ಬೆಂಗಳೂರು : ದರ್ಶನ್, ಪವಿತ್ರಾಗೌಡ ಸೇರಿ 17 ಜನರ ಗ್ಯಾಂಗ್ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷಾ ವರದಿ ಈಗಾಗಲೇ ಹೊರಬಂದಿದೆ. ಈ ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲಿ ರೇಣುಕಾಸ್ವಾಮಿಯ ಮೇಲೆ ದರ್ಶನ್ ಗ್ಯಾಂಗ್ ಕ್ರೂರಾತಿ ಕ್ರೂರವಾಗಿ ಹಲ್ಲೆ ಮಾಡಿದ ಹಿಂಸಾತ್ಮಕ ಕೃತ್ಯ ಬಹಿರಂಗವಾಗಿದೆ.
ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಗೆ ನೀಡಿದ ಚಿತ್ರಹಿಂಸೆ, ಎಸಗಿದ ರಾಕ್ಷಸ ಕೃತ್ಯಕ್ಕೆ ಕೇಳಿದ್ರೆ ಮೈ ಬೆಚ್ಚಿ ಬೀಳುತ್ತೆ. ಹಲ್ಲೆ ಮಾಡುವ ವೇಳೆ ರೇಣುಕಾಸ್ವಾಮಿಗೆ ಕಬ್ಬಿಣದ ರಾಡ್ನಿಂದ ಕೈ ಮತ್ತು ಕಾಲಿಗೆ ರಕ್ತ ಹೆಪ್ಪುಗಟ್ಟುವ ರೀತಿ ಹಲ್ಲೆ ಮಾಡಿ ಸಿಕ್ಕ-ಸಿಕ್ಕಿದ್ದಕ್ಕೆ ಅಪ್ಪಳಿಸಿ ಕೃತ್ಯ ನಡೆಸಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದಲೇ ರಕ್ತ ಹೆಪ್ಪುಗಟ್ಟಿ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದಾನೆ. ದರ್ಶನ್ ಗ್ಯಾಂಗ್ನ ಈ ಎಲ್ಲಾಅಟ್ಟಹಾಸ ಪೋಸ್ಟ್ಮಾರ್ಟಂನಲ್ಲಿ ಬಯಲಾಗಿದೆ.
ರೇಣುಕಾಸ್ವಾಮಿಗೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ ಸಂದರ್ಭದಲ್ಲಿ ನೋವಿನಿಂದ ಕೂಗಾಡುತ್ತಿದ್ದರೂ ನಟ ದರ್ಶನ್ ಅಂಡ್ ಗ್ಯಾಂಗ್ನ ಕ್ರೂರತ್ವ ಮಾತ್ರ ತಣಿದಿರಲ್ಲ. ಬಳಿಕ ದರ್ಶನ್ ಹಾಗೂ ಆತನ ಸಹಚರರು ರೇಣುಕಾಸ್ವಾಮಿಯ ಮರ್ಮಾಂಗವನ್ನು ಗುರಿಯಾಗಿಸಿ ಕಾಲಿನಿಂದ ಒದ್ದು ಭೀಕರವಾಗಿ ಮತ್ತೆ ಹಲ್ಲೆ ಮಾಡಿದ್ದರು. ಇದಾದ ನಂತರ ಎದೆಯ ಎಡಭಾಗ ಹೃದಯವಿರುವ ಜಾಗಕ್ಕೆ ಜೋರಾಗಿ ಬಾಕ್ಸಿಂಗ್ ಆಡುವ ರೀತಿಯಲ್ಲಿ ಪಂಚ್ ಮಾಡಿದ್ದಾರೆ.
ಇನ್ನು ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದಲೇ ರಕ್ತ ಹೆಪ್ಪುಗಟ್ಟಿ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಬಳಿಕ ಆತನ ಮೃತ ದೇಹವನ್ನು ಸುಮನಹಳ್ಳಿ ಮೇಲ್ಸೇತುವೆ ಬಳಿ ಡಿ ಗ್ಯಾಂಗ್ ಬೀಸಾಡಿದೆ. ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದು, ಈಗಾಗಲೇ ಮರಣೋತ್ತರ ಪರೀಕ್ಷೆಯ ಮೌಖಿಕ ವರದಿಯನ್ನು ಡಾಕ್ಟರ್ ತನಿಖಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ದರ್ಶನ್ & ಗ್ಯಾಂಗ್ ಇರುವ ಠಾಣೆಗೆ ಶಾಮಿಯಾನ : ಹರಾಜಾಗ್ತಿದೆ ಪೊಲೀಸ್ ಮಾನ, ಸಾರ್ವಜನಿಕರಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ..!