭವಿಸಬೇಕು ಎನ್ನುವ ಆಸೆ ಇದೆ ಎಂದು ತನಿಷಾ ತಮ್ಮ ಆಸೆಯನ್ನು ತೆರೆದಿಟ್ಟಿದ್ದಾರೆ.

ಮದುವೆ, ಮನೆ, ಸಂಸಾರ ಎನ್ನುವುದು ನನಗೆ ತುಂಬಾ ಖುಷಿ. ಅಮ್ಮಾ ಎನಿಸಿಕೊಳ್ಳಬೇಕು ಎನಿಸುತ್ತಿದೆ. ನನ್ನನ್ನು ನನಗಿಂತಲೂ ಚೆನ್ನಾಗಿ ಯಾರಾದರೂ ನೋಡಿಕೊಳ್ಳುವವರು ಇದ್ದರೆ ನಾನು ಮದುವೆಯಾಗಲು ರೆಡಿ ಇದ್ದೇನೆ. ಗೃಹಿಣಿಯಾಗಿ ಬಾಳಬೇಕು. ಮಕ್ಕಳನ್ನು ಮಾಡಿಕೊಂಡು ಅವರಿಗೆ ರೆಡಿ ಮಾಡಿ ಕಳುಹಿಸಬೇಕು ಎಂದಿರುವ ನಟಿ, ನನ್ನ ಅಮ್ಮನೇ ನನಗೆ ಸರ್ವಸ್ವ. ಆದ್ದರಿಂದ ನನ್ನ ಅಮ್ಮನ ಜೊತೆ ಇರುವವರು ಇದ್ದರೆ ತುಂಬಾ ಒಳ್ಳೆಯದು. ಅದನ್ನು ಬಿಟ್ಟರೆ, ಬೇರೇನೂ ಆಸೆ ಇಲ್ಲ ಎಂದು ತಿಳಿಸಿದ್ದಾರೆ.

ಇನ್ನು ತನಿಷಾ ಕುಪ್ಪಂಡ ಅವರು ಸಿನಿಜಗತ್ತಿನಲ್ಲಿ ಎಷ್ಟೇ ಕಲರ್ಫುಲ್‌ ಆಗಿದ್ದರೂ ಸಹ, ಪ್ರೀತಿ ವಿಚಾರದಲ್ಲಿ ಬಹಳಷ್ಟು ನೋವನ್ನು ಅನುಭವಿಸಿದವರು. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತನಿಷಾ ಒಬ್ಬರನ್ನು ಪ್ರೀತಿಸಿದ್ದರು. ಅವರನ್ನೇ ಮದುವೆಯಾಗುವ ಪ್ಲಾನ್‌ ಕೂಡ ಮಾಡಿದ್ದರು. ಆದರೆ ಆತ ‘ನಿನಗೆ ನಾನು ಮುಖ್ಯನಾ? ಧಾರಾವಾಹಿ ಮುಖ್ಯನಾ?’ ಎಂದು ಪ್ರಶ್ನೆಯಿಟ್ಟಿದ್ದ. ಕೊನೆಗೆ ಆತನಿಗಾಗಿ ನಟನೆಯನ್ನೇ ಬಿಟ್ಟರು. ಅವನೇ ಸರ್ವಸ್ವ ಎಂದುಕೊಂಡಿದ್ದ ತನಿಷಾರಿಗೆ ಕೊನೆಗೂ ಈ ಸಂಬಂಧ ಉಳಿಸಿಕೊಳ್ಳಲು ಆಗಲೇ ಇಲ್ಲ. ಒಂದು ಹಂತದವರೆಗೆ ಸಹಿಸಿಕೊಂಡ ತನಿಷಾ ಕೊನೆಗೆ ಬ್ರೇಕಪ್​ ಮಾಡಿಕೊಂಡರು. ಈಗ ಮತ್ತೆ ಬದುಕು ಕಟ್ಟಿಕೊಳ್ಳುವ ಆಸೆ ಅವರಿಗೆ. ಅದಕ್ಕಾಗಿಯೇ ಈಗ ಮದುವೆ, ಮನೆ, ಕುಟುಂಬದ ಆಸೆಯನ್ನು ನಟಿ ಶೇರ್​​​ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ : ಮುನಿರತ್ನ ವಿರುದ್ಧ ಐದು ಆಡಿಯೋ ರಿಲೀಸ್ ಮಾಡಿದ ಬಿಬಿಎಂಪಿ ಕಾಂಟ್ರಾಕ್ಟರ್​​..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್‌‌ – BMTC ಬಸ್ಸನ್ನೇ ಅಡ್ಡಗಟ್ಟಿ ಹುಚ್ಚಾಟ ಮೆರೆದ ಭೂಪ..!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ರೇಜ್ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾರು, ಬೈಕ್ ಆಯ್ತು.. ಇದೀಗ BMTC ಬಸ್ಸನ್ನೇ ಅಡ್ಡಗಟ್ಟಿ ಬೈಕ್​

Live Cricket

Add Your Heading Text Here