Download Our App

Follow us

Home » ಜಿಲ್ಲೆ » ಚಿತ್ರದುರ್ಗದಲ್ಲಿ ಪ್ರೀತಿಸಿ ಮದುವೆಗೆ ರೆಡಿ ಆಗಿದ್ದ ಪ್ರೇಮಿಗಳಿಗೆ ಪೋಷಕರೇ ವಿಲನ್..!

ಚಿತ್ರದುರ್ಗದಲ್ಲಿ ಪ್ರೀತಿಸಿ ಮದುವೆಗೆ ರೆಡಿ ಆಗಿದ್ದ ಪ್ರೇಮಿಗಳಿಗೆ ಪೋಷಕರೇ ವಿಲನ್..!

ಚಿತ್ರದುರ್ಗ : ಪ್ರೀತಿಸಿ ಮದುವೆಗೆ ರೆಡಿ ಆಗಿದ್ದ ಪ್ರೇಮಿಗಳನ್ನು ಪೋಷಕರು ರಸ್ತೆಯಲ್ಲೇ ತಡೆದು, ಯುವತಿಯನ್ನ ಬಲವಂತವಾಗಿ ಬೈಕ್ ಹತ್ತಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ BG ಕೆರೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೂರು ವರ್ಷದಿಂದ ಪ್ರವೀಣ್ ಯುವತಿ ಇಬ್ಬರೂ ಪ್ರೀತಿಸುತ್ತಿದ್ದರು. ಯುವತಿ ಮಂಗಳೂರು ಶ್ರೀದೇವಿ ನರ್ಸಿಂಗ್ ಕಾಲೇಜು ಅತಿಥಿ ಉಪನ್ಯಾಸಕಿಯಾಗಿದ್ದು,  ರಿಜಿಸ್ಟರ್ ಮ್ಯಾರೇಜ್​ಗೆ ರೆಡಿ ಇದ್ದವಳನ್ನು ಪೋಷಕರು ಬಲವಂತವಾಗಿ ಕರೆದೊಯ್ದಿದ್ದಾರೆ. ಬೈಕ್ ಮೇಲೆ ಬಲವಂತವಾಗಿ ಹತ್ತಿಸಿಕೊಂಡು ಹೋಗಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಯುವಕ ಪ್ರವೀಣ್ ಘಟನೆ ಬಳಿಕ ಚಳ್ಳಕೆರೆ DYSP ಕಚೇರಿಗೆ ದೂರು ಸಲ್ಲಿಸಿದ್ದಾನೆ. ಘಟನೆ ಬಳಿಕ ಯುವತಿಯ ಅಣ್ಣ ಶ್ರೀನಿವಾಸ್ ನಿಂದ ಯುವಕನಿಗೆ ಬೆದರಿಕೆ ಕರೆ ಬಂದಿದೆ. ತಂಗಿಗೆ ವಿಷ ಹಾಕಿ ಸಾಯಿಸುತ್ತೇವೆ, ನಿನಗೆ ಕೊಡಲ್ಲ ಎಂದು ವಾಟ್ಸಪ್ ಮೆಸೇಜ್ ಮಾಡಿದ್ದಾನೆ.

ಮರ್ಯಾದೆ ಹತ್ಯೆ ಮಾಡುವುದಾಗಿ ಮೆಸೇಜ್ ಬರುತ್ತಿದ್ದಂತೆ ಪ್ರವೀಣ್​ ಆತಂಕಗೊಂಡಿದ್ದಾನೆ. ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದೇವೆ ಪ್ರವೀಣ್​​ ಹೇಳಿದ್ದು, ನಮ್ಮಿಬ್ಬರಿಗೂ ನ್ಯಾಯ ಕೊಡಿಸಿ ಎಂದು ಯುವಕ ಪ್ರವೀಣ್ ಮನವಿ ಮಾಡಿದ್ದಾನೆ.

ಇದನ್ನೂ ಓದಿ : ತಮಿಳುನಾಡು ಸರ್ಕಾರಕ್ಕೆ ಜಯಲಲಿತಾ ಚಿನ್ನಾಭರಣ ಹಸ್ತಾಂತರ : ಕೋರ್ಟ್‌ನಿಂದ ದಿನಾಂಕ ನಿಗದಿ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here