ಬೆಂಗಳೂರು : ಉದ್ಯಮಿ ವಿಜಯ್ ಟಾಟಾಗೆ ಬೆದರಿಕೆಯೊಡ್ಡಿದ ಆರೋಪದ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ MLC ರಮೇಶ್ ಗೌಡ ಗೇ ರಿಲೀಫ್ ಸಿಕ್ಕಿದೆ.
ಉದ್ಯಮಿ ವಿಜಯ್ ಟಾಟ ನೀಡಿದ್ದ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ HD ಕುಮಾರಸ್ವಾಮಿ ಹಾಗೂ ಮಾಜಿ MLC ರಮೇಶ್ ಗೌಡ ವಿರುದ್ದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣ ದಾಖಲು ಪ್ರಶ್ನಿಸಿ HDK ಹಾಗು ರಮೇಶ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇಂದು ವಿಚಾರಣೆ ನಡೆಸಿದ ಹೈಕೋರ್ಟ್, “ಪ್ರಕರಣ ನಾನ್ ಕಾಗ್ನೇಜಿಬಲ್ ಎಂದು ಗುರುತು ಮಾಡಿದ ಮೇಲೆ ಯಾಕೆ ಪ್ರಕರಣ ದಾಖಲು ಮಾಡಿದ್ರೀ” ಎಂದು ಅಮೃತಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಅಂಬರೀಶ್ಗೇ ಪ್ರಶ್ನೆ ಮಾಡಿದೆ.
ಪ್ರಕರಣ ದಾಖಲು ಮಾಡುವಂತ ಗಂಭೀರ ಆರೋಪ ಇಲ್ಲ ಎಂದು ಗುರುತು ಮಾಡಲಾಗಿತ್ತು. ಗಂಭೀರ ಪ್ರಕರಣ ಇಲ್ಲದೇ ಇದ್ದರು ಅಮೃತಹಳ್ಳಿ ಪೊಲೀಸರು ಕೇಸ್ ದಾಖಲು ಮಾಡಿದ್ದರು. ಇದೀಗ ಅಮೃತಹಳ್ಳಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ಅಕ್ಟೋಬರ್ 29ಕ್ಕೆ ಪ್ರಕರಣ ಮುಂದೂಡಿದ ಹೈಕೋರ್ಟ್, ಮುಂದಿನ ಆದೇಶದವರೆಗು ಯಾವುದೇ ಕ್ರಮಕೈಗೊಳ್ಳದಂತೆ ಸೂಚನೆ ನೀಡಿದೆ.
ಇದನ್ನೂ ಓದಿ : ಪ.ಬಂಗಾಳ, ಒಡಿಶಾಗೆ ‘ಡಾನಾ’ ಚಂಡಮಾರುತದ ಭೀತಿ – ಹೈ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ..!