ಬೆಂಗಳೂರು : ಲೋಕಸಭೆ ಚುನಾವಣೆಯ ಮತ ಎಣಿಕೆ ಜೂ.4ರಂದು ನಡೆಯಲಿದ್ದು, ಬೆಂಗಳೂರಿನಲ್ಲಿ ಕೌಂಟಿಂಗ್ಗೆ ತಯಾರಿ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯೂ ಆಗಿರುವ BBMP ಕಮಿಷನರ್ ತುಷಾರ್ ಗಿರಿನಾಥ್ ಅವರು ಸ್ಟ್ರಾಂಗ್ ರೂಂ ಪರಿಶೀಲನೆ ಮಾಡಿದ್ದಾರೆ.
ಸ್ಟ್ರಾಂಗ್ ರೂಂ ಪರಿಶೀಲನೆ ಮಾಡಿದ ಬಳಿಕ ಮಾತನಾಡಿದ ತುಷಾರ್ ಗಿರಿನಾಥ್ ಅವರು, ಬೆಂಗಳೂರು ಜಿಲ್ಲೆಯಲ್ಲಿ 3 ಮತ ಎಣಿಕೆ ಕೇಂದ್ರಗಳಿವೆ. ಒಂದು ರೂಂನಲ್ಲಿ 14 ಟೇಬಲ್ ಇಡಲಾಗುತ್ತೆ.
ಈ ಬಾರಿ ಪೋಸ್ಟಲ್ ಬ್ಯಾಲೆಟ್ ಪೇಪರ್ ಹೆಚ್ಚಿವೆ. ಒಂದು ರೂಂನಲ್ಲಿ ಪೋಸ್ಟಲ್ ಬ್ಯಾಲೆಟ್ ಎಣಿಕೆ ಆಗುತ್ತೆ ಎಂದಿದ್ದಾರೆ.
ಬೆಂಗಳೂರು ಉತ್ತರ, ದಕ್ಷಿಣ, ಸೆಂಟ್ರಲ್ ಕ್ಷೇತ್ರದ ಎಣಿಕೆ ಆಗುತ್ತೆ. 380 ಟೇಬಲ್ಗಳಿಗೆ 1200ಕ್ಕೂ ಹೆಚ್ಚು ಸಿಬ್ಬಂದಿ ನೇಮಿಸ್ತೇವೆ. ಈ ಬಾರಿ ಪ್ರತಿ ಟೇಬಲ್ಗೂ CCTV ಕ್ಯಾಮೆರಾ ನಿಗಾ ಇರುತ್ತೆ.ಕಾರಿಡಾರ್ನ ಚಟುವಟಿಕೆಗಳನ್ನೂ ಸಿಸಿಟಿವಿಯಲ್ಲಿ ನೋಡಬಹುದು ಮೈಕ್ರೋ ಅಬ್ಸರ್ವರ್, ಟೇಬಲ್ ಸಿಬ್ಬಂದಿಯನ್ನು ನೇಮಿಸಲಾಗುತ್ತೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಚಾಮರಾಜನಗರದಲ್ಲಿ ರಸ್ತೆ ಬದಿಗೆ ಉರುಳಿ ಬಿದ್ದ ಖಾಸಗಿ ಬಸ್ : 30ಕ್ಕೂ ಹೆಚ್ಚು ಮಂದಿಗೆ ಗಾಯ..!