ರಾಯಚೂರು : ನಾನು ತಪ್ಪು ಮಾಡಿದ್ದೀನಿ ಅಂತಾ ಕೋರ್ಟ್ ಹೇಳಿದೆಯಾ..? ತಪ್ಪು ಮಾಡದೇ ನಾನ್ಯಾಕೆ ರಾಜೀನಾಮೆ ಕೊಡಲಿ, ಅಶೋಕ್ ಮೊದಲು ರಾಜೀನಾಮೆ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ರಾಯಚೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅಶೋಕ್ ವಿರುದ್ಧ ಭೂಮಿ ಅಕ್ರಮ ಕೇಸ್ ದಾಖಲಾಗಿತ್ತು. ಈ ಕಾರಣಕ್ಕೆ ಭೂಮಿ ವಾಪಸ್ ನೀಡಿದ್ದರು, ಜಿ.ಟಿ. ದೇವೇಗೌಡರೇ ನನ್ನ ತಪ್ಪಿಲ್ಲ ಅಂತಾ ಹೇಳಿಲ್ಲವೇ..? ತಪ್ಪು ಮಾಡದ ನನ್ನಿಂದ ರಾಜೀನಾಮೆ ಯಾಕ್ ಕೇಳ್ತಾರೆ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ಹೈಕಮಾಂಡ್ ಭೇಟಿ ಮಾಡಿದ್ರೆ ತಪ್ಪಿಲ್ಲ, ದೆಹಲಿಗೆ ಹೋದಾಗ ಪಕ್ಷದ ಹಿರಿಯರನ್ನು ಭೇಟಿ ಮಾಡೇ ಮಾಡ್ತಾರೆ. ನಾಯಕತ್ವ ಬದಲಾವಣೆ ಬಿಜೆಪಿ ಹಬ್ಬಿಸ್ತಿರೋ ಸುಳ್ಳು ಸುದ್ದಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ : ಮತ್ತೆ ಪರಪ್ಪನ ಅಗ್ರಹಾರಕ್ಕೆ ಮಾಜಿ ಮಂತ್ರಿ ಮುನಿರತ್ನ – ಅ.19ರವೆರೆಗೆ ನ್ಯಾಯಾಂಗ ಬಂಧನ..!
Post Views: 22