Download Our App

Follow us

Home » ಅಪರಾಧ » ಅತಿ ವೇಗ ಹಾಗೂ ನಿರ್ಲಕ್ಷ್ಯದಡಿ ರಾಜ್ಯದಲ್ಲಿ ಮೊದಲ ಬಿಎನ್​​​ಎಸ್ ಪ್ರಕರಣ ದಾಖಲು..!

ಅತಿ ವೇಗ ಹಾಗೂ ನಿರ್ಲಕ್ಷ್ಯದಡಿ ರಾಜ್ಯದಲ್ಲಿ ಮೊದಲ ಬಿಎನ್​​​ಎಸ್ ಪ್ರಕರಣ ದಾಖಲು..!

ಹಾಸನ : ರಾಜ್ಯದಲ್ಲಿ ಮೊದಲ ಬಿಎನ್​​ಎಸ್ ಪ್ರಕರಣವೊಂದು ದಾಖಲಾಗಿದೆ. ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದ ಸಾಗರ್ ಎಂಬಾತನ ವಿರುದ್ದ ಹಾಸನ ರೂರಲ್ ಪೊಲೀಸ್ ಠಾಣೆಯಲ್ಲಿ ಬಿಎನ್​​​ಎಸ್ ಅಂಡರ್ ಸೆಕ್ಷನ್ 281, 106 ಅಡಿ ಪ್ರಕರಣ ದಾಖಲಾಗಿದೆ.

ಕಾಶಿ ಯಾತ್ರೆ ಮುಗಿಸಿ ವಾಪಾಸ್ ಆಗಿದ್ದ ಶಂಕರೇಗೌಡರ ಅತ್ತೆ  ಹಾಗೂ  ಮಾವ ಯೋಗೇಶ್​​ರನ್ನ ಇಂದು ಕಾರು ಚಾಲಕ  ಸಾಗರ್​​ ಪಿಕಪ್ ಮಾಡಿದ್ದನು. ಆದರೆ ಚಾಲಕ ಸಾಗರ್​​​ನ ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ಕಾರು ಹಾಸನದ ಹಳೆಬೀಡು ರಸ್ತೆ ಸೀಗೇಗೇಟ್ ಹತ್ತಿರದ ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದಿದೆ.

ಇನ್ನು ಘಟನೆಯ ಪರಿಣಾಮ ಅಪಘಾತದಲ್ಲಿ ಯೋಗೇಶ್ ಬಚಾವ್ ಆಗಿದ್ರೆ  ವೈದ್ಯರ ಅತ್ತೆ ಇಂದು ಸಾವನ್ನಪ್ಪಿದ್ದಾರೆ. ಈ ಸಂಬಂಧ ವೈದ್ಯ ಶಂಕರೇಗೌಡ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ  ಹಾಸನ ರೂರಲ್ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ 6-30‌ಕ್ಕೆ  ಮೊದಲ ಬಿಎನ್ ಎಸ್ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರಿಯಾಲಿಟಿ ಶೋ ಹೆಸರಿನಲ್ಲಿ ವಂಚನೆ : ಪೋಷಕರಿಂದ ಲಕ್ಷಾಂತರ ಹಣ ಪಡೆದ ಕಂಪೆನಿ – ಪ್ರಕರಣ ದಾಖಲು..!

Leave a Comment

DG Ad

RELATED LATEST NEWS

Top Headlines

ಚಿಕ್ಕೋಡಿ : ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಪುಂಡಾಟ ಮೆರೆದ ಯುವಕರು..!

ಬೆಳಗಾವಿ : ಈದ್ ಮಿಲಾದ್  ಹಬ್ಬದ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಕೆಲ ಯುವಕರು ಪುಂಡಾಟ ಮೆರೆದ ಘಟನೆ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ

Live Cricket

Add Your Heading Text Here