Download Our App

Follow us

Home » ಜಿಲ್ಲೆ » ಚಿತ್ರದುರ್ಗ : ಹೆಂಡತಿ ಮೇಲಿನ ಸಿಟ್ಟಿಗೆ ಅತ್ತೆ-ಮಾವನನ್ನ ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಅಳಿಯ..!

ಚಿತ್ರದುರ್ಗ : ಹೆಂಡತಿ ಮೇಲಿನ ಸಿಟ್ಟಿಗೆ ಅತ್ತೆ-ಮಾವನನ್ನ ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಅಳಿಯ..!

ಚಿತ್ರದುರ್ಗ : ಹೆಂಡತಿ ಮೇಲಿನ ಸಿಟ್ಟಿಗೆ ಪಾಪಿ ಪತಿ ಹೆಣ್ಣು ಕೊಟ್ಟ ಅತ್ತೆ ಮಾವನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ ಹಾಗೂ ಪತ್ನಿ ತಿಪ್ಪಮ್ಮ ಮೃತ ದುರ್ದೈವಿಗಳು.

ಹನುಮಂತಪ್ಪ ತನ್ನ ಜಮೀನಲ್ಲಿ ಕೆಲಸಕ್ಕೆ ತೆರಳಿದ್ದ ವೇಳೆ ಪಾಪಿ ಅಳಿಯ ಮಂಜುನಾಥ್ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಒಂದೂವರೆ ವರ್ಷದ ಹಿಂದೆ ಹನುಮಂತಪ್ಪನ ಪುತ್ರಿ ಹರ್ಷಿತಾಳನ್ನ ತನ್ನ ಸಂಬಂಧಿ ಮಂಜುನಾಥನ ಜೊತೆ ಮದುವೆ ಮಾಡಿದ್ರು.

ಪಿಯುಸಿ ಓದಿದ್ದ ಹರ್ಷಿತಾ ಹೊಲ ಮನೆ ಕೆಲಸಕ್ಕೆ ಒಗ್ಗಿಲ್ಲ, ಓದಿನ ಆಸಕ್ತಿ ತೋರುತ್ತಾಳೆ ಅಂತ ಮಂಜುನಾಥ ಕ್ಯಾತೆ ತೆಗೆದಿದ್ದ. ಇದೇ ವಿಚಾರಕ್ಕೆ ಮಗಳನ್ನು ತಿಪ್ಪಮ್ಮ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಇದಕ್ಕೆ ಕೋಪಗೊಂಡ ಮಂಜುನಾಥ ಅತ್ತೆ ಮಾವನನ್ನೇ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ : ರಾಂಗ್​ ಸೈಡ್​ನಿಂದ ಬಂದು ಬೈಕ್​ಗೆ​ ಡಿಕ್ಕಿ ಹೊಡೆದ ಕಾರು – ಬೈಕ್ ಸವಾರ ದಾರುಣ ಸಾವು..!

Leave a Comment

DG Ad

RELATED LATEST NEWS

Top Headlines

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು – ವಿಡಿಯೋ ನೋಡಿ ನೆಟ್ಟಿಗರು ಫುಲ್ ಶಾಕ್..!

ಮಹಿಳೆಯೊಬ್ಬರು ಏಕಕಾಲಕ್ಕೆ 18 ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿರುವುದನ್ನು

Live Cricket

Add Your Heading Text Here