ಬೆಂಗಳೂರು : ಪೆನ್ಡ್ರೈವ್ ಪ್ರಕರಣದಲ್ಲಿ ದೇವರಾಜೇಗೌಡ ಬಳಿ ಸಾಕ್ಷ್ಯ ಇದೆ, ಸಾಕ್ಷ್ಯ ಇದೆ ಅನ್ನೋ ಕಾರಣಕ್ಕೇ ಅರೆಸ್ಟ್ ಮಾಡಿದ್ದಾರೆ ಎಂದು ಹೆಚ್ಡಿಡಿ ಭೇಟಿ ನಂತರ ವಿಪಕ್ಷ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಆರ್.ಅಶೋಕ್ ಮಾತನಾಡಿ, ದೇವರಾಜೇಗೌಡ ಹೊರಗಿದ್ರೆ ದಾಖಲೆ ಬಿಡ್ತಾರೆ ಅಂತ ಭಯ ಇದೆ. ದೇವರಾಜೇಗೌಡ ಮಾಡಿರೋ ಆರೋಪಗಳೆಲ್ಲಾ ನಿಜ ಇರ್ಬೇಕು, ಬೆಂಕಿ ಇಲ್ಲದೇ ಹೊಗೆ ಬರೋದು ಸಾಧ್ಯವೇ..? ಸರಣಿ ದಾಖಲೆ ಬಿಟ್ರೆ ಸರ್ಕಾರಕ್ಕೆ ಮುಜುಗರ ಆಗುತ್ತೆ ಅಂತ ಬಂಧಿಸಿದ್ದಾರೆ. ಸುರ್ಜೇವಾಲಾ, ಸಿಎಂ, ಡಿಕೆಶಿ ಸೇರಿ ಈ ಮಾಸ್ಟರ್ ಪ್ಲಾನ್ ಮಾಡಿರಬಹುದು, ಒಕ್ಕಲಿಗರನ್ನು ಮುಗಿಸಬೇಕು ಅನ್ನೋ ಸ್ಕೀಂ ಹಾಕಿಕೊಂಡಿದೆ ಕಾಂಗ್ರೆಸ್ ಎಂದಿದ್ದಾರೆ.
CBIಗೆ ನೀಡಿದ್ರೆ ಎಲ್ಲಾ ಸತ್ಯಗಳೂ ಹೊರಗೆ ಬರಲಿವೆ, SITಯಿಂದ ಸತ್ಯ ಹೊರಬರುವ ನಂಬಿಕೆ ಯಾರಿಗೂ ಇಲ್ಲ. ಸರ್ಕಾರ ಹೇಳಿದಂತೆ ಎಸ್ಐಟಿ ಕೆಲಸ ಮಾಡುತ್ತದೆ, ಕಾರ್ತಿಕ್ ಬೇಲ್ ಕ್ಯಾನ್ಸಲ್ ಆದ್ರೂ ಯಾಕೆ ಬಂಧಿಸ್ತಿಲ್ಲ? ರೇವಣ್ಣ ಅವರನ್ನು ಬಂಧಿಸ್ತಾರೆ, ಕಾರ್ತಿಕ್ ಬಂಧಿಸಿಲ್ಲವೇಕೆ..? ಪ್ರಜ್ವಲ್ ಸೇರಿ ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಲಿ. ಪೆನ್ಡ್ರೈವ್ ಹಂಚಿಕೆ ಮಾಡಿದವರಿಗೂ ಶಿಕ್ಷೆ ಆಗಬೇಕಲ್ಲವೇ..? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ‘ಸಂಭವಾಮಿ ಯುಗೇಯುಗೇ’ ಚಿತ್ರದ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ರಿಲೀಸ್..!