ಬೆಂಗಳೂರು : ರಾಜ್ಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಮೆಗಾ ಮೀಟಿಂಗ್ ಮಾಡಿದ್ದಾರೆ. ನಿನ್ನೆ ನಡೆದ ಕ್ರೈಂ ರಿವ್ಯೂ ಮೀಟಿಂಗ್ನಲ್ಲಿ ಸಿಎಂ ಖಡಕ್ ಎಚ್ಚರಿಕೆ ಕೊಟ್ಟಿದ್ದು, ಮೀಟಿಂಗ್ ಬಳಿಕ ಪೊಲೀಸ್ ಇಲಾಖೆ ಫುಲ್ ಆ್ಯಕ್ಟೀವ್ ಆಗಿದೆ.
ನಿನ್ನೆ ನಡೆದ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿದೆ. ನನಗೆ ಕಥೆ ಎಲ್ಲಾ ಬೇಕಾಗಿಲ್ಲ, ರಿಸಲ್ಟ್ ಬೇಕು. ಡ್ರಗ್ಸ್, ಬೆಟ್ಟಿಂಗ್, ಇಸ್ಪೀಟ್ ದಂಧೆ ಹೆಚ್ಚಾಗಿದ್ದು, ಈ ದಂಧೆಗಳನ್ನು ಮಟ್ಟ ಹಾಕುವಂತೆ ವಾರ್ನ್ ಮಾಡಿದ್ದಾರೆ.
ಕೆಲವು ಪೊಲೀಸ್ ಠಾಣೆ ಅಧಿಕಾರಿಗಳು ದಂಧೆಕೋರರ ಜತೆ ಶಾಮೀಲಾಗಿದ್ದು, ಪೊಲೀಸ್ ಠಾಣೆ ರಿಯಲ್ ಎಸ್ಟೇಟ್ ಅಡ್ಡೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಏನು ಮಾಡಬೇಕು ಅದನ್ನ ಮಾಡಿ. ಪ್ರತಿ ತಿಂಗಳು ಸಾರ್ವಜನಿಕರ ಜತೆ ಸಭೆ ಮಾಡಿ ಎಂದು ಪೊಲೀಸ್ ಸಮಾವೇಶದಲ್ಲಿ IPS ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಿಎಂ ಸೂಚನೆ ಕೊಡ್ತಾ ಇದ್ದಂತೆ ಅಲಾರ್ಟ್ ಆದ ಪೊಲೀಸ್ ಇಲಾಖೆ, ಅಕ್ರಮ ಚಟುವಟಿಕೆ ಮಾಹಿತಿ ಕಲೆ ಹಾಕಲು ವಿಶೇಷ ತಂಡ ರಚನೆ ಮಾಡಿದೆ. DG-IGP ಅಲೋಕ್ ಮೋಹನ್ ಅವರು ನಗರ ಹಾಗೂ ಜಿಲ್ಲಾ ಕೇಂದ್ರದಲ್ಲಿ ತಂಡ ರಚನೆ ಮಾಡಿದ್ದಾರೆ.
ಇದನ್ನೂ ಓದಿ : ಕಲಬುರಗಿ : ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ – 2 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲು..!