Download Our App

Follow us

Home » ರಾಜ್ಯ » ಸಮೀಕ್ಷೆಗಳಲ್ಲಿ ರಾಜ್ಯದಲ್ಲಿ ಬಿಜೆಪಿಯದ್ದೇ ಪಾರುಪತ್ಯ : ಕಾಂಗ್ರೆಸ್​​​ಗೆ ಸಿಕ್ಕಿದ ಸ್ಥಾನ ಎಷ್ಟು ಗೊತ್ತಾ?

ಸಮೀಕ್ಷೆಗಳಲ್ಲಿ ರಾಜ್ಯದಲ್ಲಿ ಬಿಜೆಪಿಯದ್ದೇ ಪಾರುಪತ್ಯ : ಕಾಂಗ್ರೆಸ್​​​ಗೆ ಸಿಕ್ಕಿದ ಸ್ಥಾನ ಎಷ್ಟು ಗೊತ್ತಾ?

ಕರ್ನಾಟಕದಲ್ಲಿ 2 ಹಾಗೂ 3ನೇ ಹಂತಗಳಲ್ಲಿ ಲೋಕಸಭೆ ಚುನಾವಣೆಗಳು ನಡೆದಿದ್ದವು. ರಾಜ್ಯದ ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಹಾಗೂ ಎರಡನೇ ಹಂತದಲ್ಲಿ ಮೇ 7ರಂದು ತಲಾ 14 ರಂತೆ 28 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

ಇದೀಗ ದೇಶದಲ್ಲಿ ಅಂತಿಮ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ. ಟಿವಿ9 ಪೋಲ್​ಸ್ಟ್ರಾಟ್ ನಡೆಸಿದ ಮತಗಟ್ಟೆ ಸಮೀಕ್ಷೆಯೂ ಬಹಿರಂಗವಾಗಿದೆ.

ಕರ್ನಾಟಕ ಮತಗಟ್ಟೆ ಸಮೀಕ್ಷೆ : 

  • ಆಕ್ಸಿಸ್​ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆ ಪ್ರಕಾರ : ಬಿಜೆಪಿ 20-22, ಕಾಂಗ್ರೆಸ್​​ 3-5, ಜೆಡಿಸ್​​​ 03
  • ಇಂಡಿಯಾ ಟುಡೇ ಮತಗಟ್ಟೆ ಸಮೀಕ್ಷೆ ಪ್ರಕಾರ : ಬಿಜೆಪಿ 23-25, ಕಾಂಗ್ರೆಸ್​​3-5 ಜೆಡಿಸ್ ​​​2-3
  • ಪೋಲ್​ಸ್ಟಾರ್ಟ್ ಮತಗಟ್ಟೆ ಸಮೀಕ್ಷೆ ಪ್ರಕಾರ : ಬಿಜೆಪಿ 21-24, ಕಾಂಗ್ರೆಸ್ 3-7, ಜೆಡಿಸ್ 02
  • ಸಿಎನ್​ಎನ್​ ಮತಗಟ್ಟೆ ಸಮೀಕ್ಷೆ ಪ್ರಕಾರ : ಬಿಜೆಪಿ 20-22, ಕಾಂಗ್ರೆಸ್ 3-7 ಜೆಡಿಸ್ 1-3
  • ಇಂಡಿಯಾ ಟಿವಿ ಮತಗಟ್ಟೆ ಸಮೀಕ್ಷೆ ಪ್ರಕಾರ : ಬಿಜೆಪಿ 28-28, ಕಾಂಗ್ರೆಸ್18-22, ಜೆಡಿಸ್ 1-3
  • ಜನ್​​ ಕಿ ಬಾತ್​​ಮತಗಟ್ಟೆ ಸಮೀಕ್ಷೆ ಪ್ರಕಾರ : ಬಿಜೆಪಿ 28-28,ಕಾಂಗ್ರೆಸ್ 18-22, ಜೆಡಿಸ್ 1-3

