ನವದೆಹಲಿ : ಬಿಜೆಪಿಗೆ ಸ್ಪಷ್ಟ ಬಹುಮತ ಬರದ ಕಾರಣ ಮೈತ್ರಿ ಪಕ್ಷಗಳೊಂದಿಗೆ ಸಮ್ಮಿಶ್ರ ಸರಕಾರ ರಚಿಸಬೇಕಿದೆ. ಅದರಲ್ಲಿ TDP ಮತ್ತು JDU ಪಕ್ಷಗಳದ್ದೇ ಪ್ರಮುಖ ಪಾತ್ರ. ಹೀಗಾಗಿ ನೂತನ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ತಮ್ಮ ಪಕ್ಷಗಳಿಗೆ ನೀಡಬೇಕು ಎಂದು ಮೈತ್ರಿಕೂಟದ ನಾಯಕರು ಪಟ್ಟು ಹಿಡಿದಿದ್ದರು. ಇದರಿಂದಾಗಿ ಬಿಜೆಪಿ ನಾಯಕತ್ವ ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಇದೀಗ ಪ್ರಭಾವಿ ಖಾತೆಗೆ ಪಟ್ಟು ಹಿಡಿದ ಮಿತ್ರ ಪಕ್ಷಗಳಿಗೆ ಬಿಗ್ ಶಾಕ್ ಎದುರಾಗಿದೆ.
ದೊಡ್ಡ ಖಾತೆಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಗೃಹ, ಹಣಕಾಸು ಇಲಾಖೆ ಯಾರಿಗೂ ಕೊಡಲ್ಲ. ರೈಲ್ವೆ, ವಿದೇಶಾಂಗ ಇಲಾಖೆ, ಕಾನೂನು ಸಂಸದೀಯ, ರಕ್ಷಣಾ ಖಾತೆ, ಮಾಹಿತಿ ತಂತ್ರಜ್ಞಾನ ಖಾತೆಯನ್ನ ಬಿಜೆಪಿಯಲ್ಲೇ ಉಳಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಹಾಗೆಯೇ ಹೆದ್ದಾರಿ ಸಚಿವಾಲಯವನ್ನೂ ಬಿಜೆಪಿಯೇ ಉಳಿಸಿಕೊಳ್ಳೋ ಸಾಧ್ಯತೆಯಿದೆ. ಹಣಕಾಸು, ಗ್ರಾಮೀಣಾಭಿವೃದ್ಧಿ, IT ಖಾತೆಯನ್ನು ಚಂದ್ರಬಾಬು ನಾಯ್ಡು ಕೇಳ್ತಿದ್ದು, ಬಿಹಾರದ ನಿತೀಶ್ಕುಮಾರ್ ರೈಲ್ವೆ ಇಲಾಖೆಗೆ ಪಟ್ಟು ಹಿಡಿದಿದ್ದಾರೆ.
ಚಿರಾಗ್ ಪಾಸ್ವಾನ್ ಅವರ ಕೂಡ ರೈಲ್ವೆ ಇಲಾಖೆಗೆ ಬಿಗಿ ಪಟ್ಟು ಹಿಡಿದಿದ್ದು, ಮಾಜಿ ಸಿಎಂ ಹೆಚ್ಡಿಕೆಗೆ ಕೃಷಿ ಅಥವಾ ನೀರಾವರಿ ನೀಡುವ ಸಾಧ್ಯತೆಯಿದೆ. ತೆಲುಗು ದೇಶಂ ಪಾರ್ಟಿ 6 ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದೆ. 3 ಸ್ಥಾನಗಳಿಗೆ ಜೆಡಿಯು, 2 ಸ್ಥಾನಗಳಿಗೆ ಶಿವಸೇನೆ ಶಿಂಧೆ ಬಣ ಸಜ್ಜಾಗಿದ್ದು, ಕರ್ನಾಟಕಕ್ಕೆ 3ರಿಂದ 4 ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್ ಅಥವಾ ಬಿ.ವೈ.ರಾಘವೇಂದ್ರಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಇಂದು ಅಂತ್ಯ – ಮಾಜಿ ಸಂಸದ ಜೈಲಿಗಾ? ಮತ್ತೆ SIT ಕಸ್ಟಡಿಗಾ?