ವಿಜಯನಗರ : ಹೊಸಪೇಟೆ ತಾಲೂಕಿನ ಹಂಪಿಯ ಹೇಮಕೂಟದ ಬಳಿ ಗುಡ್ಡದ ಮೇಲೆ ಚಿರತೆ ಕಂಡುಬಂದಿದೆ. ಹೇಮಕೂಟದ ಬಳಿ ಗುಡ್ಡದ ಮೇಲೆ ಸೋಮವಾರ ಸಂಜೆ ವೇಳೆ ಚಿರತೆ ಪ್ರತ್ಯಕ್ಷವಾಗಿದೆ. ಗುಡ್ಡದ ಮೇಲಿನ ದೊಡ್ಡ ಕಲ್ಲು ಬಂಡೆ ಏರಿ ಕುಳಿತಿದ್ದ ಚಿರತೆಯ ವಿಡಿಯೋ ಹಾಗೂ ಫೋಟೋಸ್ ಸ್ಥಳೀಯ ನಿವಾಸಿಯೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೆಲ ದಿನಗಳ ಹಿಂದೆ ಹಂಪಿ ಮತ್ತು ಕನ್ನಡ ವಿವಿಯಲ್ಲಿ ಕರಡಿಗಳು ಜನ ನಿಬಿಡ ಪ್ರದೇಶದಲ್ಲಿ ಕಂಡು ಬಂದಿದ್ದವು. ಈಗ ಚಿರತೆಯ ಸರದಿಯಾಗಿದ್ದು, ಸಾಯಂಕಾಲದ ಹೊತ್ತು ಚಿರತೆ ಗುಡ್ಡದ ಮೇಲೆ ಕಂಡು ಬಂದಿದೆ.
ಚಿರತೆ ಪ್ರತ್ಯಕ್ಷಗೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಹಂಪಿಯ ಕೆಲ ಪ್ರದೇಶದಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿದ್ದವು. ಆದ್ರೆ ಇಲ್ಲಿಯವರೆಗೆ ಈ ಪ್ರದೇಶದಲ್ಲಿ ಚಿರತೆ ಮತ್ತು ಮಾನವ ಸಂಘರ್ಷದ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲಾ.
ಇದನ್ನೂ ಓದಿ : ಉಡುಪಿಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಭೇಟಿ..!
Post Views: 34