Download Our App

Follow us

Home » ರಾಜಕೀಯ » ಪ್ರಜ್ವಲ್ ಕೇಸ್​​ನ್ನು CBIಗೆ ಕೊಡಿ ಅಂತಾ ಕೇಳ್ತಿರೋದ್ರ ಹಿಂದೆ ಬೇರೆ ಉದ್ದೇಶ ಇದೆ : ಸಿಎಂ ಸಿದ್ದರಾಮಯ್ಯ..!

ಪ್ರಜ್ವಲ್ ಕೇಸ್​​ನ್ನು CBIಗೆ ಕೊಡಿ ಅಂತಾ ಕೇಳ್ತಿರೋದ್ರ ಹಿಂದೆ ಬೇರೆ ಉದ್ದೇಶ ಇದೆ : ಸಿಎಂ ಸಿದ್ದರಾಮಯ್ಯ..!

ಮೈಸೂರು : CBI ಅಂದ್ರೆ ಕಾಂಗ್ರೆಸ್​​​​ ಬ್ಯೂರೋ ಆಫ್​​​ ಇನ್ವೆಸ್ಟಿಗೇಷನ್​ ಅಂದಿದ್ದು ಯಾರು..? ಗೌಡರೇ CBI ಅನ್ನು ಚೋರ್​ ಬಚಾವೋ ಇನ್ವೆಸ್ಟಿಗೇಷನ್​ ಅಂದಿರಲಿಲ್ಲವೇ..? CBIಗೆ ಕೊಟ್ಟ ಕೇಸ್​ಗಳಲ್ಲಿ ಯಾರಿಗೆ ಶಿಕ್ಷೆ ಆಯ್ತು..? ಡಿ.ಕೆ.ರವಿ ಕೇಸ್​, ಕೆ.ಜೆ.ಜಾರ್ಜ್​ ಕೇಸ್​, ಲಾಟರಿ ಕೇಸ್​ ಗತಿ ಏನಾಯ್ತು..? ನಮ್ಮ ಪೊಲೀಸರ ಬಗ್ಗೆ ನಮಗೆ ನಂಬಿಕೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸ್ ಕೊಟ್ಟಿದ್ರಾ..? CBIಗೆ ಕೊಡಿ ಅಂತಾ ಕೇಳ್ತಿರೋದ್ರ ಹಿಂದೆ ಬೇರೆ ಉದ್ದೇಶ ಇದೆ, ನಾನು ಯಾವತ್ತು ಪೊಲೀಸರಿಗೆ ಕಾನೂನು ಮೀರಿ ನಡೆದುಕೊಳ್ಳಿ ಎಂದಿಲ್ಲ. SITಯಲ್ಲಿರೋದು ನಮ್ಮ ಪೊಲೀಸರೇ ಅಲ್ಲವೇ, ಅವರ ಮೇಲೆ ನಂಬಿಕೆ ಇಲ್ವಾ..? ಎಂದು ಬಿಜೆಪಿ, ಜೆಡಿಎಸ್​ಗೆ ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ರಾಜಕೀಯ ಪಿತೂರಿ ಎಂದಿದ್ದ ಮಾಜಿ ಸಿಎಂ ಹೆಚ್​ಡಿಕೆಗೆ ಸಿಎಂ ಸಿದ್ದು ತಿರುಗೇಟು ನೀಡಿದ್ದಾರೆ. ಕೇಸ್​ ಇಲ್ಲ ಅಂದ್ಮೇಲೆ ಬೇಲ್​ಗೆ ಅರ್ಜಿ ಹಾಕಿದ್ಯಾಕೆ..? ತಪ್ಪೇ ಮಾಡಿಲ್ಲ ಅಂದ್ಮೇಲೆ ನಿರೀಕ್ಷಣಾ ಬೇಲ್​ ಯಾಕೆ ಸಿಗಲಿಲ್ಲ..? ಇದರಲ್ಲಿ ರಾಜಕೀಯ ಎಲ್ಲಿಂದ ಬಂತು..? ಈ ಕೇಸ್​ನಲ್ಲಿ ಡಿ.ಕೆ.ಶಿವಕುಮಾರ್​ ಪಾತ್ರ ಇಲ್ಲವೇ ಇಲ್ಲ ಎಂದಿದ್ದಾರೆ.

ಕೇಸ್​ಗೆ ಅಂತರಾಷ್ಟ್ರೀಯ ಸಂಪರ್ಕವಿದೆ ಅನ್ನೋದೆಲ್ಲಾ ಸುಳ್ಳು, ಸಿಬಿಐಗೆ ವಹಿಸಲಿ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ. ಪ್ರಕರಣದ ತನಿಖೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ, ಜೆಡಿಎಸ್​, ಬಿಜೆಪಿ ರಾಜಕೀಯ ಪ್ರೇರಿತ ಆರೋಪ ಮಾಡ್ತಿವೆ. SIT ಪೊಲೀಸರು ಮೊದಲು ತನಿಖೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ : ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆ-ಮನದ ಡೊಂಕು ಸರಿಮಾಡಿಕೊಳ್ಳಿ : HDKಗೆ ಡಿಕೆಶಿ ಟಾಂಗ್​​..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here