ಬೆಂಗಳೂರು : ರೇಣುಕಾಸ್ವಾಮಿಯನ್ನು ಅಪಹರಣ ಮಾಡುವುದರಿಂದ ಹಿಡಿದು ಕೊಲೆ ಮಾಡಿ ಶವ ಎಸೆಯುವ ತನಕ ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರೂ ಈಗ ಪೊಲೀಸರ ಅತಿಥಿಯಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆಗೆ ಕಾರಣವಾದ ದರ್ಶನ್ ಅಂಡ್ ಗ್ಯಾಂಗ್ನ ಎಲ್ಲರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಇನ್ನು ಈ ಕೇಸ್ನಲ್ಲಿ ದರ್ಶನ್ ಹೆಸರು ಹೊರಬಂದ ಕೂಡಲೇ ಸಿಕ್ರೇಟ್ ಅಪರೇಷನ್ ಒಂದು ನಡೆದಿತ್ತು. ಆ ಸಿಕ್ರೇಟ್ ಆಪರೇಷನ್ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈ ಕೇಸ್ನಲ್ಲಿ ಖುದ್ದು ಫೀಲ್ಡ್ಗೆ ಇಳಿದು ಎಲ್ಲಾ ಸಾಕ್ಷ್ಯ ಕಲೆ ಹಾಕಲು ನಿಂತಿದ್ದು ಬೇರೆ ಯಾರು ಅಲ್ಲ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್. ಹೌದು, ಜೂನ್ 10ರ ಬೆಳಗ್ಗೆ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾಗೌಡ ಹೆಸರು ಹೊರಬರುತ್ತಿದಂತೆ ಖುದ್ದು ಡಿಸಿಪಿ ಗಿರೀಶ್ ಟೀಮ್ಗೆ ಕಮಿಷನರ್ ಬಿ.ದಯಾನಂದ್ ಅವರು ತನಿಖೆ ನಡೆಸುವ ಬಗ್ಗೆ ಮಾರ್ಗದರ್ಶನ ನೀಡಿದ್ದರು.
ಕಮಿಷನರ್ ದಯಾನಂದ್ ಅವರು ಪ್ರಕರಣದ ಮಾಹಿತಿ ಕಲೆ ಹಾಕಿ, ದರ್ಶನ್ ತಪ್ಪಿಸಿಕೊಳ್ಳಲು ಮಾಡಿದ್ದ ಎಲ್ಲಾ ಪ್ಲ್ಯಾನ್ಗಳನ್ನು ಉಲ್ಟಾ ಮಾಡಿದ್ದರು. ಮೂವರು ಆರೋಪಿಗಳನ್ನು ಸರೆಂಡರ್ ಮಾಡಿಸಿ ಈ ಕೇಸ್ನಿಂದ ಬಚವಾಗಲು ಯತ್ನಿಸಿದ್ದ ದರ್ಶನ್ಗೆ ಕಮಿಷನರ್ ದಯಾನಂದ್ ಕೋಳ ಹಾಕಿದ್ದರು. ಕೊಲೆ ಕೇಸ್ನಿಂದ ದರ್ಶನ್ ಹೆಸರು ಕೈ ಬಿಡುವಂತೆ ಭಾರೀ ಒತ್ತಡಗಳು ಬಂದಿದ್ದವು. ಆದ್ರೆ, ಯಾವ ಒತ್ತಡಕ್ಕೂ ಮಣಿಯದೇ ಕಮಿಷನರ್ ದಯಾನಂದ್ ಅವರು ದರ್ಶನ್ನ್ನು ಅರೆಸ್ಟ್ ಮಾಡಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಇಂಚಿಂಚೂ ಮಾಹಿತಿ ಕಲೆ ಹಾಕಿ, ಪೊಲಿಟಿಕಲ್ ಪ್ರೇಷರ್ ಹಾಗೂ ಯಾವ ಪ್ರಭಾವಿಗಳ ಮಾತಿಗೂ ಡೋಂಟ್ಕೇರ್ ಎನ್ನದೆ ಕಮಿಷನರ್ ದಯಾನಂದ್ ಅವರು ದರ್ಶನ್ & ಗ್ಯಾಂಗ್ನ್ನು ಸದ್ಯ ಕಂಬಿ ಹಿಂದೆ ಬಂಧಿಯಾಗುವಂತೆ ಮಾಡಿದ್ದಾರೆ.
ಒಂದೇ ಕೇಸ್ನಲ್ಲಿ 17 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ ಮೊದಲ ಕೇಸ್ ಇದಾಗಿದ್ದು, ದರ್ಶನ್ ಬಂಧನದ ನಂತರ ಪ್ರತಿದಿನ ದರ್ಶನ್ ವಿಚಾರಣೆಯ ಮಾಹಿತಿಯನ್ನು ಕಮಿಷನರ್ ದಯಾನಂದ್ ಕಲೆ ಹಾಕಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಪ್ರತಿದಿನ ಭೇಟಿ ಕೊಟ್ಟು ಆರೋಪಿಗಳ ವಿಚಾರಣೆಯನ್ನು ಖುದ್ದು ಕಮಿಷನರ್ ದಯಾನಂದ್ ಅವರು ನಡೆಸಿದ್ದಾರೆ. ಇನ್ನು ಪ್ರತಿ ಹಂತದಲ್ಲೂ ತನಿಖೆಯಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಿ ಅಪರೇಟ್ ಮಾಡಿಸಿದ್ದಾರೆ. ಪ್ರಕರಣದಲ್ಲಿ ವಾದ ಮಂಡಿಸಲು SPP ನೇಮಕ ಮಾಡಿಸಿದ್ದು ಕೂಡ ಕಮಿಷನರ್ ದಯಾನಂದ್ ಅವರೆ. ಹಳ್ಳ ಹಿಡಿಯುತ್ತಿದ್ದ ಈ ಕೇಸನ್ನು ಹಾನೆಸ್ಟ್ ಆಗಿ ಅಪರೇಟ್ ಮಾಡಿದ ಖ್ಯಾತಿ ದಯಾನಂದ್ ಅವರಿಗೆ ಸಲ್ಲುತ್ತದೆ. ಈ ಮೂಲಕ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಸಲು ಕಮಿಷನರ್ ದೊಡ್ಡ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಹತ್ಯೆ ಕೇಸ್ – ಇಂದು ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರೋದು ಫಿಕ್ಸ್?