Download Our App

Follow us

Home » ಸಿನಿಮಾ » ಸೆಟ್ಟೇರಿತು ಸಿಂಪಲ್ ಸುನಿ ನಿರ್ದೇಶನದ ‘ದೇವರು ರುಜು ಮಾಡಿದನು’ ಚಿತ್ರ..!

ಸೆಟ್ಟೇರಿತು ಸಿಂಪಲ್ ಸುನಿ ನಿರ್ದೇಶನದ ‘ದೇವರು ರುಜು ಮಾಡಿದನು’ ಚಿತ್ರ..!

ಸಿಂಪಲ್‌ ಸುನಿ ನಿರ್ದೇಶನದ “ದೇವರು ರುಜು ಮಾಡಿದನು’’ ಚಿತ್ರ ಇಂದು ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ದೇವರು ರುಜು ಮಾಡಿದನು ಸಿನಿಮಾದ ಮುಹೂರ್ತ ನೆರವೇರಿದೆ. ಗ್ರೀನ್ ಹೌಸ್ ಮಾಲೀಕರಾದ ವಾಸು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ನಾಯಕ ವೀರಾಜ್ ಅಜ್ಜಿ ಕ್ಯಾಮೆರಾಗೆ ಚಾಲನೆ ನೀಡಿದರು. ಈ ಚಿತ್ರದ ಮೂಲಕ ಯುವ ನಟ ವೀರಾಜ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಟೀಸರ್ ರಿಲೀಸ್ : ದೇವರು ರುಜು ಮಾಡಿದನು ಎಂಬ ಕ್ಯಾಚಿ ಟೈಟಲ್ ಮೂಲಕ‌ ಕಿಕ್ ಕೊಟ್ಟಿದ್ದ ಸುನಿ ಟೈಟಲ್ ಟೀಸರ್ ಬಿಟ್ಟು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದ್ದಾರೆ. ಸಂಗೀತವೇ ಉಸಿರು ಎಂದು ಜೀವಿಸುವ ಇಬ್ಬರು ನಾಯಕಿರು ಹಾಗೂ ಸಂಗೀತ ಇಷ್ಟವಿಲ್ಲದಿದ್ದರೂ ಅದನ್ನು ಪ್ರೀತಿಸುವ ನಾಯಕ. ಒಂದೇ ಮಾತಿನಲ್ಲಿ ಹೇಳುವುದಾದರೆ ಸೊಗಸಾದ ಸಂಗೀತದ ಕಥೆ ಜೊತೆಗೆ ರಕ್ತ ಚರಿತ್ರೆಯನ್ನು ಸುನಿ ಹೇಳೋದಿಕ್ಕೆ ಹೊರಟಿದ್ದಾರೆ. ದೇವರು ರುಜು ಮಾಡಿದನು ಟೀಸರ್ ಬಹಳ ಇಂಪ್ರೆಸಿವ್ ಆಗಿದೆ. ಕ್ಯಾಮೆರಾ ವರ್ಕ್, ಅದ್ಭುತ ಸಂಗೀತ, ನಾಯಕ ವೀರಾಜ್, ನಾಯಕಿಯರಾದ ಕೀರ್ತಿ ಕೃಷ್ಣ ಹಾಗೂ ದಿವಿತಾ ರೈ ಅಭಿನಯಕ್ಕೆ ಟೀಸರ್ ತೂಕ ಹೆಚ್ಚಿಸಿದೆ.

