Download Our App

Follow us

Home » ಸಿನಿಮಾ » ಬೃಂದಾವನ ಸೀರಿಯಲ್ ಅರ್ಧಕ್ಕೆ ನಿಲ್ಲಿಸೋಕೆ ವರುಣ್ ಆರಾಧ್ಯ ಕಾರಣಾನಾ?

ಬೃಂದಾವನ ಸೀರಿಯಲ್ ಅರ್ಧಕ್ಕೆ ನಿಲ್ಲಿಸೋಕೆ ವರುಣ್ ಆರಾಧ್ಯ ಕಾರಣಾನಾ?

ಕಲರ್ಸ್ ಕನ್ನಡದಲ್ಲಿ ಅದ್ಧೂರಿಯಾಗಿ ಆರಂಭವಾದ 32 ಜನರನ್ನು ಒಳಗೊಂಡಿದ್ದ ದೊಡ್ಡ ಕೂಡು ಕುಟುಂಬದ ಕಥೆಯನ್ನು ಹೊಂದಿದ್ದ ಬೃಂದಾವನ ಸೀರಿಯಲ್ ಜನರ ಮನಸ್ಸಿಗೆ ತುಂಬಾ ಹತ್ತಿರ ಆಗಿತ್ತು. ಆದ್ರೆ ಬೃಂದಾವನ ತಂಡ ಒಂದು ವರ್ಷದ ಒಳಗಾಗಿ ತನ್ನ ಕಥೆ ಮುಗಿಸಿದ್ದು, ಸೀರಿಯಲ್ ನೋಡುಗರಿಗೆ ಬೇಸರ ತಂದಿತ್ತು.

ಈ ಸೀರಿಯಲ್​​ ಕಥೆಗಿಂತ ಹೆಚ್ಚಾಗಿ ಪಾತ್ರವರ್ಗದಿಂದ ಸುದ್ದಿಯಾಗಿದ್ದೇ ಹೆಚ್ಚು. ಕಳೆದ ವರ್ಷ ಅಕ್ಟೋಬರ್ ಅಂತ್ಯಕ್ಕೆ ಆರಂಭವಾದ ಈ ಸೀರಿಯಲ್​​ ಕೇವಲ 166 ಎಪಿಸೋಡ್​ಗಳಿಗೆ ಅಂತ್ಯವಾಗಿತ್ತು. ಸೀರಿಯಲ್ ಮುಕ್ತಾಯ ಆಗಿರೋದಕ್ಕೆ ಹಲವರು ಸಂತಸ ವ್ಯಕ್ತಪಡಿಸಿದ್ದರು. ಇನ್ನು ಸ್ವಲ್ಪ ಮಂದಿ ಸೀರಿಯಲ್ ಶುರುವಾಗಿ ಒಂದು ವರ್ಷ ಆಗೋದ್ರೊಳಗೆ ಮುಗಿಸುವ ಹಂತಕ್ಕೆ ಬಂದಿದ್ದಾರಲ್ಲ, ಕೊನೆಗೂ ಮುಗಿಯುತು, ಥ್ಯಾಂಕ್ಯೂ ಕಲರ್ಸ್ ಕನ್ನಡ, ಹೀರೋ ಯಾವಾಗ ಚೇಂಜ್ ಆದ್ರೂ ಆವಾಗ್ಲೇ ಮುಗಿದಿತ್ತು ನಿಮ್ಮ ಕಥೆ. ಈವಾಗ ಅಫೀಶಿಯಲಿ ಮುಗಿತಾ ಇದೆ ಅಷ್ಟೇ, ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಸೀರಿಯಲ್ ಅರ್ಧಕ್ಕೆ ನಿಲ್ಲಿಸೋಕೆ ಎರಡನೇ ಹೀರೋ ವರುಣ್ ಆರಾಧ್ಯ ಕಾರಣಾನಾ? ಹೌದು, ಸೀರಿಯಲ್ ನಿಂತಾಗ ಹಲವರಲ್ಲಿ ಈ ಪ್ರಶ್ನೆ ಇದ್ದೇ ಇತ್ತು. ವರುಣ್ ಆರಾಧ್ಯ ಸೋಷಿಯಲ್ ಮೀಡಿಯಾದಲ್ಲಿ ಚಿರಪರಿಚಿತರಾಗಿದ್ದವರು. ಇತ್ತೀಚೆಗೆ ಬ್ರೇಕಪ್ ವಿಚಾರದಲ್ಲಿಯೇ ಸಿಕ್ಕಾಪಟ್ಟೆ ಸೌಂಡ್​ ಮಾಡಿದ್ದರು. ಹೀಗಾಗಿ ಹಲವರು ವರುಣ್ ಆರಾಧ್ಯ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಸೀರಿಯಲ್​ನ ಮೊದಲ ನಾಯಕ ವಿಶ್ವನಾಥ್ ಪಾತ್ರಕ್ಕೆ ಚಿಕ್ಕವರಾಗಿಯೇ ಕಂಡರು, ಆ ಪಾತ್ರಕ್ಕೆ ಅವರ ನಟನೆ ಅದ್ಭುತವಾಗಿತ್ತು. ಆದರೆ, ವರುಣ್ ಆರಾಧ್ಯಗೆ ನಟನೆ ಅನ್ನುವುದು ಇನ್ನು ಸರಿಯಾಗಿ ಬರುತ್ತಿಲ್ಲ. ಮೊದಲ ಹೀರೋನೆ ಬೆಸ್ಟ್ ಅಂತೆಲ್ಲಾ ಕಮೆಂಟ್‌ಗಳು ಬಂದಿದ್ದವು.

