Download Our App

Follow us

Home » ಅಪರಾಧ » ರೇವ್ ಪಾರ್ಟಿ ಕೇಸ್​​ : ಆಂಧ್ರ ಸಚಿವ, ಎಂಎಲ್​ಎ ಆಪ್ತರು ವಶಕ್ಕೆ..!

ರೇವ್ ಪಾರ್ಟಿ ಕೇಸ್​​ : ಆಂಧ್ರ ಸಚಿವ, ಎಂಎಲ್​ಎ ಆಪ್ತರು ವಶಕ್ಕೆ..!

ಬೆಂಗಳೂರು : ಜಿ.ಆರ್​.ಫಾರ್ಮ್​ಹೌಸ್​​​ನಲ್ಲಿ ನಡೆದಿದ್ದ ರೇವ್​​​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರು ಸಿಸಿಬಿ ಪೊಲೀಸರು ಕಾಕನಿ MLA ಗೋವರ್ಧನ ರೆಡ್ಡಿ ಹಾಗೂ  ಎಂಎಲ್ಎ ಶ್ರೀಕಾಂತ್ ರೆಡ್ಡಿ ಆಪ್ತರನ್ನು ಸಿಸಿಬಿ ವಶಕ್ಕೆ ಪಡೆದಿದೆ. ಪೂರ್ಣ ರೆಡ್ಡಿ ಹಾಗೂ ಅರುಣ್ ಕುಮಾರ್ ಬಂಧಿತ ಆರೋಪಿಗಳು.

ಮೇ 19 ರಂದು ಎಲೆಕ್ಟ್ರಾನಿಕ್ ಸಿಟಿ ಹೊರವಲಯದ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜನೆಯಾಗಿತ್ತು. ಈ ಪಾರ್ಟಿಗೆ ಸಿಸಿಬಿ ತಂಡ ದಾಳಿ ನಡೆಸಿದ್ದು ತೆಲಗು ನಟಿ ಹೇಮಾ, ಆಶಿ‌ ರಾಯ್ ಸೇರಿದಂತೆ ಭಾಗಿಯಾಗಿದ್ದ ಹಲವರನ್ನು ವಶಕ್ಕೆ ಪಡೆಯಲಾಗಿತ್ತು. ರೇಡ್​ ವೇಳೆ ಕಾರೊಂದರಲ್ಲಿ MLA ಗೋವರ್ಧನ್​​ ರೆಡ್ಡಿ ಪಾಸ್ ಪತ್ತೆಯಾಗಿತ್ತು. ಆದರೆ  ರೇವ್​ ಪಾರ್ಟಿ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಪೂರ್ಣ ರೆಡ್ಡಿ ಸಿಸಿಬಿ ರೇಡ್​ ವೇಳೆ ಎಸ್ಕೇಪ್​​ ಆಗಿದ್ದ.

ಸದ್ಯ ಆಂಧ್ರದ ಕಾಕಾನಿ MLA ಗೋವರ್ಧನ್ ರೆಡ್ಡಿ ಎಂಬ ಎಂಎಲ್​ಎ ಪಾಸ್ ಪತ್ತೆಯಾದ ಹಿನ್ನೆಲೆ ಜಾಡು ಬೆನ್ನತ್ತಿದ ಸಿಸಿಬಿ ಪೊಲೀಸರು MLA ಗೋವರ್ಧನ್​ ರೆಡ್ಡಿ ಆಪ್ತನಾಗಿರುವ ಪೂರ್ಣ ರೆಡ್ಡಿ ಹಾಗೂ YSR ಪಕ್ಷದ MLA ಶ್ರೀಕಾಂತ್​ ರೆಡ್ಡಿಗೆ ಆಪ್ತನಾಗಿದ್ದ ಅರುಣ್​ನನ್ನು ವಶಕ್ಕೆ ಪಡೆದಿದ್ದಾರೆ. ಪೂರ್ಣನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಅರುಣ್​​ ಕುಮಾರ್​​​ ಅಲಿಯಾಸ್​​ ಅರುಣ್​ ಚೌಧರಿ ರಾಜಕೀಯ ನಂಟು ಹೊಂದಿದ್ದು, ಆಂಧ್ರಪ್ರದೇಶ ಸಿಎಂ ಜಗನ್​​, ಶ್ರೀಕಾಂತ್ ರೆಡ್ಡಿ​​​​​ ಜೊತೆ ಫೋಟೋ ಪತ್ತೆಯಾಗಿದೆ. ಅರುಣ್​​ ಕೂಡಾ ಡ್ರಗ್ಸ್​ ಪಾರ್ಟಿ ಆಯೋಜನೆಗೆ ಪ್ರಮುಖ ಪಾತ್ರ ವಹಿಸಿದ್ದರಿಂದ ಆತನನ್ನು ಕೂಡಾ ಸಿಸಿಬಿ ಪೊಲೀಸರು ಬಂಧಿಸಿ ಮೊಬೈಲ್​ ಜಪ್ತಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : 11 ವರ್ಷದ ಅತ್ಯಾಚಾರ, ಕೊ*ಲೆ ಪ್ರಕರಣ ಭೇದಿಸಿದ ಸಿಐಡಿ ಪೊಲೀಸರು : ಮೂವರು ಅರೆಸ್ಟ್​​ ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here