ಬೆಂಗಳೂರು : ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕಿಲ್ಲರ್ ಡಿ ಗ್ಯಾಂಗ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನದ ಜೊತೆಗೆ ಠಾಣೆಯ ಸುತ್ತಲೂ 144 ಸೆಕ್ಷನ್ ಕೂಡ ಜಾರಿ ಮಾಡಿರುವುದಕ್ಕೆ ಇದೀಗ ಆಕ್ರೋಶದ ಕೂಗು ಕೇಳಿಬರುತ್ತಿವೆ.
ದರ್ಶನ್ ಇರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಬಳಿ 144 ಸೆಕ್ಷನ್ ಹಾಕಿದ್ದರಿಂದ ವಾಹನ ಸವಾರರು ಪರದಾಟ ಅನುಭವಿಸುವಂತಾಗಿದೆ. ಪೊಲೀಸರ ಈ ನಡೆಯಿಂದ ಮರ್ಡರ್ ಆರೋಪಿಗಳಿಗೆ ಠಾಣೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆಯಾ ಎಂಬ ಪ್ರಶ್ನೆಗಳೂ ಕೂಡ ಎದ್ದಿದೆ. ಪೊಲೀಸರ ಈ ನಡೆಗೆ ವಾಹನ ಸವಾರರ ಆಕ್ರೋಶ ಭುಗಿಲೆದ್ದಿದೆ.
ಇನ್ನೊಂದ್ಕಡೆ ಪೊಲೀಸ್ ಸ್ಟೇಷನ್ ಸುತ್ತ ಶಾಮಿಯಾನ, ಸೈಡ್ವಾಲ್ ಹಾಕಿ ಮುಚ್ಚಿದ್ದಕ್ಕೆ ಎಲ್ಲೆಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಬಗ್ಗೆ ಇದೀಗ
ರಾಜ್ಯಾದ್ಯಂತ ಚರ್ಚೆ ಆಗ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಸೈಡ್ವಾಲ್, ಶಾಮಿಯಾನದ್ದೇ ಚರ್ಚೆ ಶುರುವಾಗಿದ್ದು, “ಠಾಣೆಯೇ ಕಲ್ಯಾಣ ಮಂಟಪ, ಅಲ್ಲೇ ಬೀಗರ ಊಟ” ಶುಭ ಸಮಾರಂಭಕ್ಕೆ ಶಾಮಿಯಾನಕ್ಕಾಗಿ ಸಂಪರ್ಕಿಸಿ” ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಪ್ರಾಮಾಣಿಕವಾಗಿ ತನಿಖೆ ಮಾಡೋರಿಗೆ ಯಾಕೆ ಶಾಮಿಯಾನ ಮಾರೆ? ತೆರೆ ಮರೆಯಲ್ಲಿ ಏನೇನ್ ಮಾಡ್ತಿದ್ದೀರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಸೈಡ್ ವಾಲ್ ಹಾಕಿ ಠಾಣೆ ಮುಚ್ಚಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನ ಗರಂ ಆಗಿದ್ದು, ಪೊಲೀಸರೇ ಮೊದಲ ದಿನದ ಅರ್ಭಟ ಎಲ್ಲೋಯ್ತು? ಶಾಮಿಯಾನ ಹಾಕಿ ಪೊಲೀಸ್ ಠಾಣೆ ಮುಚ್ಚಿದ್ದೇಕೆ? ಇದು ಪೊಲೀಸ್ ಠಾಣೆಯೋ, ಮದುವೆ ಮಂಟಪವೋ? ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಕೆಲವರು ಠಾಣೆ ಎದುರು ಬಂದು ಊಟ ಇದೆಯಾ ಅಂತಾ ಕೇಳ್ತಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಮ*ರ್ಡರ್ ಕೇಸ್ – ಕಿಡ್ನಾಪ್ ನಡೆದ ಸ್ಥಳಕ್ಕೆ ಮಿಡ್ನೈಟ್ನಲ್ಲಿ ‘ಡಿ’ಗ್ಯಾಂಗ್ ಕರೆದೊಯ್ದು ಸ್ಪಾಟ್ ಮಹಜರ್..!