Download Our App

Follow us

Home » ಮೆಟ್ರೋ » ಸಂಚಾರ ನಿಯಮ ಪಾಲಿಸದವರಿಗೆ ಹೂ ನೀಡಿ ಯಮನ ಪಾಠ, ಚಿತ್ರಗುಪ್ತನ ಲೆಕ್ಕ..!

ಸಂಚಾರ ನಿಯಮ ಪಾಲಿಸದವರಿಗೆ ಹೂ ನೀಡಿ ಯಮನ ಪಾಠ, ಚಿತ್ರಗುಪ್ತನ ಲೆಕ್ಕ..!

ಬೆಂಗಳೂರು : ಸಂಚಾರ ನಿಯಮ ಪಾಲಿಸದ ವಾಹನ ಚಾಲಕರು ಹಾಗೂ ಸವಾರರಿಗಾಗಿ ಯಮ ಹಾಗೂ ಚಿತ್ರಗುಪ್ತ ಭೂಲೋಕಕ್ಕೆ ಬಂದು ಪಾಠ ಹೇಳಿರುವುದು ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ನಡೆದಿದೆ.

ಹೌದು.. ಯಮ ಧರ್ಮರಾಯ ಯಮಲೋಕದಿಂದ ಭೂಲೋಕಕ್ಕೆ ಇಳಿದು ಸಂಚಾರ ನಿಯಮ ಪಾಲಿಸುವಂತೆ ಹರಿಹಾಯ್ದಿದ್ದಾನೆ. ಹೆಲ್ಮೆಟ್ ಹಾಕದೆ ಈ ಸವಾರ ಎಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾನೆ ಎಂದು ಯಮ ಧರ್ಮರಾಯ ಚಿತ್ರಗುಪ್ತನಿಗೆ ಪ್ರಶ್ನೆ ಮಾಡಿದ್ದಾನೆ. ಪುಸ್ತಕ ತೆಗೆದು 20 ಬಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಚಿತ್ರಗುಪ್ತ ಹೇಳಿದ್ದಾನೆ.

ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯ್ತಿಲ್ಲವೆ, ಶಿರಸ್ತ್ರಾಣ ಯಾಕೆ ಧರಿಸಿಲ್ಲ ಅಂತಾ ವಾಹನ ಸವಾರರನ್ನು ಯಮ ತರಾಟೆ ತೆಗೆದುಕೊಂಡಿದ್ದಾನೆ. ಉಪ್ಪಾರಪೇಟೆ ಸಂಚಾರ ಪೊಲೀಸರು ಈ ರೀತಿ ಒಂದು ವಿನೂತನ ಪ್ರಯತ್ನ ಮಾಡಿದ್ದಾರೆ.

ಸಂಚಾರ ನಿಯಮ ಪಾಲಿಸದ ಸವಾರರಿಗೆ ಗುಲಾಬಿ ಹೂ ನೀಡಿ ನಿಮಯಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಉಪ್ಪಾರಪೇಟೆ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಕೃಷ್ಣಮೂರ್ತಿ ಅಂಡ್ ಟೀಂ ನಿಂದ ಈ ರೀತಿಯ ಒಂದು ಟ್ರಾಫಿಕ್ ಅವೇರ್ ನೆಸ್ ಮೂಡಿಸಿದ್ದಾರೆ.

ಇದನ್ನೂ ಓದಿ : ಕಲಬುರಗಿ : ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಪ್ರಯಾಣಿಸುತ್ತಿದ್ದ ಕಾರ್ ಪಲ್ಟಿ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here