ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನ ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆದೊಯ್ದು ಮಿಡ್ನೈಟ್ನಲ್ಲಿ ಸ್ಪಾಟ್ ಮಹಜರ್ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ.
CPI ಸಂಜೀವ್ ಗೌಡ ನೇತೃತ್ವದಲ್ಲಿ ನಗರದ ಚಳ್ಳಕೆರೆ ಗೇಟ್ನ ಬಾಲಾಜಿ ಬಾರ್ ಬಳಿ ಆರೋಪಿಗಳನ್ನ ಪೊಲೀಸರು ಸ್ಥಳ ಮಹಜರು ಮಾಡಿಸಿದ್ದಾರೆ. ಜಗಳೂರು ಮಹಲಿಂಗಪ್ಪ ಪೆಟ್ರೋಲ್ ಬಂಕ್, ಪುಣೆ-ಬೆಂಗಳೂರು ರಸ್ತೆ ಪಕ್ಕದಲ್ಲೇ ಇರುವ ಪೆಟ್ರೋಲ್ ಬಂಕ್ ಬಳಿ ಸ್ಪಾಟ್ ಮಹಜರ್ ಮಾಡಲಾಗಿದೆ. ಜನರ ಗುಂಪು ಸೇರುತ್ತೆ ಎನ್ನುವ ಕಾರಣಕ್ಕೆ ಮಿಡ್ನೈಟ್ನಲ್ಲಿ ಸ್ಪಾಟ್ ಮಹಜರ್ ಪ್ರಕ್ರಿಯೆ ನಡೆಸಲಾಗಿದೆ.
ಇನ್ನು ಒಂದ್ಕಡೆ ಈ ಪ್ರಕರಣದ ತನಿಖೆ ತೀವ್ರಗೊಂಡಿದ್ದರೆ, ಮತ್ತೊಂದ್ಕಡೆ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ರೌಡಿಶೀಟರ್ ಓಪನ್ ಮಾಡುವ ಸಾಧ್ಯತೆಯೂ ದಟ್ಟವಾಗಿದೆ. ಸಾಮಾನ್ಯವಾಗಿ ಕೊಲೆ ಕೇಸ್ಗಳಲ್ಲಿ ಮತ್ತು ಪದೇ ಪದೇ ಕ್ರೈಮ್ ಮಾಡ್ತಿದ್ರೆ, ರೌಡಿ ಶೀಟ್ ತೆರೆಯಲಾಗುತ್ತೆ. ರೌಡಿ ಶೀಟ್ ತೆರೆಯೋ ಅಧಿಕಾರ ತನಿಖಾಧಿಕಾರಿಗೆ ಇರುತ್ತೆ. ಹೀಗಾಗಿ ದರ್ಶನ್ ಮತ್ತು ಮರ್ಡರ್ ಗ್ಯಾಂಗ್ ವಿರುದ್ಧವೂ ರೌಡಿ ಶೀಟರ್ ತೆರೆಯೋ ಸಾಧ್ಯತೆ ಇದ್ದು, ಆರೋಪಿಗಳ ವಿರುದ್ಧ ಈ ಹಿಂದೆ ದಾಖಲಾದ ಕೇಸ್ಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ : ಚಿತ್ರರಂಗದಿಂದ ದರ್ಶನ್ ಬ್ಯಾನ್? – ಫಿಲ್ಮ್ ಚೇಂಬರ್ ಹೇಳಿದ್ದೇನು?