Download Our App

Follow us

Home » ಜಿಲ್ಲೆ » ಉಡುಪಿ : ಬಿಜೆಪಿ ಯುವ ಮೋರ್ಚಾದಿಂದ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ವಾರ್..!

ಉಡುಪಿ : ಬಿಜೆಪಿ ಯುವ ಮೋರ್ಚಾದಿಂದ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ವಾರ್..!

ಉಡುಪಿ : ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ನಗರ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ‘ಪೋಸ್ಟರ್​ ವಾರ್​’ ಅಭಿಯಾನ ನಡೆಸಿದ್ದಾರೆ. ಉಡುಪಿಯ ಸರ್ಕಾರಿ,  ಸಾರ್ವಜನಿಕ ಸ್ಥಳಗಳಲ್ಲಿ ‘ಪಿಕ್​ ಪಾಕೆಟ್​ ಸರ್ಕಾರ’ ಎಂಬ ಭಿತ್ತಿಚಿತ್ರ ಅಂಟಿಸಿ ಪ್ರತಿಭಟಿಸಿದ್ದಾರೆ.

ಉಡುಪಿಯ ಕರಾವಳಿ ಬೈಪಾಸ್​, ಕೆಸ್​ಆರ್​ಟಿಸಿ ಬಸ್​ ನಿಲ್ದಾಣ ಹಾಗೂ ಬಸ್​ಗಳಿಗೆ ಪಿಕ್​ಪಾಕೆಟ್​ ಸರ್ಕಾರ ಹಾಗೂ ಕೊಟ್ಟಿದ್ದಕ್ಕಿಂತ ದೋಚಿದ್ದೇ ಹೆಚ್ಚು ಎಂಬ ಬರಹ ಚಿತ್ರವಿರುವ ಪೋಸ್ಟರ್​ ಅಂಟಿಸಿದ್ದಾರೆ.

ಕಾಂಗ್ರೆಸ್​ ಸರ್ಕಾರ ಜನರ ಹಣವನ್ನೇ ಸುಲಿಗೆ ಮಾಡಿ, ಅದನ್ನೇ ಗ್ಯಾರಂಟಿ ಹೆಸರಲ್ಲಿ ಹಂಚಿಕೆ ಮಾಡುತ್ತಿದೆ. ಜನರ ಜೇಬಿಗೆ ಕತ್ತರಿ ಹಾಕಿ ಐದು ಭಾಗ್ಯ ನೀಡುತ್ತಿದೆ. ಜನರ ದುಡ್ಡನ್ನು ಕಿತ್ತುಕೊಂಡು ಉಚಿತ ಭಾಗ್ಯ ಎನ್ನುತ್ತಿದೆ. ಹಿಂದು ವಿರೋಧಿ ನೀತಿ ಅನುಸರಿಸಿ, ಕೇವಲ ಒಂದೇ ಕೋಮಿನ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ : ಮೂರನೇ ಬಾರಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವಂತೆ ಮನವಿ ಮಾಡಿದ ಜಿ.ಕೆ ಗಿರೀಶ್ ಉಪ್ಪಾರ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here