ಮಂಡ್ಯ : ದರ್ಶನ್ ಅಭಿಮಾನಿ ಮಂಗಳ ಎಂಬಾಕೆ ವಿರುದ್ಧ ಮಂಡ್ಯದ ಜೆಡಿಎಸ್ ಮುಖಂಡರು ದೂರು ನೀಡಿದ್ದಾರೆ. ಮಂಗಳಾ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಳು. ಹಾಗಾಗಿ ಮಂಡ್ಯದ ಸೈಬರ್ ಕ್ರೈಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಮುಖಂಡರು ದೂರು ನೀಡಿದ್ದಾರೆ.
ಜೆಡಿಎಸ್ ಮುಖಂಡ ಧನಂಜಯ್ ಕುಮಾರ್ ನೇತೃತ್ವದಲ್ಲಿ ದೂರು ಸಲ್ಲಿಸಿದ್ದು, ದರ್ಶನ್ ಮಹಿಳಾ ಅಭಿಮಾನಿ ಮಂಗಳ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಜೆಡಿಎಸ್ ಜಿಲ್ಲಾ ವಕ್ತಾರ ರಘುನಂದನ್ ಅವರು ಕೆ.ಆರ್. ಪೇಟೆಯಲ್ಲೂ ಮುಖಂಡರು ದೂರು ದಾಖಲಿಸಿದ್ದಾರೆ.
ಕೊಲೆ ಆರೋಪ ಬರುವಂತೆ HDK ಮಾಡಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ಏಕವಚನಲ್ಲೇ ಮಂಗಳ ನಿಂದಿಸಿರೋದು ವೈರಲ್ ಆಗಿದೆ. ಹಾಗಾಗಿ ಕೇಂದ್ರ ಸಚಿವರ ತೇಜೋವಧೆ ಮಾಡಲಾಗ್ತಿದೆ ಎಂದು ಜೆಡಿಎಸ್ ಮುಖಂಡರು ದೂರು ಸಲ್ಲಿಸಿ, ಮಂಗಳಾಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರೇಣುಕಾ ಮರ್ಡರ್ ಕೇಸ್ನಲ್ಲಿ ಯೂಟ್ಯೂಬರ್ ರಜನಿ ಪಾತ್ರ ಪತ್ತೆ – ರಿಮ್ಯಾಂಡ್ ಕಾಪಿಯಲ್ಲಿ ರೋಚಕ ಸತ್ಯ ಬಯಲು..!