Download Our App

Follow us

Home » ರಾಜಕೀಯ » ಇಂದಿನಿಂದ ಸಂಸದ ರಾಹುಲ್​​​​ ಗಾಂಧಿಯವರ ನ್ಯಾಯ ಯಾತ್ರೆ ಆರಂಭ..!

ಇಂದಿನಿಂದ ಸಂಸದ ರಾಹುಲ್​​​​ ಗಾಂಧಿಯವರ ನ್ಯಾಯ ಯಾತ್ರೆ ಆರಂಭ..!

ನವದೆಹಲಿ : ಇಂದಿನಿಂದ ಸಂಸದ ರಾಹುಲ್​​​​ ಗಾಂಧಿ ನ್ಯಾಯ ಯಾತ್ರೆ ನಡೆಸಲಿದ್ದಾರೆ. ನ್ಯಾಯ ಯಾತ್ರೆ ಮಣಿಪುರದಿಂದ ಶುರುವಾಗಲಿದ್ದು,
ನ್ಯಾಯಯಾತ್ರೆಗೆ AICC ಅಧ್ಯಕ್ಷ ಖರ್ಗೆ ಚಾಲನೆ ನೀಡಲಿದ್ದಾರೆ.

ಭಾರತ್​​ ಜೋಡೋ ಯಶಸ್ಸಿನ ನಂತರ ರಾಹುಲ್ ಗಾಂಧಿ​​​ ನ್ಯಾಯ​ ಯಾತ್ರೆ ನಡೆಸಲಿದ್ದಾರೆ. ಈ ಯಾತ್ರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಪರಮೇಶ್ವರ್​​, ಎಂ.ಬಿ.ಪಾಟೀಲ್​​​ ಸೇರಿ ಹಲವರು ಭಾಗಿಯಾಗಲಿದ್ದಾರೆ.

ಹಾಗೆಯೇ ರಾಷ್ಟ್ರೀಯ ಕಾಂಗ್ರೆಸ್ ನಾಯಕರು, ರಾಜ್ಯಗಳ ಮುಖಂಡರು ಭಾಗಿಯಾಗಲಿದ್ದು, ಮುಂಬೈವರೆಗೆ 6713 ಕಿ.ಮೀ. ಯಾತ್ರೆ, 15 ರಾಜ್ಯ, 100 ಕ್ಷೇತ್ರ ಟಾರ್ಗೆಟ್​ ಇದೆ. ಇಂಫಾಲದ ಕೋಂಗ್​​ಝೋಮ್​​ ಸ್ಮಾರಕದಿಂದ ಯಾತ್ರೆಗೆ ಚಾಲನೆ ಸಿಗಲಿದೆ.

ಈ ಬಾರಿ ರಾಹುಲ್​​ ಪಾದಯಾತ್ರೆ ಜೊತೆಗೆ ಬಸ್​ನಲ್ಲೂ ಪ್ರಯಾಣಿಸಲಿದ್ದಾರೆ. ಈ ಯಾತ್ರೆ ವಾರಾಣಸಿ, ಸಿಂಧಿಯಾ ಮೂಲಕ ಮಾರ್ಚ್​ 20ಕ್ಕೆ ಮುಂಬೈನಲ್ಲಿ ಅಂತ್ಯವಾಗಲಿದೆ. ಕನ್ಯಾಕುಮಾರಿಯಿಂದ ಶ್ರೀನಗರಕ್ಕೆ ಈ ಹಿಂದೆ ಪಾದಯಾತ್ರೆ ಮಾಡಿದ್ರು, ಭಾರತ್​ ಜೋಡೋ ನಡೆದ 1 ವರ್ಷದ ಬಳಿಕ ನ್ಯಾಯ​ ಯಾತ್ರೆ ನಡೆಯುತ್ತಿದೆ.

ಇದನ್ನೂ ಓದಿ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ಹೈವೇಯಲ್ಲಿ ಭೀಕರ ಅಪಘಾತ : ಇಬ್ಬರ ಸಾ*ವು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here