Download Our App

Follow us

Home » ಫ್ಲ್ಯಾಶ್ ನ್ಯೂಸ್ » ಹಿರಿಯ ಪತ್ರಕರ್ತ ಎಲ್​.ಎಮ್​​​​​ ನಾಗರಾಜ್​​​ ಸಾರಥ್ಯದಲ್ಲಿ ಮಾಧ್ಯಮ ಲೋಕಕ್ಕೆ “ಫ್ರೀಡಂ ಟಿವಿ” ಎಂಟ್ರಿ

ಹಿರಿಯ ಪತ್ರಕರ್ತ ಎಲ್​.ಎಮ್​​​​​ ನಾಗರಾಜ್​​​ ಸಾರಥ್ಯದಲ್ಲಿ ಮಾಧ್ಯಮ ಲೋಕಕ್ಕೆ “ಫ್ರೀಡಂ ಟಿವಿ” ಎಂಟ್ರಿ

ಮಾಧ್ಯಮ ಲೋಕದಲ್ಲಿ ಹಲವು ಚಾನಲ್​ಗಳ ಮಧ್ಯೆ ಹೊಚ್ಚ ಹೊಸದಾಗಿ ಎಂಟ್ರಿಕೊಡ್ತಿದೆ ಫ್ರೀಡಂ ಟಿವಿ. ಸದಾಶಿವನಗರದ ಭಾಷ್ಯಂ ಸರ್ಕಲ್​​ ಬಳಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಇದೇ ಮಂಗಳವಾರ ಯುಗಾದಿಯ ಶುಭದಿನದಂದು ಫ್ರೀಡಂ ಟಿವಿ ಲೋಕಾರ್ಪಣೆಗೊಳ್ಳಲಿದೆ.

ಅನುಭವಿ ಪತ್ರಕರ್ತ ಎಲ್​​​.ಎಮ್​ ನಾಗರಾಜ್​​​​ ಅವರ ಸಾರಥ್ಯ ಹಾಗೂ ಮಾಲೀಕತ್ವದಲ್ಲಿ ಈ ಚಾನಲ್​​ ಕನ್ನಡಿಗರ ಮಡಿಲು ಸೇರಲಿದೆ. ಯುವ ಪತ್ರಕರ್ತರ ಸಮೂಹವೇ ಈ ಚಾನಲ್​​​​ ನೋಡಿ ಕೊಳ್ಳುತ್ತಿದೆ. 9-04-2024ರಂದು ಬೆಳಿಗ್ಗೆ 10 ಗಂಟೆಯಿಂದ ನಿಮ್ಮ ಮನೆಯ ಕೇಬಲ್​​​ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಚಾನಲ್​​​​​​​​​ ಲಭ್ಯವಿರುತ್ತದೆ. ರಾಜ್ಯಾದಾದ್ಯಂತ ತನ್ನದೇ ನೆಟ್​​​ವರ್ಕ್​​​​ ಹೊಂದಿರುವ ಈ ಚಾನಲ್​ನ ಮುಖ್ಯ ಕಚೇರಿ ಬೆಂಗಳೂರಿನ ಸದಾಶಿವನಗರದ ಭಾಷ್ಯಂ ಸರ್ಕಲ್​​​ ಬಳಿಯಿದೆ. ಜನಸಾಮಾನ್ಯರ ಶಕ್ತಿ ಎನ್ನುವ ಟ್ಯಾಗ್​ಲೈನ್​​ನೊಂದಿಗೆ ಲೋಕಾರ್ಪಣೆಗೊಳ್ಳುವ ಫ್ರೀಡಂ ಟಿವಿ ತಾಜಾ ಸುದ್ದಿಗಳು ಹಾಗೂ ಮನರಂಜನೆಯನ್ನು ನಿಮಗೆ ನೀಡಲಿದೆ.

 

ಎಲ್​​.ಎಮ್​ ನಾಗರಾಜ್​ ಅವರು ಈ ಹಿಂದೆ ಬಿಟಿವಿ ಸುದ್ದಿವಾಹಿನಿ, ವಿಜಯ ಕರ್ನಾಟಕ, ವಾರ್ತಾ ಭಾರತಿ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಹೊಂದಿದ್ದಾರೆ. ಇವರು ಪತ್ರಿಕೋದ್ಯಮ ದಲ್ಲಿ ಸ್ನಾತಕೋತ್ತರ ಪದವಿ ಹಾಗೂ UGC ರಾಷ್ಟ್ರೀಯ ಅರ್ಹತಾ ಪರೀಕ್ಷೆ, ಹಾಗೂ ರಾಜ್ಯ ಅರ್ಹತಾ ಪರೀಕ್ಷೆ ಪದವಿ ಪಡೆದು ಶೈಕ್ಷಣಿಕವಾಗಿ ಅರ್ಹತೆ ಪಡೆದವರು ಸಮಾಜಮುಖಿ ಚಿಂತನೆ ಹಾಗು ವಸ್ತುನಿಷ್ಠ ವರದಿಗಾರಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಬಿಟಿವಿಯಲ್ಲಿ ಸುದ್ದಿ ನ್ಯೂಸ್​ ಪ್ರೊಡ್ಯೂಸರ್​ ,Principal Correspondent, ರಾಜಕೀಯ ವಿಭಾಗದ ಮುಖ್ಯಸ್ಥರಾಗಿ  ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ ಕೆಲಸ ಮಾಡಿರುವ ಎಲ್​,ಎಮ್​​ ನಾಗರಾಜ್​​ ಈಗ ಹೊಸದೊಂದು ಸಾಧನೆಗೆ ಕೈ ಹಾಕಿದ್ದಾರೆ.

 

 

 

 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here