ಇದೀಗ ಈ ಎಲ್ಲಾ ಅನುಮಾನಗಳಿಗೆ ಬೃಂದಾವನ ಸೀರಿಯಲ್​ನ ಡೈರೆಕ್ಟರ್​ ಆಗಿರುವ ಕೆ.ಎಸ್ ರಾಮ್ ​ಜಿ ಅವರು ತೆರೆ ಎಳೆದಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿ, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. “ಬೃಂದಾವನ ಸೀರಿಯಲ್ ಇನ್ನು ಸಾವಿರ ಎಪಿಸೋಡ್ ಕಥೆ ಇತ್ತು. ಕಥೆ ಬರ್ದಾಗ್ಲೆ ಅಷ್ಟು ಪ್ರಿಪರೆಷನ್ ಕೂಡ ಆಗಿತ್ತು. ಆದ್ರೆ ಅನಿವಾರ್ಯ ಕಾರಣಗಳಿಂದ ಕೆಲವೊಂದು ಟೆಕ್ನಿಕಲ್ ವಿಚಾರದಿಂದ ನಾನು ಸೀರಿಯಲ್ ಅರ್ಧಕ್ಕೆ ನಿಲ್ಲಿಸ್ಬೇಕಾಗಿ ಬಂತು” ಎಂದು ಉತ್ತರಿಸಿದ್ದಾರೆ.

