ಬೆಂಗಳೂರು : 11 ವರ್ಷದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ನರಸಿಂಹ ಮೂರ್ತಿ, ದೀಪಕ್, ಹರಿಪ್ರಸಾದ್ ಬಂಧಿತ ಆರೋಪಿಗಳು.
2013ರ ಫೆಬ್ರವರಿ 15 ರಂದು ಮಹಿಳೆ ಮೇಲೆ ಆರೋಪಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿ ನೀಲಗಿರಿ ತೋಪಿನಲ್ಲಿ ಶವ ಎಸೆದಿದ್ದರು. ಮಹಿಳೆ ಗಂಡ ಬಾಲಕೃಷ್ಣ ಪೈ ಬ್ಯಾಂಕ್ವೊಂದರಲ್ಲಿ ಕೆಲಸ ಮಾಡ್ತಿದ್ದರು. ಅದೇ ಬ್ಯಾಂಕ್ನಲ್ಲಿ ನರಸಿಂಹಮೂರ್ತಿ,ಹರಿಪ್ರಸಾದ್ ಕೆಲಸ ಮಾಡ್ತಿದ್ದರು.
ಬಾಲಕೃಷ್ಣ ಪೈ ಅವರು ಪತ್ನಿ ನಾಪತ್ತೆ ಅಂತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುತ್ತುಕದಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ ಹಿನ್ನಲೆಯಲ್ಲಿ ಚಿಕ್ಕಜಾಲ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಗಂಡನನ್ನೆ ಬಂಧಿಸಿದ್ದರು.
ಕೆಲ ದಿನಗಳ ಬಳಿಕ ಕೊಲೆಯಲ್ಲಿ ಗಂಡನ ಪಾತ್ರ ಇಲ್ಲ ಅಂತಾ ಗೊತ್ತಾಗಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ಚಿಕ್ಕಜಾಲ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದರು. ಈ ಬಗ್ಗೆ ಬಾಲಕೃಷ್ಣ ಪೈ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಈ ಪ್ರಕರಣದ ವಿಸ್ತೃತ ಹಾಗೂ ಆಳವಾದ ತನಿಖೆಯನ್ನು ನಡೆಸುವಂತೆ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಐಡಿ ಘಟಕಕ್ಕೆ ವಹಿಸಿತ್ತು. ಪ್ರಕರಣವನ್ನು ವಿಸ್ಮತವಾಗಿ ತನಿಖೆ ನಡೆಸಿದ ಸಿಐಡಿ ತನಿಖಾಧಿಕಾರಿಗಳು ಈ ಮಹಿಳೆಯು ಕಾಣೆಯಾದ ದಿನದಂದು ದೊರೆತ ಕೆಲವು ಸಾಕ್ಷ್ಯಾಧಾರಗಳನ್ನು ಆಳವಾಗಿ ವಿಶ್ಲೇಷಣೆ ಮಾಡಿದಾಗ ಈ ಮಹಿಳೆಯ ಹತ್ಯೆಯಲ್ಲಿ ದೀಪಕ್.ಸಿ ಎಂಬಾತನ ಕೈವಾಡವಿರುವ ಸುಳಿವು ಪತ್ತೆಯಾಗಿತ್ತು.
ಇನ್ನು ಪೊಲೀಸರು ದೀಪಕ್ನ್ನು ವಿಚಾರಣೆ ನಡೆಸಿದಾಗ ಬ್ಯಾಂಕ್ ಮ್ಯಾನೇಜರ್ ನರಸಿಂಹಮೂರ್ತಿ, ಸಹಚರ ಹರಿಪ್ರಸಾದ್ ಕೈವಾಡ ಬೆಳಕಿಗೆ ಬಂದಿದೆ. ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನ ಸಂಗ್ರಹಿಸಿ ಸಿಐಡಿ ಪೊಲೀಸರು 11 ವರ್ಷಗಳ ಬಳಿಕ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆದಿಲ್ ಸಾ*ವು : ಮೃತನ ಕುಟುಂಬಸ್ಥರಿಂದ ಲಾಕಪ್ ಡೆತ್ ಆರೋಪ..!