ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಹಿನ್ನಲೆ ಪೊಲೀಸರು ದರ್ಶನ್ ಅಭಿಮಾನಿ ಸಂಘಗಳ ಮೇಲೆ ಕಣ್ಣಿಟ್ಟಿದ್ದಾರೆ. ದರ್ಶನ್ ಅಭಿಮಾನಿಗಳ ಸಂಘದ ಮಾಹಿತಿ ಕಲೆ ಹಾಕ್ತಿದ್ದಂತೆ ಫೇಕ್ ಅಕೌಂಟ್ಸ್ಗಳು ಡಿಲೀಟ್ ಆಗ್ತಿವೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಲಾಕಪ್ನಲ್ಲಿರುವ ನಟನ ಬಗ್ಗೆ ಟೀಕಿಸಿದವರಿಗೆ ದರ್ಶನ್ ರೌಡಿ ಗ್ಯಾಂಗ್ ಕೆಟ್ಟ ಪದಗಳಿಂದ ಬೆದರಿಕೆ ಹಾಕುತ್ತಿದ್ದವು. ಇಷ್ಟು ಮಾತ್ರವಲ್ಲದೇ ಕಿಡ್ನಾಪ್ ಮಾಡಿ ಹಲ್ಲೆ ಕೂಡ ಮಾಡುತ್ತಿವೆ ಎಂದು ತಿಳಿದು ಬಂದಿದೆ.
ಇನ್ನು ರೌಡಿ ಗ್ಯಾಂಗ್ ಬಗ್ಗೆ ಮಾಹಿತಿ ಪಡೆದು ತನಿಖೆಗೆ ಮುಂದಾದ ಪೊಲೀಸರು, ಯಾವ-ಯಾವ ಜಿಲ್ಲೆಗಳಲ್ಲಿ ದರ್ಶನ್ ಅಭಿಮಾನಿಗಳ ಸಂಘ ಇವೆ. ಯಾರು ಅಧ್ಯಕ್ಷ, ಯಾರು ಉಪಾಧ್ಯಕ್ಷ ಅನ್ನೋ ಮಾಹಿತಿ ಸಂಗ್ರಹ ಮಾಡಲು ಎಲ್ಲಾ ಪೊಲೀಸ್ ಠಾಣೆಗಳಿಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಪೊಲೀಸರ ತನಿಖೆ ಶುರುವಾಗ್ತಿದ್ದಂತೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಸೇರಿ ಹಲವು ಗ್ಯಾಂಗ್ ನಾಪತ್ತೆಯಾಗಿವೆ. ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ಊರು ಬಿಟ್ಟು ಪರಾರಿಯಾಗಿರೋ ಗ್ಯಾಂಗ್ ನಮ್ಮ ಬಾಸನ್ನೇ ಜೈಲಿಗೆ ಹಾಕವ್ರೆ ,ಇನ್ನು ನಮ್ಮನ್ನ ಬಿಡ್ತಾರ ಅಂತ ಎಸ್ಕೇಪ್ ಆಗಿವೆ. ಇನ್ನು ಬೆಂಗಳೂರಿನಲ್ಲೂ ದರ್ಶನ್ ಹೆಸ್ರಲ್ಲಿರುವ ಸಂಘಗಳ ಮಾಹಿತಿ ಸಂಗ್ರಹಿಸುತ್ತಿದ್ದು, ಈ ಹಿಂದೆ ಯಾವುದಾದ್ರು ಕ್ರೈಂನಲ್ಲಿ ಭಾಗಿಯಾಗಿದ್ರಾ ಅನ್ನೋ ಮಾಹಿತಿ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ : ದರ್ಶನ್ ಬಾಯಿಂದ ಸತ್ಯ ಕಕ್ಕಿಸಿದ ಖಾಕಿ – 30 ಲಕ್ಷ ಹಣ ನೀಡಿರೋದಾಗಿ ತಪ್ಪೊಪ್ಪಿಕೊಂಡ ದಾಸ..!