Download Our App

Follow us

Home » ರಾಜ್ಯ » ಕ್ರೈಂ ರಿವ್ಯೂ ಮೀಟಿಂಗ್​ನಲ್ಲಿ ಸಿಎಂ ಸಿದ್ದರಾಮಯ್ಯ ವಾರ್ನ್ – ಮೀಟಿಂಗ್​ ಬಳಿಕ ಪೊಲೀಸ್​​ ಇಲಾಖೆ ಫುಲ್​​ ಆ್ಯಕ್ಟೀವ್..!

ಕ್ರೈಂ ರಿವ್ಯೂ ಮೀಟಿಂಗ್​ನಲ್ಲಿ ಸಿಎಂ ಸಿದ್ದರಾಮಯ್ಯ ವಾರ್ನ್ – ಮೀಟಿಂಗ್​ ಬಳಿಕ ಪೊಲೀಸ್​​ ಇಲಾಖೆ ಫುಲ್​​ ಆ್ಯಕ್ಟೀವ್..!

ಬೆಂಗಳೂರು : ರಾಜ್ಯ ಪೊಲೀಸ್​ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಮೆಗಾ ಮೀಟಿಂಗ್​​​ ಮಾಡಿದ್ದಾರೆ. ನಿನ್ನೆ ನಡೆದ ಕ್ರೈಂ ರಿವ್ಯೂ ಮೀಟಿಂಗ್​ನಲ್ಲಿ ಸಿಎಂ ಖಡಕ್​​ ಎಚ್ಚರಿಕೆ ಕೊಟ್ಟಿದ್ದು, ಮೀಟಿಂಗ್​ ಬಳಿಕ ಪೊಲೀಸ್​​ ಇಲಾಖೆ ಫುಲ್​​ ಆ್ಯಕ್ಟೀವ್ ಆಗಿದೆ.

ನಿನ್ನೆ ನಡೆದ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿದೆ. ನ‌ನಗೆ ಕಥೆ ಎಲ್ಲಾ ಬೇಕಾಗಿಲ್ಲ‌, ರಿಸಲ್ಟ್ ಬೇಕು. ಡ್ರಗ್ಸ್​​​, ಬೆಟ್ಟಿಂಗ್​, ಇಸ್ಪೀಟ್​ ದಂಧೆ ಹೆಚ್ಚಾಗಿದ್ದು, ಈ ದಂಧೆಗಳನ್ನು ಮಟ್ಟ ಹಾಕುವಂತೆ ವಾರ್ನ್ ಮಾಡಿದ್ದಾರೆ.

ಕೆಲವು ಪೊಲೀಸ್ ಠಾಣೆ ಅಧಿಕಾರಿಗಳು ದಂಧೆಕೋರರ ಜತೆ ಶಾಮೀಲಾಗಿದ್ದು, ಪೊಲೀಸ್ ಠಾಣೆ ರಿಯಲ್ ಎಸ್ಟೇಟ್ ಅಡ್ಡೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಏನು ಮಾಡಬೇಕು ಅದನ್ನ ಮಾಡಿ. ಪ್ರತಿ ತಿಂಗಳು ಸಾರ್ವಜನಿಕರ ಜತೆ ಸಭೆ ಮಾಡಿ ಎಂದು ಪೊಲೀಸ್ ಸಮಾವೇಶದಲ್ಲಿ IPS ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ  ಸೂಚನೆ ನೀಡಿದ್ದಾರೆ.

ಸಿಎಂ ಸೂಚನೆ ಕೊಡ್ತಾ ಇದ್ದಂತೆ ಅಲಾರ್ಟ್ ಆದ ಪೊಲೀಸ್ ಇಲಾಖೆ, ಅಕ್ರಮ ಚಟುವಟಿಕೆ ಮಾಹಿತಿ ಕಲೆ ಹಾಕಲು ವಿಶೇಷ ತಂಡ ರಚನೆ ಮಾಡಿದೆ. DG-IGP ಅಲೋಕ್ ಮೋಹನ್ ಅವರು ನಗರ ಹಾಗೂ ಜಿಲ್ಲಾ ಕೇಂದ್ರದಲ್ಲಿ ತಂಡ ರಚನೆ ಮಾಡಿದ್ದಾರೆ.

ಇದನ್ನೂ ಓದಿ : ಕಲಬುರಗಿ : ಶಾರ್ಟ್ ಸರ್ಕ್ಯೂಟ್​​ನಿಂದ ಮನೆಗೆ ಬೆಂಕಿ – 2 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here