Download Our App

Follow us

Home » Uncategorized » ಬಿಜೆಪಿ ಪ್ರತಿಭಟನೆಗೆ ಅರ್ಥವೂ ಇಲ್ಲ, ಕಾರಣವೂ ಇಲ್ಲ : ಡಾ.ಜಿ ಪರಮೇಶ್ವರ್..!

ಬಿಜೆಪಿ ಪ್ರತಿಭಟನೆಗೆ ಅರ್ಥವೂ ಇಲ್ಲ, ಕಾರಣವೂ ಇಲ್ಲ : ಡಾ.ಜಿ ಪರಮೇಶ್ವರ್..!

ಬೆಂಗಳೂರು : ದ್ವೇಷ ರಾಜಕಾರಣ ನಾವು ಮಾಡಿಲ್ಲ, ಹುಬ್ಬಳ್ಳಿಯಲ್ಲಿ ಹಳೆ ಕೇಸ್​ ತನಿಖೆ ಆಗ್ತಿದೆ. ಬಾಬಾಬುಡನ್​ಗಿರಿ ಕೇಸ್​ ಕಾನೂನು ಪ್ರಕ್ರಿಯೆ, ಬಿಜೆಪಿ ಪ್ರತಿಭಟನೆಗೆ ಅರ್ಥವೂ ಇಲ್ಲ, ಕಾರಣವೂ ಇಲ್ಲ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಮಾತನಾಡಿ, ಹುಬ್ಬಳ್ಳಿ ಕೇಸ್​ನಲ್ಲಿ ಯಾರನ್ನೂ ಸಸ್ಪೆಂಡ್ ಮಾಡೋ ಅಗತ್ಯ ಇಲ್ಲ. ಕೋರ್ಟ್ ಸಮನ್ಸ್ ಹೋಗಿದೆ ಕ್ರಮ ತೆಗೆದುಕೊಂಡಿದ್ದಾರೆ, ಬಾಬ ಬುಡನ್ ಗಿರಿ ಕೇಸ್ ರೀ ಓಪನ್ ಮಾಡಿರೋದಲ್ಲ.

ನಾವ್ಯಾಕೆ ರೀ ಓಪನ್ ಮಾಡೋಣ, ಪೊಲೀಸರ ಕ್ರಮ ಇದು. ಬಿಜೆಪಿಯವರು ಕೋರ್ಟ್​ ಆದೇಶಕ್ಕೂ ಗೌರವ ಕೊಡಲ್ವಾ..? ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

9 ಕೇಸ್​ ಇರುವವರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ, ಕೋರ್ಟ್ ಸಮನ್ಸ್ ಹೋಗಿದೆ ಕ್ರಮ ತೆಗೆದುಕೊಂಡಿದ್ದಾರೆ. ಕಾನೂನು ಬಿಟ್ಟು ಏನಾದ್ರೂ ಮಾಡಿದ್ರೆ ಮಾತನಾಡಲಿ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಇದೇ ವೇಳೆ ಸತೀಶ್​ ಜಾರಕಿಹೊಳಿ ಮನೆಯಲ್ಲಿ ಸಚಿವರ ಡಿನ್ನರ್ ವಿಚಾರವಾಗಿ ಮಾತನಾಡಿ, ಸತೀಶ್​ ಜಾರಕಿಹೊಳಿ ಮನೆಯಲ್ಲಿ ನಾವು ಊಟಕ್ಕೆ ಸೇರಿದ್ದೆವು, ನಾವೆಲ್ಲಾ ಒಟ್ಟಾಗಿ ಸೇರಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾವು ಚರ್ಚಿಸಿದ ವಿಚಾರ ಬಹಿರಂಗವಾಗಿ ಹೇಳೋಕಾಗುತ್ತಾ..? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜಕೀಯದವರು ರಾಜಕೀಯ ಬಿಟ್ಟು ಬೇರೆ ಮಾತಾಡೋಕಾಗುತ್ತಾ..? ರಹಸ್ಯ ಸಭೆ ಅದೂ.. ಇದೂ.. ಏನೂ ಇಲ್ಲ ಎಂದಿದ್ದಾರೆ.

ಸತೀಶ್​ ಜಾರಕಿಹೊಳಿ ಮನೆಯಲ್ಲಿ ಸಚಿವರ ಡಿನ್ನರ್​ ಮೀಟಿಂಗ್ : ಸತೀಶ್​ ಜಾರಕಿಹೊಳಿ ಮನೆಯಲ್ಲಿ ಸಚಿವರ ಮಿಡ್​ನೈಟ್​ ಡಿನ್ನರ್​​​ ಭಾರೀ ಕುತೂಹಲ ಕೆರಳಿಸಿದೆ. ಕಳೆದ ರಾತ್ರಿ ಸತೀಶ್​ ನಿವಾಸದಲ್ಲಿ ಒಂದೂವರೆ ಗಂಟೆ ಕಾಲ ಚರ್ಚೆ ನಡೆದಿದೆ.

ಸಚಿವರಾದ ಡಾ.ಜಿ. ಪರಮೇಶ್ವರ್​​, ಕೆ.ಹೆಚ್​. ಮುನಿಯಪ್ಪ, ಹೆಚ್​.ಸಿ.ಮಹಾದೇವಪ್ಪ, ದಿನೇಶ್​ ಗುಂಡೂರಾವ್​​​ ಅವರು ಸತೀಶ್​ ಜಾರಕಿಹೊಳಿ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ​​​ಲೀಡರ್ಸ್​ ಗಳು ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದ್ದಾರೆ.

ಇದನ್ನೂ ಓದಿ : ಮಲ್ಲೇಶ್ವರಂ ಠಾಣೆ ಎದುರು ಸುರೇಶ್​ಕುಮಾರ್ ಧರಣಿ..

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here