Download Our App

Follow us

Home » ಅಪರಾಧ » ಕಾಂಗ್ರೆಸ್​ MLAಗೆ ಹನಿಟ್ರ್ಯಾಪ್​​ : ಕೋಟಿ-ಕೋಟಿ ಹಣಕ್ಕೆ ಬೇಡಿಕೆ ಇಟ್ಟ ವಂಚಕರು CCB ಬಲೆಗೆ..!

ಕಾಂಗ್ರೆಸ್​ MLAಗೆ ಹನಿಟ್ರ್ಯಾಪ್​​ : ಕೋಟಿ-ಕೋಟಿ ಹಣಕ್ಕೆ ಬೇಡಿಕೆ ಇಟ್ಟ ವಂಚಕರು CCB ಬಲೆಗೆ..!

ಬೆಂಗಳೂರು : ಕಾಂಗ್ರೆಸ್​ MLAಗೆ ಕೋಟಿ-ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್​ಮೇಲ್​ ಮಾಡ್ತಿದ್ದ ವಂಚಕರು CCB ಬಲೆಗೆ ಬಿದಿದ್ದಾರೆ. ಮೈಸೂರು ಮೂಲದ ಸಂತೋಷ್​, ಪುಟ್ಟರಾಜು ಬಂಧಿತ ಆರೋಪಿಗಳು. ಆರೋಪಿಗಳ ಗ್ಯಾಂಗ್​​ನಲ್ಲಿ ಓರ್ವ ಯುವತಿಯೂ ಶಾಮೀಲಾಗಿರುವುದು ತಿಳಿದು ಬಂದಿದೆ.

ಆರೋಪಿಗಳು ಪ್ರಭಾವಿಗಳನ್ನು ಸಂಪರ್ಕಿಸಿ ಫಾಲೋ ಮಾಡುತ್ತಿದ್ದರು. ಬಳಿಕ VIPಗಳನ್ನು ಭೇಟಿ ಮಾಡಿ ನಂಬರ್ ಪಡೆದು, VIPಗಳು ಹೋಟೆನಲ್ಲಿ ಉಳಿದು ಖಾಲಿ ಮಾಡ್ತಿದ್ದ ರೂಂ ಇವ್ರು ಬಾಡಿಗೆ ಪಡೆಯುತ್ತಿದ್ದರು. ನಂತರ ರೂಂನಲ್ಲಿ ಯುವತಿ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡ್ತಿದ್ದ ಗ್ಯಾಂಗ್ ಹಿಡನ್ ಕ್ಯಾಮರ್ ಇಟ್ಟ ರೀತಿಯಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ನಂತರ ವಿಡಿಯೋ ಕಳಿಸಿ ನಿಮ್ಮದೇ ವೀಡಿಯೋ ಎಂದು ಬೆದರಿಸಿ, ಕೋಟ್ಯಾಂತರ ರೂ ಹಣಕ್ಕೆ ಬೇಡಿಕೆ ಇಡುತ್ತಿದ್ದರು.

ಅದೇ ರೀತಿ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡಗೂ ಗ್ಯಾಂಗ್ ಬ್ಲಾಕ್ ಮೇಲ್ ಮಾಡುತ್ತಿತ್ತು. ಬ್ಲಾಕ್ ಮೇಲ್ ಮಾಡ್ತಿದ್ದಂತೆ ಹರೀಶ್ ಗೌಡ ದೂರು ನೀಡಿದ್ದರು. ಸಿಸಿಬಿ ಪೊಲೀಸ್ ಠಾಣೆಯಲ್ಲೆ ಕೇಸ್ ದಾಖಲಿಸಿ ತನಿಖೆ ಶುರುಮಾಡಿದ ಪೊಲೀಸರು ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ವಿವಿಯೊಂದರ ಉಪಕುಲಪತಿಗೂ ವಂಚಕರು ಬ್ಲಾಕ್​ಮೇಲ್​ ಮಾಡಿರುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : ಹೆಚ್ಚುವರಿ ಡಿಸಿಎಂಗಳನ್ನು ಮಾಡೋದಾದ್ರೆ ಡಿಕೆಶಿಯನ್ನು ಸಿಎಂ ಮಾಡಿ : ಶಿವಗಂಗ ಬಸವರಾಜ್ ಸ್ಫೋಟಕ ಹೇಳಿಕೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here