ಬೆಂಗಳೂರು : ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದ್ದು, ಒಂದು ಕೇಸ್ನಲ್ಲಿ ಬಚಾವ್ ಆಗಿದ್ರೆ, ಮತ್ತೊಂದು ಕೇಸ್ನಲ್ಲಿ ರೇವಣ್ಣ ಸಂಕಷ್ಟ ಸಿಲುಕಿದ್ದಾರೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರೋ ಲೈಂಗಿಕ ಕಿರುಕುಳ ಕೇಸ್ನಲ್ಲಿ ಎ1 ಆರೋಪಿಯಾಗಿರೋ ರೇವಣ್ಣಗೆ ಇದೀಗ ಢವಢವ ಶುರುವಾಗಿದೆ.
ರೇವಣ್ಣ ಕಿಡ್ನಾಪ್ ಕೇಸ್ನಲ್ಲಿ ಬೇಲ್ ಪಡೆದು ಹೊರಬಂದ್ರೂ, ಮತ್ತೊಂದು ಭೂತ ರೇವಣ್ಣರ ಬೆನ್ನುಬಿದ್ದಿದೆ. ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಲೈಂಗಿಕ ಕಿರುಕುಳ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿರೋ ರೇವಣ್ಣಗೆ ಕಂಟಕ ಎದುರಾಗಿದ್ದು, ಈ ಪ್ರಕರಣದಲ್ಲಿ ರೇವಣ್ಣಗೆ ರಿಲೀಫ್ ಸಿಗುತ್ತೋ? ಮತ್ತೆ ಅರೆಸ್ಟ್ ಆಗ್ತಾರೋ? ಎಂದು ಇಂದು ಗೊತ್ತಾಗಲಿದೆ.
ಸದ್ಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರೋ ಲೈಂಗಿಕ ಕಿರುಕುಳ ಕೇಸ್ನಲ್ಲಿ ರೇವಣ್ಣ ಮತ್ತೆ ಬಂಧನದ ಭೀತಿ ಎದುರಿಸುತ್ತಿದ್ದು, ಈ ಪ್ರಕರಣ ಸಂಬಂಧ ರೇವಣ್ಣ ಬೆಂಗಳೂರಿನ 42ನೇ ಎಸಿಎಂಎಂ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇತ್ತ ಎಸ್ಐಟಿ ಕೂಡ ಕಸ್ಟಡಿಗೆ ಪಡೆಯಲು ವಾದ ಮಂಡಿಸಿತ್ತು.
ನಿನ್ನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಾಜಿ ಸಚಿವರಿಗೆ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಾಲಯ ಇಂದು ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ರೇವಣ್ಣರಿಗೆ ರಿಲೀಫ್ ಕೊಟ್ಟಿದ್ದು, ಬೇಲ್ ಜೊತೆ ರೇವಣ್ಣಗೆ ಕೆಲವು ಷರತ್ತುಗಳನ್ನೂ ನ್ಯಾಯಾಲಯ ವಿಧಿಸಿದೆ. 5 ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಲು ಸೂಚನೆ ನೀಡಿದ್ದು, ಸಾಕ್ಷಿಗಳ ಮೇಲೆ ಒತ್ತಡ ಮತ್ತು ನಾಶ ಮಾಡದಂತೆ ಷರತ್ತು ಹಾಕಿ ಬೇಲ್ ನೀಡಿದೆ.
ಒಟ್ಟಾರೆಯಾಗಿ ಮಧ್ಯಾಹ್ನದವರೆಗೆ ಮಾಜಿ ಸಚಿವ ಹೆಚ್ಡಿ ರೇವಣ್ಣರಗೆ ರಿಲೀಪ್ ಸಿಕ್ಕಿದ್ದು, ಇಂದು ಮತ್ತೆ ಕೋರ್ಟ್ನಲ್ಲಿ ವಾದ-ಪ್ರತಿವಾದ ನಡೆಯಲಿದೆ. ಕೋರ್ಟ್ ಮುಂದೆ ರೇವಣ್ಣ ಹಾಜರಾಗಲಿದ್ದಾರೆ. ಇಂದು ನ್ಯಾಯಾಲಯ ಎರಡು ಕಡೆ ವಾದ ಆಲಿಸಲಿದೆ. ಆ ವಾದದ ಬಳಿಕ ತೀರ್ಪು ಏನೆಂಬುದು ಹೊರಬೀಳಲಿದೆ. ಒಂದು ವೇಳೆ ಬೇಲ್ ಸಿಗದೇ ಇದ್ರೆ ಇಂದೇ ಅರೆಸ್ಟ್ ಆಗ್ತಾರಾ ರೇವಣ್ಣ? ಎಂದು ಕಾದು ನೋಡ್ಬೇಕು.
ಇದನ್ನೂ ಓದಿ : ಚಾಲುಕ್ಯ ಎಕ್ಸ್ಪ್ರೆಸ್ ರೈಲಿನಲ್ಲಿ ಟಿಕೆಟ್ ತೋರಿಸಿ ಎಂದಿದ್ದಕ್ಕೆ ಚಾಕು ಇರಿತ – ಓರ್ವ ಸಾ*ವು, ನಾಲ್ವರು ಗಂಭೀರ..!