ಹಾಸನ : ರಾಜ್ಯದಲ್ಲಿ ಮೊದಲ ಬಿಎನ್ಎಸ್ ಪ್ರಕರಣವೊಂದು ದಾಖಲಾಗಿದೆ. ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದ ಸಾಗರ್ ಎಂಬಾತನ ವಿರುದ್ದ ಹಾಸನ ರೂರಲ್ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಅಂಡರ್ ಸೆಕ್ಷನ್ 281, 106 ಅಡಿ ಪ್ರಕರಣ ದಾಖಲಾಗಿದೆ.
ಕಾಶಿ ಯಾತ್ರೆ ಮುಗಿಸಿ ವಾಪಾಸ್ ಆಗಿದ್ದ ಶಂಕರೇಗೌಡರ ಅತ್ತೆ ಹಾಗೂ ಮಾವ ಯೋಗೇಶ್ರನ್ನ ಇಂದು ಕಾರು ಚಾಲಕ ಸಾಗರ್ ಪಿಕಪ್ ಮಾಡಿದ್ದನು. ಆದರೆ ಚಾಲಕ ಸಾಗರ್ನ ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ಕಾರು ಹಾಸನದ ಹಳೆಬೀಡು ರಸ್ತೆ ಸೀಗೇಗೇಟ್ ಹತ್ತಿರದ ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದಿದೆ.
ಇನ್ನು ಘಟನೆಯ ಪರಿಣಾಮ ಅಪಘಾತದಲ್ಲಿ ಯೋಗೇಶ್ ಬಚಾವ್ ಆಗಿದ್ರೆ ವೈದ್ಯರ ಅತ್ತೆ ಇಂದು ಸಾವನ್ನಪ್ಪಿದ್ದಾರೆ. ಈ ಸಂಬಂಧ ವೈದ್ಯ ಶಂಕರೇಗೌಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಹಾಸನ ರೂರಲ್ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ 6-30ಕ್ಕೆ ಮೊದಲ ಬಿಎನ್ ಎಸ್ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಿಯಾಲಿಟಿ ಶೋ ಹೆಸರಿನಲ್ಲಿ ವಂಚನೆ : ಪೋಷಕರಿಂದ ಲಕ್ಷಾಂತರ ಹಣ ಪಡೆದ ಕಂಪೆನಿ – ಪ್ರಕರಣ ದಾಖಲು..!