ಬೆಂಗಳೂರು : ನಮಗೆ ಈಗಲೂ ವಿಶ್ವಾಸ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ 18-22 ಸ್ಥಾನ ಗೆಲ್ಲುತ್ತೆ. ಎಕ್ಸಿಟ್ ಪೋಲ್ಗಳೆಲ್ಲಾ ಸುಳ್ಳಾಗಲಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮತದಾನೋತ್ತರ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್ ಅವರು, ರಾಜ್ಯದಲ್ಲಿ ಗ್ರೌಂಡ್ ರಿಯಾಲಿಟಿ ಬೇರೆಯೇ ಇದೆ. ನಾವೂ ಆಂತರಿಕ ವರದಿಯನ್ನು ತರಿಸಿಕೊಂಡಿದ್ದೇವೆ. ನಮ್ಮ ಆಂತರಿಕ ವರದಿಯಲ್ಲಿ 18-20 ಸ್ಥಾನ ಬಂದಿವೆ ಎಂದು ತಿಳಿಸಿದ್ದಾರೆ.
ಎಲ್ಲಾ ಚುನಾವಣೋತ್ತರ ಸಮೀಕ್ಷೆ ನಿಜ ಆಗೋದಿಲ್ಲ. ನಾವು ಜನರ ನಡುವೆ ಕೆಲಸ ಮಾಡಿ, ಜನರ ನಾಡಿ ಮಿಡಿತವನ್ನು ಅರಿತುಕೊಂಡಿದ್ದೇವೆ. ಸೆಲೆಕ್ಟೀವ್ ಸಮೀಕ್ಷೆಗಳಲ್ಲಿ ಬಿಜೆಪಿ ಲೀಡ್ ಕೊಟ್ಟಿದ್ದಾರೆ. ಆದರೆ ಎಲ್ಲಾ ಸಮೀಕ್ಷೆಗಳೂ ಸತ್ಯಕ್ಕೆ ಹತ್ತಿರವಾಗಿರಲ್ಲ. ಜೂನ್ 4ರಂದು ಎಲ್ಲವೂ ಗೊತ್ತಾಗಲಿದೆ, ಕಾದು ನೋಡಿ-ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಕ-ಚಾಲಕನ ನಡುವೆ ಫೈಟ್ : ವಿಡಿಯೋ ವೈರಲ್..!