ಮೈಸೂರು : ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಕಾಲೇಜು ದಿನದ ಹುಡುಗಿಯೊಂದಿಗಿನ ಸ್ನೇಹದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೆಬ್ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡುವ ವೇಳೆ ಸಿದ್ದರಾಮಯ್ಯ ತಮ್ಮ ಪ್ರೇಮಾಂಕುರದ ಕಹಾನಿ ರಿವೀಲ್ ಮಾಡಿದ್ದಾರೆ.
ನಾನು ಅಂತರ್ಜಾತಿ ಮದುವೆ ಮಾಡಿಕೊಳ್ಳಬೇಕು ಎಂದು ಆಸೆಪಟ್ಟಿದ್ದೆ. ನಾನು ಲಾ ಓದುವಾಗ ಒಂದು ಹುಡುಗಿ ಜೊತೆ ಸ್ನೇಹ ಇತ್ತು. ಅದರ ಬಗ್ಗೆ ತಪ್ಪುತಪ್ಪಾಗಿ ಅಂದುಕೊಳ್ಳಬೇಡಿ. ಹುಡುಗಿ ಜೊತೆ ಸ್ನೇಹ ಇತ್ತು ಅಷ್ಟೇ ಎಂದು ತಮ್ಮ ಕಾಲೇಜು ದಿನದ ನೆನಪು ಮೆಲುಕು ಹಾಕಿದರು.
ಆಕೆಯನ್ನು ನಾನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಮದುವೆ ಆಗಲು ಆಗಲಿಲ್ಲ. ಯಾಕೆಂದರೆ ಹುಡುಗಿನೂ ಒಪ್ಪಲಿಲ್ಲ, ಹುಡುಗಿಯ ಮನೆಯವರೂ ಒಪ್ಪಲಿಲ್ಲ. ಹಾಗಾಗಿ ನಾನು ಅಂತರ್ಜಾತಿ ಮದುವೆ ಆಗಲಿಕ್ಕೆ ಆಗಲಿಲ್ಲ. ಕೊನೆಗೆ ನಮ್ಮ ಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಳ್ಳಬೇಕಾಯಿತು ಎಂದು ಕಾಲೇಜು ದಿನದ ಹುಡುಗಿಯ ಸ್ನೇಹದ ವಿಚಾರ ಹೇಳಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.
ಇದನ್ನೂ ಓದಿ : ಡಿಜಿಟಲ್ ಥಿಯೇಟರ್ ಸಿನಿ ಬಜಾರ್ನಲ್ಲಿ ರಿಲೀಸ್ ಆಯ್ತು “ಚೌ ಚೌ ಬಾತ್”..!