ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮಾಜಿ ಮಂತ್ರಿ ಮುನಿರತ್ನ SIT ಕಸ್ಟಡಿ ಇಂದು ಅಂತ್ಯವಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಇಂದು ಹಾಜರಾಗಲಿದ್ದಾರೆ.
ಮುನಿರತ್ನರನ್ನು SIT ನ್ಯಾಯಾಲಯಕ್ಕೆ ಹಾಜರು ಪಡಿಸಿ ಮತ್ತೆ ವಶಕ್ಕೆ ಕೇಳಲಿದೆ. ಈಗಾಗಲೇ 10 ದಿನಗಳ ಕಾಲ SIT ಮುನಿರತ್ನರನ್ನು ವಿಚಾರಣೆ ಮಾಡಿದ್ದು, ಮತ್ತೆ ಕಸ್ಟಡಿಗೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಕೇಳಲಿದ್ದಾರೆ.
ಮುನಿರತ್ನ ತನಿಖೆ ಸಹಕಾರ ನೀಡಿಲ್ಲ, ಮತ್ತಷ್ಟು ವಿಚಾರಣೆ ನಡೆಸ್ಬೇಕು, ವಿಚಾರಣೆ ಹಂತದಲ್ಲಿ ಸಂತ್ರಸ್ತೆಯಿಂದ ಮತ್ತಷ್ಟು ಮಾಹಿತಿ ಸಿಕ್ಕಿವೆ. ವಿಡಿಯೋ, ಆಡಿಯೋ ಸಾಕ್ಷ್ಯಗಳ ಬಗ್ಗೆ ವಿಚಾರಣೆ ನಡೆಸಬೇಕಿದೆ, ಹೀಗಾಗಿ ಮತ್ತೆ ಕಸ್ಟಡಿಗೆ ಕೊಡುವಂತೆ SIT ಕೋರಿಕೆ ನೀಡುವ ಸಾಧ್ಯತೆಯಿದೆ. ಮಧ್ಯಾಹ್ನದ ನಂತರ ಶಾಸಕ ಮುನಿರತ್ನರನ್ನು SIT ಅಧಿಕಾರಿಗಳು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ.
ಇದನ್ನೂ ಓದಿ : ಹೈಕೋರ್ಟ್ನಲ್ಲಿ ನಿರ್ದೇಶಕ A.P ಅರ್ಜುನ್ಗೆ ಗೆಲುವು – ಮಾರ್ಟಿನ್ ಪೋಸ್ಟರ್ನಲ್ಲಿ ನಿರ್ದೇಶಕರ ಹೆಸರು ಬಳಸಲು ಆದೇಶ..!