Download Our App

Follow us

Home » Uncategorized » ಚಿಕ್ಕಬಳ್ಳಾಪುರದಿಂದ ಎಸ್​.ಆರ್ ವಿಶ್ವನಾಥ್​ಗೆ ಟಿಕೆಟ್ ಕೊಡಿ – ಬಿಜೆಪಿ ಕಾರ್ಯರ್ತರಿಂದ ಆಗ್ರಹ..!

ಚಿಕ್ಕಬಳ್ಳಾಪುರದಿಂದ ಎಸ್​.ಆರ್ ವಿಶ್ವನಾಥ್​ಗೆ ಟಿಕೆಟ್ ಕೊಡಿ – ಬಿಜೆಪಿ ಕಾರ್ಯರ್ತರಿಂದ ಆಗ್ರಹ..!

ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣಾ ಅಖಾಡ ರಂಗೇರಿದ್ದು, ಚಿಕ್ಕಬಳ್ಳಾಪುರದಿಂದ ಎಸ್​.ಆರ್ ವಿಶ್ವನಾಥ್​ಗೆ ಟಿಕೆಟ್ ಕೊಡಿ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದಾದ್ಯಂತ ಬಿಜೆಪಿ ಕಾರ್ಯರ್ತರು ಆಗ್ರಹಿಸಿದ್ದಾರೆ. ಯಾವ ಕಾರಣಕ್ಕೂ ಡಾ. ಕೆ ಸುಧಾಕರ್​ಗೆ ಟಿಕೆಟ್ ಕೊಡಬಾರದು ಎಂದು ಘೋಷಿಸಿದ್ದಾರೆ.

ಅಲೋಕ್ – ಸುಧಾಕರ್​ ಫೈಟ್​ನಲ್ಲಿ ಪಕ್ಷಕ್ಕೆ ಧಕ್ಕೆಯಾಗಬಾರದು. ಇಬ್ಬರಿಗೂ ಬೇಡ, ವಿಶ್ವನಾಥ್ ಅವರಿಗೇ ಟಿಕೆಟ್ ನೀಡಲು ಬಿಜೆಪಿ ಕಾರ್ಯರ್ತರು ಆಗ್ರಹಿಸಿದ್ದಾರೆ. ಕಾರ್ಯಕರ್ತರ ಆಗ್ರಹದ ಬೆನ್ನಲ್ಲೇ ಸುಧಾಕರ್ ವಿರುದ್ಧ ವಿಶ್ವನಾಥ್ ಸಿಡಿದೆದ್ದಿದ್ದಾರೆ. ಸುಧಾಕರ್​ ಎಲೆಕ್ಷನ್​ ಸೋತು ಜನರಿಂದ ದೂರ ಇದ್ದಾರೆ. ನನ್ನ ಮಗ ಅಲೋಕ್​ ಬೇಡ ಅನ್ನೋದಾದ್ರೆ ನನ್ನನ್ನೇ ಅಭ್ಯರ್ಥಿ ಮಾಡಿ, ನಮ್ಮ ಕ್ಷೇತ್ರದಲ್ಲೇ ಒಂದೂವರೆ ಲಕ್ಷ ವೋಟ್​ ಲೀಡ್​ ಕೊಡ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ.

ಸುಧಾಕರ್ ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡಿದ್ರು ಎಲ್ಲರಿಗೂ ಗೊತ್ತು, ಅಂತಹ ವ್ಯಕ್ತಿಗೆ ಮತ್ತೆ ಅಧಿಕಾರ ನೀಡಿದರೆ ಗೊಂದಲ ಹೆಚ್ಚಾಗುತ್ತದೆ ಎಂದು ಶಾಸಕ ಎಸ್​.ಆರ್​​​.ವಿಶ್ವನಾಥ್​ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮರದ ಕೊಂಬೆ ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿತ : ಖಾಸಗಿ ಶಾಲೆ, BBMP ವಿರುದ್ಧ FIR..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here