ಕೋಲಾರ : ಬಸ್ ಟಿಕೆಟ್ ಕೊಡುವ ವಿಚಾರದಲ್ಲಿ ಕಂಡಕ್ಟರ್ ಮತ್ತು ಹೋಂಗಾರ್ಡ್ ನಡುವೆ ಗಲಾಟೆ ಆಗಿದ್ದು, ರಸ್ತೆ ನಡುವೆಯೇ ಹೋಂಗಾರ್ಡ್ ಅನುದೀಪ್ ಮತ್ತು ಆತನ ಸಹೋದರ ಪ್ರದೀಪ್ ಸೇರಿ ಕಂಡಕ್ಟರ್ನನ್ನು ಕೆಳಗೆ ಬೀಳಿಸಿ ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಗರ ಗ್ರಾಮದಲ್ಲಿ ನಡೆದಿದೆ.
ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಕ್ಕೆ ಕಂಡಕ್ಟರ್ ನಾಗರಾಜಪ್ಪನ ಮೇಲೆ ಹಲ್ಲೆ ನಡೆಸಿದ ಹಿನ್ನಲೆ ಹೋಂಗಾರ್ಡ್ ಅನುದೀಪ್ ಹಾಗೂ ಆತನ ಸೋದರ ಪ್ರದೀಪ್ ಅವರನ್ನು ಬಂಧಿಸಿ, ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಈ ಹಲ್ಲೆಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ ಅಡ್ಡೆಯ ಮೇಲೆ ಪೊಲೀಸರಿಂದ ದಾಳಿ – ಲಕ್ಷಾಂತರ ಮೌಲ್ಯದ ಅನ್ನಭಾಗ್ಯ ಅಕ್ಕಿ ಜಪ್ತಿ..!
Post Views: 216