Download Our App

Follow us

Home » ಅಪರಾಧ » ಅಮ್ಮನೇ ಇಲ್ಲದೇ ನಡೆಯಿತು ಮಗನ ಅಂತ್ಯ ಸಂಸ್ಕಾರ..

ಅಮ್ಮನೇ ಇಲ್ಲದೇ ನಡೆಯಿತು ಮಗನ ಅಂತ್ಯ ಸಂಸ್ಕಾರ..

ಬೆಂಗಳೂರು : ತಾಯಿಯೇ ಮಗುವನ್ನು ಹತ್ಯೆ ಮಾಡಿದ್ದು, ಬೆಂಗಳೂರಿನ ಶ್ರೀರಾಮಪುರದ ಹರಿಶ್ಚಂದ್ರ ಘಾಟ್​ನಲ್ಲಿ ಮಗು ಚಿನ್ಮಯ್​​​​​ ಅಂತ್ಯ ಸಂಸ್ಕಾರ ನಡೆದಿದೆ.   ತಂದೆ ವೆಂಕಟರಮಣ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.

ಕುಟುಂಬ ಸದಸ್ಯರು, ಬಂಧು-ಬಳಗದ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆದಿದೆ. ಕಳೆದ ರಾತ್ರಿ ಹಿರಿಯೂರಿನಿಂದ ಬೆಂಗಳೂರಿಗೆ ಮೃತದೇಹ ತರಲಾಗಿತ್ತು,  ಯಶವಂತಪುರದ ಬ್ರಿಗೇಡ್ ಗೇಟ್ ವೇ ರೆಸಿಡೆನ್ಸಿಯಲ್ಲಿ ಅಂತಿಮ ದರ್ಶನ ಇಡಲಾಗಿತ್ತು. ಕೆಲ ಹೊತ್ತಿನ ಹಿಂದೆ ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯ ಸಂಸ್ಕಾರ ನಡೆದಿದೆ.

ಬೆಂಗಳೂರಿನ ಸ್ಟಾರ್ಟ್​ ಅಪ್​​​​ CEO ಸುಚನಾ ಸೇಠ್​ ಗೋವಾದಲ್ಲಿ 4 ವರ್ಷದ ಮಗನನ್ನು ಕೊಂದಿದ್ದರು. ಪತ್ನಿ ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ದೂರಾಗಿದ್ದರು. ಸುಚನಾ ಪತಿ ಮಗುವನ್ನು ನೋಡಲು ಅವಕಾಶ ಪಡೆದಿದ್ದ. ಆದ್ರೆ ಪತಿ ಬಂದು ಮಗನನ್ನು ನೋಡುವ ಮುನ್ನವೇ ಕೊಲೆ ಮಾಡಿದ್ದಾಳೆ.

ನನಗೆ ಮಗನನ್ನು ಕೊಲ್ಲುವ ಉದ್ದೇಶ ಇರಲಿಲ್ಲ, ಪ್ರಜ್ಞೆ ತಪ್ಪಿಸಬೇಕು ಎಂದು ಪ್ರಯತ್ನ ಮಾಡಿದ್ದೆ. ದಿಂಬನ್ನು ಒತ್ತಿ ಉಸಿರುಗಟ್ಟಿಸಲು ಯತ್ನ ನಡೆಸಿದ್ದೆ, ಮಗು ಪ್ರಜ್ಞೆ ತಪ್ಪಿದೆ ಎಂದು ತಿಳಿದುಕೊಂಡಿದ್ದೆ, ಆದರೆ ಮಗು ಸಾವನ್ನಪ್ಪಿತ್ತು, ತಕ್ಷಣ ಏನ್​​ ಮಾಡ್ಬೇಕು ಗೊತ್ತಾಗಲಿಲ್ಲ, ಇದೇ ನೋವಿನಲ್ಲಿ ಕೈಕೊಯ್ದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದೆ. ಗಾಬರಿಯಲ್ಲಿ ಏನೂ ತೋಚದೆ ಸೂಟ್ ಕೇಸ್​ನಲ್ಲಿ ತುಂಬಿದೆ. ಮಗುವಿನ ಬಾಡಿ ಹಾಕಿ ಪರಾರಿಯಾಗಲು ಯತ್ನಿಸಿದೆ ಎಂದು ಗೋವಾ ಪೊಲೀಸರ ಮುಂದೆ ಬೆಂಗಳೂರಿನ ಸ್ಟಾರ್ಟ್​ ಅಪ್​​​​ CEO  ಸುಚನಾ ಸೇಠ್ ತಪ್ಪೊಪ್ಪಿಕೊಂಡಿದ್ದಾರೆ. 

ಇದನ್ನೂ ಓದಿ : ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆಮನೆಯಲ್ಲಿ ಕಳ್ಳತನ.

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here