Download Our App

Follow us

Home » ಜಿಲ್ಲೆ » ದರ್ಶನ್​​ಗೆ 70 ಲಕ್ಷ ಕೊಟ್ಟಿದ್ದ ಮಾಜಿ ಡೆಪ್ಯುಟಿ ಮೇಯರ್​​ಗಾಗಿ ಪೊಲೀಸರ ಹುಡುಕಾಟ..!

ದರ್ಶನ್​​ಗೆ 70 ಲಕ್ಷ ಕೊಟ್ಟಿದ್ದ ಮಾಜಿ ಡೆಪ್ಯುಟಿ ಮೇಯರ್​​ಗಾಗಿ ಪೊಲೀಸರ ಹುಡುಕಾಟ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ನಂತರ ಪೊಲೀಸರು ಬಿಬಿಎಂಪಿ ಮಾಜಿ ಡೆಪ್ಯುಟಿ ಮೇಯರ್​​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದರ್ಶನ್ ಕೊಲೆ ಕೇಸ್ ಮುಚ್ಚಿ ಹಾಕಲು ಮಾಜಿ ಡೆಪ್ಯುಟಿ ಮೇಯರ್ ಲಕ್ಷ ಲಕ್ಷ ಹಣ ಕೊಟ್ಟಿದ್ದರು.

ಮೋಹನ್ ರಾಜ್ ಬಿಬಿಎಂಪಿಯ ಮಾಜಿ ಡೆಪ್ಯುಟಿ ಮೇಯರ್ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತರಾಗಿದ್ದಾರೆ. ದರ್ಶನ್​​ನ್ನು ಕೊಲೆ ಕೇಸ್ ನಿಂದ ಬಚಾವ್ ಮಾಡಲು ಮೋಹನ್ ರಾಜ್ ದರ್ಶನ್​​ಗೆ 70 ಲಕ್ಷ ಹಣ ಕೊಟ್ಟಿದ್ದರು. ಹುಡುಗರು ಸರಂಡರ್ ಆಗಲು ಮೋಹನ್ ರಾಜ್ 70 ಲಕ್ಷದಲ್ಲಿ 30 ಲಕ್ಷ ಕೊಟ್ಟಿದ್ದು, ಉಳಿದ 40 ಲಕ್ಷ ಕೊಲೆ ಕೇಸ್ ಮುಚ್ಚಿಹಾಕಲು ದರ್ಶನ್ ಇಟ್ಟುಕೊಂಡಿದ್ದ. ಮೋಹನ್ ರಾಜ್ ಕೊಟ್ಟ 70 ಲಕ್ಷ ಹಣವನ್ನು ತನಿಖಾ ತಂಡ ಸೀಜ್ ಮಾಡಿದೆ.

ದರ್ಶನ್ ಅರೆಸ್ಟ್ ಆಗ್ತಾ ಇದ್ದಂತೆ ಮೋಹನ್ ರಾಜ್ ಊರು ಬಿಟ್ಟಿದ್ದು, ಬೊಮ್ಮನಹಳ್ಳಿಯ ಮೋಹನ್ ರಾಜ್ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಮೋಹನ್ ರಾಜ್ ಬಂಧನಕ್ಕೆ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಿದ್ದು, ಯಾವುದೇ ಕ್ಷಣ ಪೊಲೀಸರು ಶಾಸಕ ಸತೀಶ್ ರೆಡ್ಡಿ ಆಪ್ತ ಮೋಹನ್ ರಾಜ್​​ನ್ನು ಬಂದಿಸಲಿದ್ದಾರೆ.

ಇದನ್ನೂ ಓದಿ : ರೇಣುಕಾ ಮರ್ಡರ್​ ಕೇಸ್​ನಲ್ಲಿ ದರ್ಶನ್​​ ಅರೆಸ್ಟ್ ​- ಪೊಲೀಸರಿಗೆ, ಮೀಡಿಯಾಗಳಿಗೆ ಹ್ಯಾಟ್ಸಾಪ್​ ಎಂದ ನಟಿ ರಮ್ಯಾ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here