Download Our App

Follow us

Home » ರಾಜಕೀಯ » BJP ಚಿಹ್ನೆ ಅಡಿಯಲ್ಲೇ ನಿಲ್ತೇನೆ, JDS ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡಲ್ಲ – ಸಿಪಿ ಯೋಗೇಶ್ವರ್..!

BJP ಚಿಹ್ನೆ ಅಡಿಯಲ್ಲೇ ನಿಲ್ತೇನೆ, JDS ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡಲ್ಲ – ಸಿಪಿ ಯೋಗೇಶ್ವರ್..!

ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗೇಶ್ವರ್ ಇದೀಗ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, BJP ಚಿಹ್ನೆ ಅಡಿಯಲ್ಲೇ ನಿಲ್ತೇನೆ, JDS ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡಲ್ಲ. ಬಿಜೆಪಿ ಚಿಹ್ನೆ ಅಡಿ ಸ್ಪರ್ಧೆಗೆ ಅವಕಾಶ ಕೇಳಿದ್ದೇನೆ, ಟಿಕೆಟ್ ಸಿಗದೇ ಇದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯಿದೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಮನಸ್ಸಿನಲ್ಲಿ ಅವರ ಮಗ ನಿಖಿಲ್​ಗೆ ಟಿಕೆಟ್ ಕೊಡಬೇಕೆಂದು ಆಸೆ ಇದೆ. ಅವರ ಮನಸಲ್ಲೇ ಆತರಹ ಇದ್ದರೆ ಏನು ಮಾಡೋದಕ್ಕೆ ಆಗುತ್ತದೆ? ನಿಖಿಲ್​ ನಿಲ್ತಾರೆ ಅಂತ ಜೆಡಿಎಸ್​ ಜಿಲ್ಲಾಧ್ಯಕ್ಷರೂ ಹೇಳಿದ್ದಾರೆ. ನಾಳೆ ನಾನು ಬೆಂಬಲಿಗರು, ಕಾರ್ಯಕರ್ತರ ಸಭೆ ಕರೆದಿದ್ದೇನೆ. ಸ್ವತಂತ್ರವಾಗಿ ನಿಲ್ಲುವ ಮನಸ್ಸೂ ನನಗಿದೆ. 15 ವರ್ಷ ಬಿಜೆಪಿಯಲ್ಲಿದ್ದು ಡಿಕೆ, ಹೆಚ್​ಡಿಕೆ ಜೊತೆ ಗುದ್ದಾಡಿದ್ದೇನೆ. ಈಗ ಜೆಡಿಎಸ್ ಚಿಹ್ನೆ ಅಡಿ ನಿಲ್ಲಲು ನನ್ನ ಮನಸ್ಸು ಒಪ್ತಿಲ್ಲ. ನಮ್ಮ ಕಾರ್ಯಕರ್ತರು, ಬೆಂಬಲಿಗರೂ ಬೇಡ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಯಡಿಯೂರಪ್ಪ ಈಗ ಹೇಳಿಕೆ ಕೊಡುವ ಅಗತ್ಯ ಇರಲಿಲ್ಲ. ಅವರು ಉದ್ದೇಶಪೂರ್ವಕ ಹೇಳಿಕೆ ಕೊಟ್ಟಿದ್ದಾರೆ. ಅವರ ಮೂಲಕ ಯಾರೋ ಈ ರೀತಿ ಹೇಳಿಕೆ ಕೊಡಿಸಿದ್ದಾರೆ. ಯಡಿಯೂರಪ್ಪ ಅವರನ್ನು ದೂರುವುದರಲ್ಲಿ ಅರ್ಥ ಇಲ್ಲ. ನಾಳೆ ನಡೆಯುವ ಸಭೆಯಲ್ಲೇ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಬೆಂಗಳೂರಿನಲ್ಲಿ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಸಿಪಿವೈ ಹೇಳಿದ್ದಾರೆ.

ಇದನ್ನೂ ಓದಿ : ಮೆಜೆಸ್ಟಿಕ್ 2 ಸಿನಿಮಾದ ಚಿತ್ರೀಕರಣ ಮುಕ್ತಾಯ – ರಿಲೀಸ್‌ ಯಾವಾಗ?

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಮುಂದುವರಿದ ವರುಣಾರ್ಭಟ – ಮಳೆ ಅಬ್ಬರಕ್ಕೆ ಹಲವೆಡೆ ಧರೆಗುರುಳಿದ ಬೃಹತ್​ ಮರಗಳು..!

ಬೆಂಗಳೂರು : ಕರ್ನಾಟಕ ರಾಜಧಾನಿ ಬೆಂಗಳೂರು ಭಾರೀ ಮಳೆಗೆ ಅಕ್ಷರಶಃ ನಲುಗುತ್ತಿದೆ. ಸಂಜೆ ಸುರಿಯುತ್ತಿರೋ ವರ್ಷಧಾರೆಗೆ ಬೆಂಗಳೂರಿಗರು ತತ್ತರಿಸುತ್ತಿದ್ದರೇ, ಇನ್ನೊಂದೆಡೆ ಮಳೆ ಅಬ್ಬರಕ್ಕೆ ಹಲವೆಡೆ ಬೃಹತ್​ ಮರಗಳು

Live Cricket

Add Your Heading Text Here