ಬೆಂಗಳೂರು : ಬೆಂಗಳೂರು ಪೊಲೀಸರ ವಿರುದ್ಧ ಮಂಡ್ಯ MLA ಗಂಭೀರ ಆರೋಪ ಮಾಡಿದ್ದಾರೆ. MLA ರವಿಕುಮಾರ್ಗೌಡ ರೋಲ್ ಕಾಲ್ ಎಂದು ಗುಡುಗಿದ್ದಾರೆ. ದರ್ಶನ್ ಸೇರಿ ಸೆಲೆಬ್ರಿಟಿಗಳಿಗೆ ನೋಟಿಸ್ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಧಿ ಮೀರಿ ಓಪನ್ ಇದ್ದ ಪಬ್ ಮೇಲೆ ಏಕೆ ಕ್ರಮವಿಲ್ಲ ಎಂದು MLA ರವಿಕುಮಾರ್ಗೌಡ ಪ್ರಶ್ನೆ ಮಾಡಿದ್ದಾರೆ. ಪೊಲೀಸ್ ತಪ್ಪು ಮುಚ್ಚಿ ಹಾಕಲು ಸೆಲೆಬ್ರಿಟಿಗಳಿಗೆ ನೋಟಿಸ್ ಎಂದು ಕಿಡಿ ಕಾರಿದ್ದಾರೆ. ಬೆಂಗಳೂರು ಪೊಲೀಸರ ವಿರುದ್ಧ MLA ಹರಿಹಾಯ್ದಿದ್ದಾರೆ.
ಗೃಹ ಸಚಿವರೇ ಪೊಲೀಸರ ಮಾತು ಕೇಳಬೇಡಿ, CCTV ಚೆಕ್ ಮಾಡಿ. ನಿಮ್ಮ ಪೊಲೀಸರು ಜೆಟ್ ಲ್ಯಾಗ್ ಪಬ್ಗೆ ಹೋಗೇ ಇಲ್ಲ. 24 ಗಂಟೆಯಲ್ಲಿ ಇನ್ಸ್ಪೆಕ್ಟರ್, ACP, DCPಯನ್ನು ಸಸ್ಪೆಂಡ್ ಮಾಡಿ, ಜೆಟ್ ಲ್ಯಾಗ್ ಪಬ್ ಮುಂಜಾನೆವರೆಗೆ ತೆರೆಯೋಕೆ ಬಿಟ್ಟಿದ್ಯಾರು..? ಎಂದು ಪ್ರಶ್ನಿಸಿದ್ದಾರೆ.
ನೆಲದ ಕಾನೂನು ರಾತ್ರಿ 1 ಗಂಟೆವರೆಗೂ ಮಾತ್ರ ಅವಕಾಶ ಕೊಟ್ಟಿದೆ, ಮುಂಜಾನೆ 3.30ರವರೆಗೆ ಓಪನ್ ಆಗಲು ಬಿಟ್ಟಿದ್ದೇಕೆ..? ಜೆಟ್ ಲ್ಯಾಗ್ ಪಬ್ ಬಳಿಗೆ ಹೋಗಿದ್ರೆ ವಿಡಿಯೋ ರಿಲೀಸ್ ಮಾಡಿ. ಪಬ್, ಬಾರ್ ಜತೆ ಪೊಲೀಸರು ಅಡ್ಜೆಸ್ಟ್ ಮೆಂಟ್ ಆಗಿದ್ದಾರೆ.
ಚರ್ಚ್ ಸ್ಟ್ರೀಟ್ನಲ್ಲಿ ಎಷ್ಟೊತ್ತಿನವರೆಗೆ ಪಬ್, ಕ್ಲಬ್, ಬಾರ್ ಓಪನ್ ಇರ್ತೆವೆ. ಪಬ್, ಬಾರ್, ಕ್ಲಬ್ ಮೇಲೆ ಕ್ರಮ ಕೈಗೊಳ್ಳೋಕೆ ಆಗ್ತಾ ಇಲ್ಲ, ಗ್ರಾಹಕರಿಗೆ ನೋಟಿಸ್ ಕೊಡೋದಾದ್ರೆ ದಿನಕ್ಕೆ ಲಕ್ಷ ಮಂದಿಗೆ ಕೊಡ್ಬೇಕು. ಕನ್ನಡ ಬೋರ್ಡ್ಗೆ ಹೋರಾಡಿದ ನಾರಾಯಣಗೌಡರ ಅರೆಸ್ಟ್ ಮಾಡ್ತೀರಿ.
ರೂಲ್ಸ್ ಬ್ರೇಕ್ ಮಾಡಿದ ಪಬ್, ಕ್ಲಬ್, ಬಾರ್ಗಳ ಮೇಲೆ ಏಕೆ ಕ್ರಮವಿಲ್ಲ ಎಂದು ಬೆಂಗಳೂರಿನಲ್ಲಿ ಮಂಡ್ಯ ಶಾಸಕ ರವಿಕುಮಾರ್ ಗೌಡ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಬೆಳಗಾವಿ : 9 ನವಿಲುಗಳಿಗೆ ವಿಷದ ಕಾಳು ಹಾಕಿ ಕೊಂದ ದುಷ್ಕರ್ಮಿಗಳು..!