Download Our App

Follow us

Home » ಅಪರಾಧ » 4 ವರ್ಷದ ಕಂದನ ಕೊಂದ ಪ್ರಕರಣ : ಗೋವಾ ಹೋಟೆಲ್​​ನಲ್ಲಿ ಕೃತ್ಯವನ್ನು ಮರು ಸೃಷ್ಟಿ ಮಾಡಿಸಿದ ಪೊಲೀಸರು..!

4 ವರ್ಷದ ಕಂದನ ಕೊಂದ ಪ್ರಕರಣ : ಗೋವಾ ಹೋಟೆಲ್​​ನಲ್ಲಿ ಕೃತ್ಯವನ್ನು ಮರು ಸೃಷ್ಟಿ ಮಾಡಿಸಿದ ಪೊಲೀಸರು..!

ಗೋವಾ : 4 ವರ್ಷದ ಕಂದನ ಕೊಂದ ಪ್ರಕರಣವನ್ನು ಗೋವಾ ಹೋಟೆಲ್​​ನಲ್ಲಿ ಕೃತ್ಯದ ಮರು ಸೃಷ್ಟಿ ಮಾಡಿದ್ದಾರೆ. ಸುಚನಾಳನ್ನು ಕರೆದೊಯ್ದು ಸೀನ್​ ರೀ ಕ್ರಿಯೇಟ್​ ಮಾಡಿದ್ದು, ಕಲಂಗೋಟ್​​ ಪೊಲೀಸರಿಂದ ಹತ್ಯೆ ದೃಶ್ಯದ ಮರು ಸೃಷ್ಟಿಯಾಗಿದೆ.

ಸುಚನಾ ತಂಗಿದ್ದ 404ನೇ ಕೊಠಡಿಗೆ ಕರೆದೊಯ್ದು ಸೀನ್​ ರಿಕ್ರಿಯೇಟ್​ ಮಾಡಿದ್ದು, ಮಗ ಚಿನ್ಮಯ್​​​​​​ನನ್ನು ಹೇಗೆ ಕೊಂದೆ ಎನ್ನುವುದನ್ನು ಸುಚನಾ ತೋರಿಸಿದ್ದಾಳೆ. ಗೋವಾ ಪೊಲೀಸರು ಸುಚನಾಳನ್ನು ವಿಚಾರಣೆ ಮಾಡುತ್ತಿದ್ದು, ಸುಚನಾ ಕರೆದೊಯ್ದಿದ್ದ ಕ್ಯಾಬ್​ ಡ್ರೈವರ್​ನ್ನೂ​​ ವಿಚಾರಣೆ ಮಾಡುತ್ತಿದ್ದಾರೆ.

ಈ ಬಗ್ಗೆ ಟ್ಯಾಕ್ಸಿ ಡ್ರೈವರ್ ಹೇಳಿಕೆ ನೀಡಿದ್ದಾನೆ. ಸುಚನಾ 10 ಗಂಟೆಗಳ ಕಾಲ ಸೈಲೆಂಟ್ ಆಗಿಯೇ ಕುಳಿತ್ತಿದ್ದಳಂತೆ, ನನ್ನ ಬಳಿ ಒಂದು ಮಾತನ್ನೂ ಆಡಲಿಲ್ಲ ಎಂದ ಡ್ರೈವರ್​ ರೇ ಜಾನ್​​ ಹೇಳಿದ್ದಾನೆ. ರೂಂಗೆ ಹೋದಾಗ ಬ್ಯಾಗ್​​ ಟ್ಯಾಕ್ಸಿ ಬಳಿಗೆ ತನ್ನಿ ಎಂದಿದ್ರು. ಬ್ಯಾಗ್​​ ತುಂಬಾ ತೂಕ ಇತ್ತು, ಬ್ಯಾಗ್​​ ತೂಕ ಕಡಿಮೆ ಮಾಡಿ ಎಂದಿದ್ದೆ. ಅದಕ್ಕೂ ಸುಚನಾ ಏನೂ ಉತ್ತರ ನೀಡಲಿಲ್ಲ.

ಗೋವಾ-ಕರ್ನಾಟಕ ಬಾರ್ಡರ್​ನಲ್ಲಿ 6 ಗಂಟೆ ಹೆವಿ ಟ್ರಾಫಿಕ್​ ಇತ್ತು, ಆಗ ಏರ್​​ಪೋರ್ಟ್​ಗೆ ಹೋಗೋಣ ಮೇಡಂ ಎಂದಿದ್ದಕ್ಕೆ ತಲೆ ಅಲ್ಲಾಡಿಸಿದ್ರು. ರಸ್ತೆ ಮೂಲಕವೇ ಬೆಂಗಳೂರಿಗೆ ಹೋಗೋಣ ಎಂದು ಹೇಳಿದ್ರು. ಅನುಮಾನ ಬಂದು ಐಮಂಗಲ ಪೊಲೀಸರ ಬಳಿ ನಿಲ್ಲಿಸಿದ್ದೆ ಎಂದು ಗೋವಾ ಪೊಲೀಸರ ಬಳಿ ಟ್ಯಾಕ್ಸಿ ಡ್ರೈವರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಯಾದಗಿರಿ : ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಕೇಸ್ – ಶಾಲಾ ಮುಖ್ಯ ಶಿಕ್ಷಕನ ಮೇಲೆ FIR..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here