ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆಗೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಚಿವರೇ ಅಧಿಕಾರಿ ಚಂದ್ರಶೇಖರ್ ಮೇಲೆ ನೇರ ಒತ್ತಡ ಹೇರಿದ್ದರು. ಮೇಲಾಧಿಕಾರಿಗಳಿಂದಲೂ ಸಚಿವರ ಆದೇಶ ಪಾಲಿಸುವಂತೆ ಬೆದರಿಕೆ ಬಂದಿತ್ತು. ಅಕ್ರಮಕ್ಕೆ ಸಾಥ್ ಕೊಡದಿದ್ರೆ ತಪ್ಪಿನಲ್ಲಿ ಸಿಕ್ಕಿಸುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ವಾಲ್ಮೀಕಿ ಸಮುದಾಯದ ಮುಖಂಡರಿಂದ ಬಿಟಿವಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
ಒತ್ತಡಕ್ಕೆ ಸಿಲುಕಿ ಒಲ್ಲದ ಮನಸಿನಿಂದಲೇ ಚಂದ್ರಶೇಖರ್ ಅಕ್ರಮ ನಡೆಸಿದ್ರಾ ಅನ್ನೊ ಪ್ರಶ್ನೆ ಎದುರಾಗಿದೆ. ಚಂದ್ರಶೇಖರ್ಗೆ ನಿಗಮದಲ್ಲಿ ಪ್ರಾಮಾಣಿಕ ಅಧಿಕಾರಿ ಎನ್ನುವ ಹೆಸರಿದೆ. ಅವರು ನಿಯಮ ಮೀರಿ ಕೆಲಸ ಮಾಡಿದವರೇ ಅಲ್ಲ ಎಂದು ಸಮುದಾಯದ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನಿಗಮದ MDಯೇ ಎಲ್ಲಾ ಅಕ್ರಮಕ್ಕೂ ಕಿಂಗ್ಪಿನ್ ಎಂಬ ಆಪಾದನೆ ಕೇಳಿಬರುತ್ತಿದೆ.
ಇದೀಗ ವಾಲ್ಮೀಕಿ ಸಮುದಾಯ ಪದ್ಮನಾಭ್ ವಿರುದ್ಧವೇ ತಿರುಗಿಬಿದ್ದಿತ್ತು. ಪದ್ಮನಾಭ್ ವಿರುದ್ಧ ಅಕ್ರಮ-ಭ್ರಷ್ಟಾಚಾರದ ಆರೋಪಗಳಿದ್ದವು, ಹಾಗಾಗಿ ಪದ್ಮನಾಭ್ MDಯಾಗಿ ನಿಯೋಜಿಸಿಕೊಳ್ಳದಂತೆ ಮುಖಂಡರು ಮನವಿ ಮಾಡಿದ್ದರು. ಆದ್ರೂ ಅವರೇ ಬೇಕೆಂದು ಸಚಿವ ನಾಗೇಂದ್ರ ಅವರು MD ಮಾಡಿಕೊಂಡಿದ್ದರು. ಸಾಕಷ್ಟು ವಿರೋಧಗಳ ಹೊರತಾಗ್ಯೂ ಪದ್ಮನಾಭ್ MD ಮಾಡಿದ್ದೇಕೆ..? ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಿಸೋ ಪ್ಲ್ಯಾನ್ ಇತ್ತಾ..? ವಾಲ್ಮೀಕಿ ನಿಗಮದಲ್ಲಿ ನಡೆದಿದ್ದ ಗೋಲ್ಮಾಲ್ ಸಚಿವರಿಗೆ ಮೊದಲೇ ಗೊತ್ತಿತ್ತಾ..? ಅನ್ನೊ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಅನುಮಾನಸ್ಪದ ಕಪ್ಪು ಬ್ಯಾಗ್ ಪತ್ತೆ..!