ಇನ್ನು ಸೀರಿಯಲ್ ನಿಲ್ಲಿಸೋಕೆ ನಾಯಕನ ಬದಲಾವಣೆನೇ ಕಾರಣಾನಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮ್ ​ಜಿ “ನಾನು ಕೂಡ ಕಮೆಂಟ್ಸ್​ಗಳನೆಲ್ಲ ನೋಡಿದ್ದೇನೆ. ಆ ರೀತಿ ಹೇಳೋದಿಕ್ಕೆ ಆಗಲ್ಲ, ಮೊದಲಿದ್ದ ಹೀರೋ ವಿಶ್ವನಿಗೆ ತುಂಬಾ ಆರೋಗ್ಯ ಸಮಸ್ಯೆ ಬಂದು ಸಣ್ಣ ಆದ, ಹಾಗಾಗಿ ಸ್ವಲ್ಪ ಕಥೆ ಮುಂದೆ ಮುಂದೆ ಹೋದಾಗ ಸನ್ನಿವೇಶಕ್ಕೆ ಮ್ಯಾಚ್ ಆಗ್ತಾ ಇರ್ಲಿಲ್ಲ. ಇನ್ನು ಅವ್ನಿಗೆ ಮಯ್ಯಲ್ಲಿ ಹುಷಾರ್ ಇಲ್ದೆ ಇದ್ದಾಗ ನಾವು ರೆಸ್ಟ್ ಕೊಡದೇ ಕೆಲ್ಸಾ ಮಾಡಿಸೋದು ಸರಿ ಅಲ್ಲ ಅಂತಾ ಅನ್ಸಿ ಬಿಡ್ಬೇಕಾಗಿ ಬಂತು. ಆಮೇಲೆ ರಾತ್ರೋರಾತ್ರಿ ನಾಯಕನಿಗಾಗಿ ಹುಡುಕ್ತಿದ್ದಾಗ ನಮ್ಗೆ ವರುಣ್ ಸಿಕ್ದ. ಅವ್ರಿಗೆ ಕಾಸ್ಟ್ ಮಾಡ್ತು. ಅವರ ವೈಯಕ್ತಿಕ ಬದುಕು ಏನೇ ಆಗಿದ್ರು ನಾನ್​ ಅದಿಕ್ಕೆ ಅಷ್ಟು ಪ್ರಾಮುಖ್ಯತೆ ಕೊಡಲ್ಲ. ನಾನು ಕೂಡ ಕಮೆಂಟ್ಸ್​ಗಳನೆಲ್ಲ ನೋಡ್ದೇ, ತುಂಬಾ ಜನ ಹೇಳಿದ್ರು ಯಾಕ್ ಹಾಕಿದ್ರಿ ಅಂತೆಲ್ಲಾ ಕೇಳಿದ್ರು, ನಾನು ಆ ತರ ಯಾರನ್ನು ದೂರಲ್ಲ, ಪ್ರತಿಯೊಬ್ಬರಿಗೆ ಪ್ರಪಂಚದಲ್ಲಿ ಅವರದ್ದೆ ಆದ ರೆಟ್ಸ್ ಇದೆ. ಬೇರೆ ಯಾರು ಅದ್ನಾ ಇಣುಕಿ ನೋಡ್ಬಾರ್ದು. ಪಾತ್ರದ ಕ್ಯಾರೆಕ್ಟರ್ ಮ್ಯಾಚ್​ ಆಗುತ್ತೆ ಅಂತಾ ನನಿಗೆ​ ಅನ್ಸಿತು. ಅದ್ಕೆ ವರುಣ್​ನ ಆಯ್ಕೆ ಮಾಡಿದ್ವಿ ಅಷ್ಟೇ. ಅದು ನೆಗೆಟಿವ್ ಆಗಿದೇ ಅಂತಾ ಅಂದ್ಕೊಳಲ್ಲ” ಎಂದು ಹೇಳಿ ಎಲ್ಲಾ ಅನುಮಾನಗಳಿಗೂ ತೆರೆ ಎಳೆದಿದ್ದಾರೆ.

ಇದನ್ನೂ ಓದಿ : ಅಮೇಜಾನ್ ಪ್ರೈಮ್​​ನಲ್ಲಿ ‘ಕಲ್ಕಿ 2898 AD’ ಚಿತ್ರದ B & B ಅನಿಮೇಷನ್‌ ಸಿರೀಸ್ : ಬುಜ್ಜಿ – ಭೈರವ ಜುಗಲ್ ಬಂದಿಗೆ ಫ್ಯಾನ್ಸ್ ಫಿದಾ..!

 

 

 

 

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here