ಬೆಂಗಳೂರು : ಆಡಿಯೋದಲ್ಲಿರುವ ಶಿವರಾಮೇಗೌಡ ಸಂಭಾಷಣೆಗೆ ನಿಖಿಲ್ ರಿಯಾಕ್ಷನ್ ಕೊಟ್ಟಿದ್ದಾರೆ. ರಾಜಕಾರಣಕ್ಕಾಗಿ ಇನ್ನೊಬ್ಬರ ಸಾವು ಬಯಸಬಾರದು, ಶಿವರಾಮೇಗೌಡರ ಮಾತುಗಳೇ ಅವರ ಮನಸ್ಥಿತಿ ಹೇಳ್ತವೆ. ಕುಮಾರಸ್ವಾಮಿ ಅವ್ರಿಗೆ ನನ್ನ ಭವಿಷ್ಯದ ಚಿಂತೆ ಇಲ್ಲವೇ ಇಲ್ಲ, ನಾನು ಎರಡು ಎಲೆಕ್ಷನ್ ಎದುರಿಸಿದ್ದೇನೆ, ಸೋತಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಕೆಲವೊಮ್ಮೆ ಹೀಗಾಗುತ್ತೆ, ಶಿವರಾಮೇಗೌಡರು ಸರ್ಕಾರದ ಒಬ್ಬ ವ್ಯಕ್ತಿಯ ಹೆಸರು ಹೇಳ್ತಾರೆ. ವೈರಲ್ ವಿಡಿಯೋಗಳಲ್ಲಿ ಮಹಿಳೆಯರನ್ನು ಬ್ಲರ್ ಮಾಡಿಲ್ಲ, ಸಂಸದರ ಮೇಲೆ ಆರೋಪ ಬಂದಿದೆ ಅವರು ಎದುರಿಸಲೇಬೇಕು. ಆದ್ರೆ ಸಂತ್ರಸ್ತೆಯರ ಮಾನ ಹರಾಜು ಹಾಕಿದವರಿಗೆ ಶಿಕ್ಷೆ ಆಗಬೇಕಲ್ಲವೇ..? ದೇವರಾಜೇಗೌಡರು 100 ಕೋಟಿ ಡೀಲ್ ವಿಚಾರ ಹೇಳಿದ್ದಾರೆ ಎಂದಿದ್ದಾರೆ.
ಈ ಎಲ್ಲಾ ವಿಚಾರಗಳು ತಾರ್ಕಿಕ ಅಂತ್ಯ ಕಾಣಬೇಕಲ್ಲವೇ..? ಪ್ರಜ್ವಲ್ SIT ಮುಂದೆ ಬರ್ಬೇಕು ಇದು ನನ್ನ ಅಭಿಪ್ರಾಯ, ಸಂಸದರು ನನ್ನ ಸಂಪರ್ಕದಲ್ಲಿಲ್ಲ ಎಂದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ರೇವ್ ಪಾರ್ಟಿಯಲ್ಲಿ ಬಾಲಿವುಡ್, ಟಾಲಿವುಡ್ ನಟ-ನಟಿಯರು : ಯಾರೆಲ್ಲಾ ಇದ್ರೂ ಗೊತ್ತಾ?