ಬೆಂಗಳೂರು : ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ವಿಧಾನಸಭೆಯಲ್ಲಿ ಸಿಎಂ ಪರ ಡಿಸಿಎಂ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ. ಸಿಎಂ ಬೆನ್ನಿಗೆ ನಿಂತು ಬಿಜೆಪಿ ವಿರುದ್ಧ ಡಿಕೆಶಿ ವಾಗ್ಯದ್ಧ ನಡೆಸಿದ್ದಾರೆ.
ಮಾತು-ಮಾತಿಗೂ ಡಿಸಿಎಂ ಡಿಕೆಶಿ ಕೌಂಟರ್ ಕೊಟ್ಟಿದ್ದು, ವಾಲ್ಮೀಕಿ ನಿಗಮ ಹಗರಣ ಚರ್ಚೆ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಕೋಲಾಹಲ ನಡೆದಿದೆ. ಸಿಎಂ ಇಲಾಖೆಗೆ ಸಂಬಂಧಿಸಿದ ವಿಚಾರ ಅವರೇ ಗೈರಾಗಿದ್ದಾರೆ, ಕೂಡ್ಲೇ ಸಿಎಂ ಕರೆಸಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಸಿಎಂ ಎಲ್ಲಿ ಅವರ ಇಲಾಖೆಯಲ್ಲೇ ಹಗರಣ ನಡೆದಿದೆ, ಸಿಎಂ ವಿರುದ್ಧ ಆರೋಪ ಬಂದಿದೆ ಎಂದು ಡಾ.ಅಶ್ವಥ್ನಾರಾಯಣ್ ಹೇಳಿದ್ದಾರೆ. ಅಶ್ವತ್ಥ್ ನಾರಾಯಣ್ ಆರೋಪ ಮಾಡ್ತಿದ್ದಂತೆ ಡಿಕೆಶಿ ಎದ್ದು ನಿಂತು ಸಿಎಂ ವಿರುದ್ಧ ಎಲ್ರೀ ಆರೋಪ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ಸಚಿವರಾದ ಜಾರ್ಜ್, ಪರಮೇಶ್ವರ್ ಮತ್ತಿತರರು ಸಾಥ್ ನೀಡಿದ್ದಾರೆ. ಸಿಎಂಗೆ ಗೌರವ ಕೊಡೋದನ್ನ ಮೊದಲು ಕಲಿಯಿರಿ, ಲೂಟಿಕೋರರ ಪಿತಾಮಹ ನೀನು ಅಂತ ಅಶ್ವಥ್ ನಾರಾಯಣ್ಗೆ ತಿರುಗೇಟು ಕೊಟ್ಟಿದ್ದಾರೆ. ಲೂಟಿಕೋರರ ಪಿತಾಮಹ ಎಂದು ಡಿಕೆಶಿ ಹೇಳಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಕಡತದಿಂದ ಈ ಪದ ತಗೆಸುವಂತೆ ಬಿಜೆಪಿ ಶಾಸಕರ ಪಟ್ಟು ಹಿಡಿಡಿದ್ದಾರೆ. ನಂತರ ಕಾಂಗ್ರೆಸ್-ಬಿಜೆಪಿ ಸದಸ್ಯರ ಕೋಲಾಹಲದಿಂದಾಗಿ ಸದನ ಕಲಾಪವನ್ನು ಕೆಲಹೊತ್ತು ಮುಂದೂಡಿದ್ದರು.
ಇದನ್ನೂ ಓದಿ : ಗೋಡಂಬಿ ತಿನ್ನೋಕೆ ಸಭೆಗೆ ಹೋಗಬೇಕಿತ್ತಾ ಎಂದಿದ್ದ ಹೆಚ್ಡಿಕೆಗೆ ಡಿಸಿಎಂ ಡಿಕೆಶಿ ಪಂಥಾಹ್ವಾನ..!