Download Our App

Follow us

Home » ಅಪರಾಧ » ಬೆಂಗಳೂರಲ್ಲಿ ಕಾರ್​ ಡ್ರೈವರ್​ನ​​ ಹುಚ್ಚಾಟ – ಮನ ಬಂದಂತೆ ಕಾರು ಓಡಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದ ಭೂಪ ಅರೆಸ್ಟ್..!

ಬೆಂಗಳೂರಲ್ಲಿ ಕಾರ್​ ಡ್ರೈವರ್​ನ​​ ಹುಚ್ಚಾಟ – ಮನ ಬಂದಂತೆ ಕಾರು ಓಡಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದ ಭೂಪ ಅರೆಸ್ಟ್..!

ಬೆಂಗಳೂರು : ನಗರದಲ್ಲಿ ಕಾರ್​ ಡ್ರೈವರ್ ಓರ್ವ​​ ಹುಚ್ಚಾಟ ಮೆರೆದು, ಮನ ಬಂದಂತೆ ಕಾರನ್ನು ಓಡಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದ ಘಟನೆ ಮೇ 21ರಂದು ಬೆಳಗಿನ ಜಾವ ರಾಜಾಜಿನಗರದಲ್ಲಿ ನಡೆದಿದೆ.

ಚಾಲಕ ಅಡ್ಡಾದಿಡ್ಡಿ ಕಾರು ಓಡಿಸಿ ಪಾದಚಾರಿ ಹಾಗೂ ಹಲವು ವಾಹನಗಳಿಗೆ ಗುದ್ದಿದ್ದಾನೆ. ಘಟನೆಯಲ್ಲಿ ಪಾದಚಾರಿ ವೆಂಕಟೇಶ್ ಎಂಬುವವರ ಕೈ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರ್​ ಸೇರಿ ವಾಹನಗಳಿಗೂ ಕಾರು ಡಿಕ್ಕಿ ಹೊಡೆದಿದ್ದು, ಚಾಲಕನ ವಿರುದ್ದ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಸಂಬಂಧ ವಿಜಯನಗರ ಟ್ರಾಫಿಕ್​ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗಾಯಾಳು ವೆಂಕಟೇಶ್ ಪುತ್ರ ನೀಡಿದ ದೂರಿನ ಮೇಲೆ FIR ದಾಖಲಿಸಲಾಗಿದ್ದು, ಕಾರ್​ ಡ್ರೈವರ್​ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಪೆನ್​​​ ಡ್ರೈವ್​​​ ಪ್ರಕರಣ​ – ಪ್ರಜ್ವಲ್​​​​ ರೇವಣ್ಣ ಗನ್​​ಮ್ಯಾನ್​​​, ಕಾರ್​​​ ಡ್ರೈವರ್​​ಗೂ SIT ನೋಟಿಸ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here