ಹುಬ್ಬಳ್ಳಿ : ಜ್ಯುವೆಲರಿ ಶಾಪ್ಗೆ ಕಳ್ಳರು ನುಗ್ಗಿ 50 ಕೆಜಿ ಬೆಳ್ಳಿ, 800 ಗ್ರಾಂ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಭುವನೇಶ್ವರಿ ಜ್ಯುವೆಲರಿ ವರ್ಕ್ಸ್ನಲ್ಲಿ ನಡೆದಿದೆ. ಜಗದೀಶ್ ದೈವಜ್ಞ ಎಂಬುವರಿಗೆ ಸೇರಿದ ಶಾಪ್ನಲ್ಲಿ ಕಳ್ಳತನ ನಡೆದಿದೆ.
ಖದೀಮರು ಬೆಳಗಿನ ಜಾವ 2 ಗಂಟೆಗೆ ಗ್ಯಾಸ್ ಕಟ್ಟರ್ನಿಂದ ಬೀಗ ಕಟ್ ಮಾಡಿ ಕೇಶ್ವಾಪುರದ ಭುವನೇಶ್ವರಿ ಜ್ಯುವೆಲರಿ ವರ್ಕ್ಸ್ ಒಳನುಗ್ಗಿದ್ದಾರೆ. ನಂತರ ಸಿಸಿ ಕ್ಯಾಮೆರಾಕ್ಕೆ ಸ್ಪ್ರೇ ಮಾಡಿ 50 ಕೆಜಿ ಬೆಳ್ಳಿ, 800 ಗ್ರಾಂ ಚಿನ್ನದ ಆಭರಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರ ದೃಶ್ಯ ಸೆರೆಯಾಗಿದ್ದು, ಇಬ್ಬರು ವ್ಯಕ್ತಿಗಳಿಂದ ಕಳ್ಳತನ ನಡೆದಿರೋ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಇನ್ನೂ ಕಳ್ಳರ ಪತ್ತೆಗೆ ಕಮಿಷನರ್ ವಿಶೇಷ ತಂಡ ರಚನೆ ಮಾಡಿದ್ದಾರೆ.
ಇದನ್ನೂ ಓದಿ : ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರದ ಟೀಸರ್ ಔಟ್ : ಮಾಸ್-ಗಾಡ್ ಅವತಾರದಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್..!