Download Our App

Follow us

Home » ರಾಜಕೀಯ » ವಿಧಾನಸಭೆಯಲ್ಲಿ ಸಿಎಂ ಪರ ಡಿಸಿಎಂ ಡಿಕೆಶಿ ಬ್ಯಾಟಿಂಗ್..!

ವಿಧಾನಸಭೆಯಲ್ಲಿ ಸಿಎಂ ಪರ ಡಿಸಿಎಂ ಡಿಕೆಶಿ ಬ್ಯಾಟಿಂಗ್..!

ಬೆಂಗಳೂರು : ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ವಿಧಾನಸಭೆಯಲ್ಲಿ ಸಿಎಂ ಪರ ಡಿಸಿಎಂ ಡಿಕೆಶಿ ಬ್ಯಾಟಿಂಗ್​​​ ಮಾಡಿದ್ದಾರೆ. ಸಿಎಂ ಬೆನ್ನಿಗೆ ನಿಂತು ಬಿಜೆಪಿ ವಿರುದ್ಧ ಡಿಕೆಶಿ ವಾಗ್ಯದ್ಧ ನಡೆಸಿದ್ದಾರೆ.

ಮಾತು-ಮಾತಿಗೂ ಡಿಸಿಎಂ ಡಿಕೆಶಿ ಕೌಂಟರ್​​ ಕೊಟ್ಟಿದ್ದು, ವಾಲ್ಮೀಕಿ ನಿಗಮ ಹಗರಣ ಚರ್ಚೆ ವೇಳೆ ಕಾಂಗ್ರೆಸ್​-ಬಿಜೆಪಿ ಸದಸ್ಯರ ನಡುವೆ ಕೋಲಾಹಲ ನಡೆದಿದೆ. ಸಿಎಂ ಇಲಾಖೆಗೆ ಸಂಬಂಧಿಸಿದ ವಿಚಾರ ಅವರೇ ಗೈರಾಗಿದ್ದಾರೆ, ಕೂಡ್ಲೇ ಸಿಎಂ ಕರೆಸಿ ಎಂದು ವಿಪಕ್ಷ ನಾಯಕ ಆರ್​​.ಅಶೋಕ್​ ನೇತೃತ್ವದಲ್ಲಿ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಸಿಎಂ ಎಲ್ಲಿ ಅವರ ಇಲಾಖೆಯಲ್ಲೇ ಹಗರಣ ನಡೆದಿದೆ, ಸಿಎಂ ವಿರುದ್ಧ ಆರೋಪ ಬಂದಿದೆ ಎಂದು ಡಾ.ಅಶ್ವಥ್​ನಾರಾಯಣ್​​ ಹೇಳಿದ್ದಾರೆ. ಅಶ್ವತ್ಥ್​​ ನಾರಾಯಣ್​ ಆರೋಪ ಮಾಡ್ತಿದ್ದಂತೆ ಡಿಕೆಶಿ ಎದ್ದು ನಿಂತು ಸಿಎಂ ವಿರುದ್ಧ ಎಲ್ರೀ ಆರೋಪ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ವೇಳೆ ಸಚಿವರಾದ ಜಾರ್ಜ್​​, ಪರಮೇಶ್ವರ್​​​ ಮತ್ತಿತರರು ಸಾಥ್​​​ ನೀಡಿದ್ದಾರೆ. ಸಿಎಂಗೆ ಗೌರವ ಕೊಡೋದನ್ನ ಮೊದಲು ಕಲಿಯಿರಿ, ಲೂಟಿಕೋರರ ಪಿತಾಮಹ ನೀನು ಅಂತ ಅಶ್ವಥ್ ನಾರಾಯಣ್​ಗೆ ತಿರುಗೇಟು ಕೊಟ್ಟಿದ್ದಾರೆ. ಲೂಟಿಕೋರರ ಪಿತಾಮಹ ಎಂದು ಡಿಕೆಶಿ ಹೇಳಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಕಡತದಿಂದ ಈ ಪದ ತಗೆಸುವಂತೆ ಬಿಜೆಪಿ ಶಾಸಕರ ಪಟ್ಟು ಹಿಡಿಡಿದ್ದಾರೆ. ನಂತರ ಕಾಂಗ್ರೆಸ್​-ಬಿಜೆಪಿ ಸದಸ್ಯರ ಕೋಲಾಹಲದಿಂದಾಗಿ ಸದನ ಕಲಾಪವನ್ನು ಕೆಲಹೊತ್ತು ಮುಂದೂಡಿದ್ದರು.

ಇದನ್ನೂ ಓದಿ : ಗೋಡಂಬಿ ತಿನ್ನೋಕೆ ಸಭೆಗೆ ಹೋಗಬೇಕಿತ್ತಾ ಎಂದಿದ್ದ ಹೆಚ್​ಡಿಕೆಗೆ ಡಿಸಿಎಂ ಡಿಕೆಶಿ ಪಂಥಾಹ್ವಾನ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿನ M.S.ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ..!

ಬೆಂಗಳೂರು : ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾಗಿರುವ M.S.ರಾಮಯ್ಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರೋಗಿಗಳು, ಆಸ್ಪತ್ರೆ ಸಿಬ್ಬಂದಿಗೆ ತೀವ್ರ

Live Cricket

Add Your Heading Text Here