Download Our App

Follow us

Home » ಅಪರಾಧ » ಸಂತ್ರಸ್ತೆ ಕಿಡ್ನಾಪ್ ಪ್ರಕರಣ : SIT ಮುಂದೆ ಹೆಚ್​.ಡಿ ರೇವಣ್ಣ ಹೇಳಿದ್ದೇನು..?

ಸಂತ್ರಸ್ತೆ ಕಿಡ್ನಾಪ್ ಪ್ರಕರಣ : SIT ಮುಂದೆ ಹೆಚ್​.ಡಿ ರೇವಣ್ಣ ಹೇಳಿದ್ದೇನು..?

ಬೆಂಗಳೂರು : ಸಂತ್ರಸ್ತೆ ಕಿಡ್ನಾಪ್ ಸಂಬಂಧ SIT ಅಧಿಕಾರಿಗಳು ರೇವಣ್ಣನನ್ನು ವಿಚಾರಣೆ ಮಾಡಿದ್ದಾರೆ. SIT ಮುಖ್ಯಸ್ಥ ಬಿ.ಕೆ.ಸಿಂಗ್​​ ಹಾಗೂ ತಂಡದಿಂದ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ನಾವು ಯಾವುದೇ ಕಾರಣಕ್ಕೂ ಆಕೆಯನ್ನ ಕಿಡ್ನಾಪ್ ಮಾಡಿಲ್ಲ, ಎಲೆಕ್ಷನ್ ಇರುವ ಕಾರಣಕ್ಕೆ ಆಕೆ ನಮ್ಮ ಮನೆಗೆ ಬಂದಿದ್ದರು. ಕೆಲವು ವರ್ಷಗಳಿಂದ ನಮ್ಮ ಮನೆಯಲ್ಲೇ ಕೆಲಸಕ್ಕಿದ್ದರು, ಇಷ್ಟು ಬಿಟ್ಟು ನನಗೇನೂ ಗೊತ್ತಿಲ್ಲ ಎಂದಿದ್ದಾರೆ.

ಈ​ ಪ್ರಕರಣ ಸಂಬಂಧ SIT ಅಧಿಕಾರಿಗಳು ಮಾಜಿ ಸಚಿವ ಹೆಚ್​.ಡಿ.ರೇವಣ್ಣನ್ನು ಅರೆಸ್ಟ್​ ಮಾಡಿದ್ದಾರೆ. ಹೆಚ್​.ಡಿ.ರೇವಣ್ಣ ರಾತ್ರಿಯಿಡೀ ಒತ್ತಡದಲ್ಲೇ ಇದ್ದರು. ಇದೀಗ ರೇವಣ್ಣ ಪುತ್ರ ಪ್ರಜ್ವಲ್​​​ ಮತ್ತು ತನ್ನ ಭವಿಷ್ಯದ ಬಗ್ಗೆ ಆಲೋಚಿಸುತ್ತಿದ್ದು, ದೇವೇಗೌಡರ ಮನೆಯಲ್ಲೇ ಅರೆಸ್ಟ್ ಆಗಿದ್ದಕ್ಕೆ ಇನ್ನಷ್ಟು ಬೇಸರಗೊಂಡಿದ್ದಾರೆ. ಆದರೆ ಮುಂದಿನ ಕಾನೂನು ಪ್ರಕ್ರಿಯೆಗಳ ಸಂಬಂಧವೂ ಆಲೋಚನೆ ಮಾಡುತ್ತಿದ್ದಾರೆ.

ಸಂತ್ರಸ್ತೆ ರೇವಣ್ಣ ಆಪ್ತನ ಮನೇಲಿ ಪತ್ತೆ : ಕೆ.ಆರ್​​​.ನಗರದಿಂದ ಕಿಡ್ನಾಪ್​ ಆಗಿದ್ದ ಸಂತ್ರಸ್ತೆ ರೇವಣ್ಣ ಆಪ್ತನ ಮನೇಲಿ ನಿನ್ನೆ ಪತ್ತೆಯಾಗಿದ್ದರು. ಮೇ 2ರಂದು ನನ್ನ ತಾಯಿ ಕಾಣೆಯಾಗಿದ್ದಾರೆ ಎಂದು ಪುತ್ರ ದೂರು ನೀಡಿದ್ದ. SIT ಪೊಲೀಸರು ನಿನ್ನೆ ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದಾರೆ. ಪೆನ್​ಡ್ರೈವ್​ ವಿಡಿಯೋದಲ್ಲಿದ್ದರು ಎನ್ನಲಾದ ಸಂತ್ರಸ್ತೆ ನಿನ್ನೆ ರೇವಣ್ಣ PA ರಾಜಶೇಖರ್​ ಎಂಬುವರ ಮನೆಯಲ್ಲಿ ಪತ್ತೆಯಾಗಿದ್ದರು. ಭವಾನಿ ಕರೆಯುತ್ತಿದ್ದಾರೆ ಎಂದು ಸಂಬಂಧಿ ಸತೀಶ್​ ಬಾಬು ಕರೆದೊಯ್ದಿದ್ದ, SIT ಅಧಿಕಾರಿಗಳು ಸತೀಶ್​ ಬಾಬುನನ್ನು ಅರೆಸ್ಟ್​ ಮಾಡಿ ವಿಚಾರಣೆ ನಡೆಸಿದ್ದರು. ನಿನ್ನೆ ರಾಜಶೇಖರ್​​ ತೋಟದ ಮನೆಯಲ್ಲಿದ್ದ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದಾರೆ.

ಇದನ್ನೂ ಓದಿ : ಸಂತ್ರಸ್ತೆಯ ಕಿಡ್ನಾಪ್ ಪ್ರಕರಣ : ಮಾಜಿ ಸಚಿವ ಹೆಚ್.ಡಿ ರೇವಣ್ಣ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here