Download Our App

Follow us

Home » ರಾಜಕೀಯ » ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್​​ಗೆ ಬಿಗ್ ಶಾಕ್ : ಬಿಜೆಪಿ ನಾಯಕರ ನಡುವೆಯೇ ಮುಸುಕಿನ ಗುದ್ದಾಟ..!

ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್​​ಗೆ ಬಿಗ್ ಶಾಕ್ : ಬಿಜೆಪಿ ನಾಯಕರ ನಡುವೆಯೇ ಮುಸುಕಿನ ಗುದ್ದಾಟ..!

ಬೆಂಗಳೂರು : ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್ ಮಂಜುನಾಥ್​ಗೆ ಬಿಗ್ ಶಾಕ್ ಎದುರಾಗಿದೆ. ಬೆಂಗಳೂರು ಗ್ರಾಮಾಂತರ ಬಿಜೆಪಿ ಒಳ ಜಗಳದಿಂದಾಗಿ ಡಾ.ಮಂಜುನಾಥ್ ಅವರು ವಿಲವಿಲ ಒದ್ದಾಡುತ್ತಿದ್ದಾರೆ. ಬಿಜೆಪಿ ನಾಯಕರ ನಡುವೆಯೇ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಒಬ್ಬರು ಬಂದ್ರೆ ಮತ್ತೊಬ್ಬರು ಮಂಜುನಾಥ್ ಪರ ಪ್ರಚಾರಕ್ಕೆ ಬರ್ತಿಲ್ಲ. ಹಾಗಾಗಿ ಡಾ.ಸಿ.ಎನ್.ಮಂಜುನಾಥ್​​ಗೆ ಭಾರೀ ಇರಿಸು-ಮುರಿಸು ಉಂಟಾಗಿದೆ.

ಪ್ರಚಾರದ ನೇತೃತ್ವ ಯಾರು ವಹಿಸಬೇಕು ಅನ್ನೋ ವಿಷಯಕ್ಕಾಗಿ ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ್, ಎಂ.ಕೃಷ್ಣಪ್ಪ ನಡುವೆ ಅಸಮಾಧಾನ ಉಂಟಾಗಿದೆ. ಆರ್.ಅಶೋಕ್ ಬಂದ್ರೆ ಎಂ.ಕೃಷ್ಣಪ್ಪ ಬರ್ತಾ ಇಲ್ಲ, ಎಂ.ಕೃಷ್ಣಪ್ಪ ಬಂದ್ರೆ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಬರ್ತಾ ಇಲ್ಲ. 5 ಲಕ್ಷ ವೋಟ್​ ಪಡೆದಿದ್ದ ತುಳಸಿ ಮುನಿರಾಜು ಹತ್ತಿರಕ್ಕೂ ಬರ್ತಾ ಇಲ್ಲ. ಹೊರಗಿನ ನಾಯಕರು ಬಂದ್ರೆ ಬಿಜೆಪಿ ಕಾರ್ಯಕರ್ತರೇ ಬರಲ್ಲ. ನಾಯಕರದ್ದೇ ಒಂದು ಗುಂಪು, ಕಾರ್ಯಕರ್ತರದ್ದೇ ಇನ್ನೊಂದು ಗುಂಪು ಸೃಷ್ಠಿಯಾಗಿದೆ.

ಬಿಜೆಪಿಯ ಗುಂಪು ರಾಜಕಾರಣದಲ್ಲಿ ಡಾ.ಸಿ.ಎನ್.ಮಂಜುನಾಥ್ ಹೈರಾಣಾಗಿದ್ದಾರೆ. ಮತ್ತೊಂದೆಡೆ ಚನ್ನಪಟ್ಟಣದಲ್ಲಿ ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ತಿದ್ದು, ಈಗಾಗಲೇ 10ಕ್ಕೂ ಹೆಚ್ಚು ನಗರಸಭೆ ಸದಸ್ಯರು ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ : ‘ಬಡವ್ರ ಮಕ್ಳೂ ಬೆಳಿಬೇಕು ಕಣ್ರಯ್ಯ’ ಡಾಲಿ ಹೇಳಿದ ಮಾತು ಈಗ ಸಿನಿಮಾದ ಶೀರ್ಷಿಕೆ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here