ಆಕ್ಸಿಸ್​ ಮೈ ಇಂಡಿಯಾ ಸರ್ವೇ ಪ್ರಕಾರ ಬಿಜೆಪಿ 20 -22 ಸ್ಥಾನಗಳನ್ನ ಗೆಲ್ಲಲಿ ದ್ಯಂತೆ. ಇನ್ನು ಕಾಂಗ್ರೆಸ್​ 3 ರಿಂದ 5, ಜೆಡಿಎಸ್​​ ಮೂರಕ್ಕೆ ಮೂರು ಸ್ಥಾನಗಳನ್ನ ತನ್ನದಾಗಿಸಿಕೊಳ್ಳಲಿದ್ಯಂತೆ. ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 23-25 ಸ್ಥಾನಗಳು ಗೆಲ್ಲಲಿದ್ಯಂತೆ. ಎದುರಾಳಿ ಕಾಂಗ್ರೆಸ್​ಗೆ ಕೇವಲ 3-5 ಸ್ಥಾನಗಳಿಗೆ ತೃಪ್ತಿಪಡಲಿದೆ, ಇನ್ನು ಜೆಡಿಎಸ್​​​ 2 ರಿಂದ 3 ಸ್ಥಾನಗಳನ್ನ ಗೆಲ್ಲಬಹುದು ಅಂತ ಹೇಳಿದೆ. ಪೋಲ್​ ಸ್ಟಾರ್ಟ್​ ಸರ್ವೆ ಪ್ರಕಾರ ಬಿಜೆಪಿ 21-24, ಕಾಂಗ್ರೆಸ್​ 3-7, ಜೆಡಿಎಸ್​ 2 ಸ್ಥಾನಗಳನ್ನ ಪಡೆದುಕೊಳ್ಳಿದ್ಯಂತೆ. ಸಿಎನ್​ಎನ್​​​​​​​ ಸಮೀಕ್ಷೆ ಪ್ರಕಾರ 20 ರಿಂದ 22 ಬಿಜೆಪಿ, 3 -7 ಕಾಂಗ್ರೆಸ್​​, 1 ರಿಂದ 3 ಜೆಡಿಎಸ್​ ಪಾಲಾಗಲಿದ್ಯಂತೆ.

ಚುನಾವಣೋತ್ತರ ನಡೆಸಿದ ಎಲ್ಲಾ ಸಮೀಕ್ಷೆಗಳಲ್ಲೂ ದೇಶದಲ್ಲಿ ಬಿಜೆಪಿನೇ ಅಧಿಕಾರಕ್ಕೆ ಬರುತ್ತೆ..? ಕರ್ನಾಟಕದಲ್ಲಿ ಬಿಜೆಪಿನೇ ಹೆಚ್ಚು ಸ್ಥಾನಗಳನ್ನ ಗೆಲ್ಲುತ್ತೆ ಅಂತ ತಿಳಿಸಿವೆ. ಚುನಾವಣೆಯ ಅಸಲಿ ಫಲಿತಾಂಶಕ್ಕೆ ಮೂರು ದಿನಗಳಷ್ಟೇ ಬಾಕಿಯಿದೆ. ಅದಕ್ಕೂ ಮುಂಚೆ ರಿವೀಲ್​ ಆಗಿರೋ ಎಕ್ಸಿಟ್​ ಪೋಲ್​ ಭವಿಷ್ಯ ಎನ್​ಡಿಎ ಒಕ್ಕೂಟಕ್ಕೆ ಸಂತಸ ತಂದಿದ್ರೆ, ಈ ಬಾರಿ ಮೋದಿನ ಅಧಿಕಾರದಿಂದ ಕೆಳಗಿಳಿಸಿ ಗದ್ದುಗೆ ಏರುವ ಕನಸು ಕಂಡಿದ್ದ ಇಂಡಿಯಾ ಒಕ್ಕೂಟಕ್ಕೆ ನಿರಾಸೆಯಾಗಿದೆ.

ಇದನ್ನೂ ಓದಿ : ಎಕ್ಸಿಟ್ ಪೋಲ್ ಭವಿಷ್ಯ : ಮೋದಿಗೆ ಹ್ಯಾಟ್ರಿಕ್​​​ ಸಾಧನೆ ಫಿಕ್ಸ್​​..!

Leave a Comment

DG Ad

RELATED LATEST NEWS

Top Headlines

ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಮನಸ್ಸುಗಳೆಲ್ಲಾ ಒಂದಾಗಬೇಕು : ಸಚಿವ ಎನ್.ಚಲುವರಾಯಸ್ವಾಮಿ..!

ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಡಿ.20 ರಿಂದ 22ರವರಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಕನ್ನಡದ ಎಲ್ಲಾ ಮನಸ್ಸುಗಳು

Live Cricket

Add Your Heading Text Here