ಮುಹೂರ್ತದ ಬಳಿಕ ನಾಯಕ ವೀರಾಜ್ ಖುಷಿ ಹಂಚಿಕೊಂಡಿದ್ದಾರೆ. ಈ ಮುಹೂರ್ತ ಸಮಾರಂಭ ನನ್ನ ಜೀವನದ ಒಂದಲ್ಲ, ಎರಡಲ್ಲ ಎಷ್ಟೋ ವರ್ಷದ ಕನಸು. ಚಿಕ್ಕವನಿದ್ದಾಗಿನಿಂದಲೂ ನಟನಾಗಬೇಕು ಎಂಬ ಆಸೆ ನನ್ನಲ್ಲಿತ್ತು. ಸ್ಕೂಲ್ ಟೀಚರ್ಸ್ ಡ್ಯಾನ್ಸ್, ಆಕ್ಟಿಂಗ್ ಮಾಡು ಎಂದು ಹೇಳುತ್ತಿದ್ದರು. ನಾನು ಆಗ ಮಾಡುತ್ತಿದ್ದೆ. ಆಗ ನನ್ನ ಫ್ರೆಂಡ್ಸ್ ಚಪ್ಪಾಳೆ ತಟ್ಟುತ್ತಿದ್ದರು. ಆಗ ಇದೇನೂ ಕಿಕ್ ಇದೆಯಲ್ಲಾ, ಸಖತ್ ಇದೆ ಎನಿಸುವುದು. ಕಲಾವಿದರಿಗೆ ಇದೆ ಬೇಕಿರುವುದು. ಜನ ಕೊಡುವ ರೆಸ್ಪಾನ್ಸ್ ಅದು ವಂಡರ್ ಫುಲ್. ಅಂದಿನಿಂದ ನನ್ನ ಪಯಣ ಶುರುವಾಯ್ತು. ಜನರಿಗೆ ಏನಾದರೂ ಮಾಡಬೇಕು. ನನಗೆ ಇಷ್ಟವಾಗಿದ್ದನ್ನು ಮಾಡಬೇಕು ಅಂತಾ ಅನಿಸಿತು. ಸ್ಕೂಲ್, ಕಾಲೇಜ್, ಡ್ಯಾನ್ಸ್, ಆಕ್ಟಿಂಗ್ ಮಾಡುತ್ತಾ ಬಂದೆ. ನಂತರ ನಟನೆ ತರಬೇತಿ ಪಡೆದೆ. ನಾಟಕ ಮಾಡಿಕೊಂಡು ಬಂದಿದ್ದೇನೆ. ನಾನು ಹೊಸಬ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದೇನೆ. ನಿಮ್ಮ ಆಶೀರ್ವಾದ ಇರಲಿ ಎಂದರು.

ವೀರಾಜ್ ರಂಗಭೂಮಿ ಕಲಾವಿದ. ರಂಗಭೂಮಿಯಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿರುವ ಈ ವೀರಾಜ್ ಈಗ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೊಸ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯ ಮಾಡುವಾಗ ಸಾಕಷ್ಟು ತಯಾರಿಯನ್ನು ಮಾಡಿಕೊಂಡೇ ಎಂಟ್ರಿ ಕೊಟ್ಟಿರುತ್ತಾರೆ. ಅದರಂತೆ ವೀರಾಜ್ ಇಂಟ್ರುಡ್ಯೂಸ್ ಮಾಡುವಾಗಲೂ ಅಷ್ಟೇ ಪೂರ್ವ ತಯಾರಿ ಮಾಡಿಕೊಂಡೇ ಬಂದಿದ್ದಾರೆ.

ಇನ್ನು ಗ್ರೀನ್ ಹೌಸ್ ಮೂವೀಸ್ ಅಡಿಯಲ್ಲಿ ಸಿನಿಮಾವನ್ನು ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಜೆಜೆ , ಜೇಡ್ ಸ್ಯಾಂಡಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ರೈ ಪತಾಜೆ ಕ್ಯಾಮರಾ ಹಿಡಿದಿದ್ದಾರೆ.

ಇದನ್ನೂ ಓದಿ : ಅರಣ್ಯ ಭೂಮಿ ಒತ್ತುವರಿ ಆರೋಪ – ಸಚಿವ ಬೋಸರಾಜು ವಿರುದ್ಧ ಗವರ್ನರ್​ಗೆ ದೂರು ನೀಡಿದ ದಿನೇಶ್​ ಕಲ್ಲಹಳ್ಳಿ..!

Leave a Comment

DG Ad

RELATED LATEST NEWS

Top Headlines

ಬಡ ಕುಟುಂಬದ ಕಥೆ ‘ಮೂಕ ಜೀವ’ ಚಿತ್ರ ಈ ವಾರ ತೆರೆಗೆ..!

ಜೆ.ಎಂ. ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ಚಲನಚಿತ್ರ “ಮೂಕ ಜೀವ” ಈ ವಾರ ಬಿಡುಗಡೆಯಾಗುತ್ತಿದೆ. ಹಳ್ಳಿಯ ಬಡ ಕುಟುಂಬದಲ್ಲಿ ಪ್ರಾರಂಭವಾಗುವ ಈ ಕಥೆ ಪಟ್ಟಣದಲ್ಲಿ ಅಂತ್ಯವಾಗುತ್ತದೆ. ಯಾವುದೇ

Live Cricket

Add Your Heading Text Here