Download Our App

Follow us

Home » ರಾಜಕೀಯ » ಜಾಹೀರಾತು ವಿಚಾರದಲ್ಲಿ ರಾಹುಲ್‌ ಗಾಂಧಿ ಪಾತ್ರ ಇಲ್ಲ, ಅವರಿಗೆ ಅನಾವಶ್ಯಕವಾಗಿ ತೊಂದರೆ ಕೊಡ್ತಿದ್ದಾರೆ : ಡಿಕೆಶಿ..!

ಜಾಹೀರಾತು ವಿಚಾರದಲ್ಲಿ ರಾಹುಲ್‌ ಗಾಂಧಿ ಪಾತ್ರ ಇಲ್ಲ, ಅವರಿಗೆ ಅನಾವಶ್ಯಕವಾಗಿ ತೊಂದರೆ ಕೊಡ್ತಿದ್ದಾರೆ : ಡಿಕೆಶಿ..!

ಬೆಂಗಳೂರು : ರಾಹುಲ್ ಗಾಂಧಿಗೆ ಅನಾವಶ್ಯಕವಾಗಿ ತೊಂದರೆ ಕೊಡ್ತಿದ್ದಾರೆ, ಶಾಸಕ ಬಸನಗೌಡ ಯತ್ನಾಳ್​ 2,500 ಕೋಟಿ ಅಂತ ಹೇಳಿಕೆ ಕೊಟ್ಟಿದ್ರು, ಆ ಹೇಳಿಕೆ ಆಧಾರದ ಮೇಲೆ ನಾವು ಜಾಹೀರಾತು ನೀಡಿದ್ವಿ. ಜಾಹೀರಾತು ವಿಚಾರದಲ್ಲಿ ರಾಹುಲ್‌ ಗಾಂಧಿ ಪಾತ್ರ ಇಲ್ಲ. ತೊಂದರೆ ಕೊಡಲು ರಾಹುಲ್ ಗಾಂಧಿ ಹೆಸರು ಸೇರಿಸಿದ್ದಾರೆ, ಆದ್ರೂ ರಾಹುಲ್ ಕಾನೂನಿಗೆ ಗೌರವ ಕೊಟ್ಟು ಬಂದಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆಶಿ ಮಾತನಾಡಿ, ಕೆಲವು ಮಂತ್ರಿಗಳು ರಾಹುಲ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ, ಕ್ಷೇತ್ರದಲ್ಲಿ ಲೀಡ್ ಬಂದಿರುವ ಬಗ್ಗೆ ರಿಪೋರ್ಟ್​ ಕೇಳಿದ್ದಾರೆ. ಪ್ಲಾನ್ ಆಫ್ ಆಕ್ಷನ್ ಮಾಡಬೇಕು ಅಂತ ರಾಹುಲ್​ ಹೇಳಿದ್ದಾರೆ, ನಾಳೆ AICC ಸಭೆ ಇದೆ ನನ್ನ & ಸಿಎಂ ಅವರನ್ನು ಕರೆದಿದ್ದಾರೆ. ಸಭೆಗೆ ಹೋಗಿ ಬಂದ ಬಳಿಕ ಪ್ಲಾನ್ ಆಫ್ ಆಕ್ಷನ್ ತಯಾರಿಸುತ್ತೇವೆ ಎಂದಿದ್ದಾರೆ.

ಇದೇ ವೇಳೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ವಿಚಾರ ಸಂಬಂಧ ಮಾತನಾಡಿ, ಬಿಜೆಪಿಗೆ ಹೆದರಿ ಅಥವಾ ಒತ್ತಾಯಕ್ಕೋ ರಾಜೀನಾಮೆ ಕೊಟ್ಟಿಲ್ಲ. ಅವರೇ ಪಕ್ಷಕ್ಕೆ ಮುಜುಗರ ಆಗಬಾರದು ಅಂತ ರಿಸೈನ್​ ಮಾಡಿದ್ದಾರೆ. ಸ್ವ ಇಚ್ಛೆಯಿಂದ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ : ನಾಪತ್ತೆಯಾಗಿದ್ದ ಭವಾನಿ ರೇವಣ್ಣ ದಿಢೀರ್ ಪ್ರತ್ಯಕ್ಷ : ಇಷ್ಟು ದಿನ ಇದ್ದಿದ್ದೆಲ್ಲಿ?

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here