Download Our App

Follow us

Home » ಅಪರಾಧ » ದರ್ಶನ್​​ ಬಾಯಿಂದ ಸತ್ಯ ಕಕ್ಕಿಸಿದ ಖಾಕಿ – 30 ಲಕ್ಷ ಹಣ ನೀಡಿರೋದಾಗಿ ತಪ್ಪೊಪ್ಪಿಕೊಂಡ ದಾಸ..!

ದರ್ಶನ್​​ ಬಾಯಿಂದ ಸತ್ಯ ಕಕ್ಕಿಸಿದ ಖಾಕಿ – 30 ಲಕ್ಷ ಹಣ ನೀಡಿರೋದಾಗಿ ತಪ್ಪೊಪ್ಪಿಕೊಂಡ ದಾಸ..!

ಬೆಂಗಳೂರು : ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದೆ. ಈ ಕೇಸ್‌ ಅನ್ನು ಬಹಳ ಸೂಕ್ಷ್ಮವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಸಾಕಷ್ಟು ಸಾಕ್ಷಾಧಾರಗಳನ್ನು ಕಲೆ ಹಾಕಿದ್ದಾರೆ. ಇದೀಗ ರೇಣುಕಾಸ್ವಾಮಿ ಕೊಲೆ ಹಿಂದೆ ದರ್ಶನ್ ಗ್ಯಾಂಗ್ ಏನೆಲ್ಲ ಪ್ಲ್ಯಾನ್ ಮಾಡಿದ್ರು? ಹೇಗೆ ತಗ್ಲಾಕೊಂಡ್ರು ಎಂಬ ಬಿಗ್ ಎಕ್ಸ್‍ಕ್ಲೂಸೀವ್ ಮಾಹಿತಿ ಬಿಟಿವಿಗೆ ದೊರೆತಿದೆ.

ಹೌದು, ಕೋರ್ಟ್‍ಗೆ ಸಲ್ಲಿಸಿರುವ ಪೊಲೀಸ್ ರಿಮ್ಯಾಂಡ್ ಕಾಪಿ ಬಿಟಿವಿಗೆ ಲಭ್ಯವಾಗಿದೆ. ಈ ಕಾಫಿಯಲ್ಲಿ ಉಲ್ಲೇಖವಾಗಿರುವ ಪ್ರಕಾರ, ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ನೋಡಿಕೊಳ್ಳಲು 30 ಲಕ್ಷ ರೂ. ನೀಡಿರುವು ದರ್ಶನ್ ಹೇಳಿರುವ ಸ್ವ-ಇಚ್ಛಾ ಹೇಳಿಕೆಯನ್ನು ಪೊಲೀಸರು ರಿಮ್ಯಾಂಡ್ ಕಾಪಿಯಲ್ಲಿ ದಾಖಲಿಸಿದ್ದಾರೆ.

ದರ್ಶನ್​​ ಬಾಯಿಂದ ಸತ್ಯ ಕಕ್ಕಿಸಿದ ಖಾಕಿ : ಪ್ರಕರಣದ ವಿಚಾರಣೆ ವೇಳೆ A2 ಆರೋಪಿ 47 ವರ್ಷದ ದರ್ಶನ್​​ @ಡಿ ಬಾಸ್​​ ತೂಗುದೀಪ ಶ್ರೀನಿವಾಸ್,​​ ಕೊಲೆಯಾದ ರೇಣುಕಾಸ್ವಾಮಿ ಮೃತದೇಹವನ್ನ ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲು ಡೀಲ್ ಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸ್, ಲಾಯರ್ ಮತ್ತು ಶವ ಸಾಗಿಸೋ ವ್ಯಕ್ತಿಗಳಿಗೆ ತಗುಲುವ ವೆಚ್ಚವನ್ನ ಬರಿಸಲು ಪ್ರದೋಷ್​​ 30 ಲಕ್ಷ ರೂ. ಹಣ ನೀಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇನ್ನು A-2 ಆರೋಪಿ ಹೇಳಿಕೆಯ ಮೇರೆಗೆ ಪೊಲೀಸರು ಪ್ರದೋಷ್​​​ನ ಮನೆಯಿಂದ 30 ಲಕ್ಷ ರೂ. ಹಣವನ್ನು ಸೀಜ್​​ ಮಾಡಿದ್ದಾರೆ.

ಇದನ್ನೂ ಓದಿ : ಕನಕಪುರ ಸಹೋದರನಿಗೆ ಬಿಟ್ಟು ಚನ್ನಪಟ್ಟಣ ಉಪ ಚುನಾವಣೆಗೆ ನಿಲ್ತಾರಾ ಡಿಕೆಶಿ?

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here