Download Our App

Follow us

Home » ಅಪರಾಧ » SIT ತನಿಖಾ ತಂಡಕ್ಕೆ ಬೆದರಿಕೆ ಹಾಕ್ತಿರುವ ಪ್ರಜ್ವಲ್​​?

SIT ತನಿಖಾ ತಂಡಕ್ಕೆ ಬೆದರಿಕೆ ಹಾಕ್ತಿರುವ ಪ್ರಜ್ವಲ್​​?

ಬೆಂಗಳೂರು : ಪ್ರಜ್ವಲ್ ರೇವಣ್ಣ SIT ತನಿಖಾ ತಂಡಕ್ಕೆ ಬೆದರಿಕೆ ಹಾಕ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಹೊರಗೆ ಬಂದ ಕೂಡಲೇ ನೋಡ್ಕೋತೀನಿ ಅಂತಾ ಪ್ರಜ್ವಲ್ ಅವಾಜ್​​ ಹಾಕಿದ್ದಾರೆ ಎಂದು SITಯ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪ್ರಜ್ವಲ್​ ಬೆದರಿಕೆ ಬಗ್ಗೆ ಕೋರ್ಟ್​ಗೆ ಮಾಹಿತಿ ನೀಡಲು SIT ಸಜ್ಜಾಗಿದೆ. ತನಿಖೆಗೆ ಪ್ರಜ್ವಲ್​ ರೇವಣ್ಣ ಅಸಹಕಾರ ತೋರಿದ್ದು, ವಿಚಾರಣೆಗೆ ಬಂದ ಅಧಿಕಾರಿ, ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ.

ಪ್ರಜ್ವಲ್​​ ಬೆದರಿಕೆ ಬಗ್ಗೆ ಏಕಾಏಕಿ ಪ್ರಕರಣ ದಾಖಲಿಸಲು ಆಗಲ್ಲ, ನ್ಯಾಯಾಲಯದ ವಿಚಾರಣೆ ವೇಳೆ ಮಾಹಿತಿ ನೀಡುತ್ತೇವೆ ಎಂದು SIT ಮೂಲಗಳು ಮಾಹಿತಿ ನೀಡಿದೆ. ನಿಮ್ಮ ಕೆಲಸ ನೀವ್​ ಮಾಡಿ ನನಗೇನೂ ಗೊತ್ತಿಲ್ಲ, ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಹಾಗೆಯೇ ಪ್ರಜ್ವಲ್ ನಾನು ಯಾವುದೇ ತಪ್ಪು ಮಾಡಿಲ್ಲ ಎನ್ನುತ್ತಿದ್ದು, ​4 ವರ್ಷದ ನಂತರ ದೂರು ಕೊಟ್ಟಿದ್ದೇಕೆ, ಅದನ್ನು ಪತ್ತೆ ಮಾಡಿ ಎಂದು ವಿಚಾರಣೆಗೆ ಬಂದ SIT ಅಧಿಕಾರಿಗಳ ಮುಂದೆ ಪ್ರಜ್ವಲ್ ಹೇಳ್ತಿದ್ದಾರೆ.

ತಿರುಚಿದ ವಿಡಿಯೋಗಳನ್ನು ಹರಿಬಿಟ್ಟು ತೇಜೋವಧೆ ಮಾಡಿದ್ದಾರೆ, ಈ ವಿಡಿಯೋ ಹಿಂದಿರುವ ಕಾರ್ತಿಕ್​​​​ ಸೇರಿ ಇತರರನ್ನು ವಿಚಾರಣೆ ಮಾಡಿ, ನನಗೇನೂ ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳ್ತಿದ್ದಾರೆ.
ಮೊಬೈಲ್​​​ ಬಗ್ಗೆ ಕೇಳಿದ್ರೆ ಅಧಿಕಾರಿಗಳ ಮೇಲೆ ಪ್ರಜ್ವಲ್ ಗರಂ ಆಗ್ತಿದ್ದು, ನಿನ್ನೆ ಇಡೀ ದಿನ SIT ಮೊಬೈಲ್​ ಬಗ್ಗೆ ಸಾಲು-ಸಾಲು ಪ್ರಶ್ನೆ ಕೇಳಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ನಂತರ SIT ಮತ್ತೆ ವಿಚಾರಣೆ ನಡೆಸಲಿದ್ದು, ಇಂದು ಅಥವಾ ನಾಳೆ ಪ್ರಜ್ವಲ್​​ನ್ನ ಹಾಸನಕ್ಕೆ ಕರೆದೊಯ್ದು ಸ್ಥಳ ಮಹಜರ್ ಮಾಡುವ​ ಸಾಧ್ಯತೆಯಿದೆ.

ಇದನ್ನೂ ಓದಿ : ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ : ಡಿಕೆ ಶಿವಕುಮಾರ್..!

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here